ಆ ಮಗು ಹಾಗಾದುದೇ ಒಂದು ರೀತಿಯಲ್ಲಿ ಒಳ್ಳಿತಾಯಿತಲ್ಲವೆ?
ಅದನ್ನೊಂದು ಮರೆತು ಬಿಡುವ ಅಧಾಯವೆಂದು ಮನಸ್ಸಿನ ಆಳಕ್ಕೆ ತಳ್ಳಿ, ಮತ್ತೆ ಸಮಾಜದ ಕಣ್ಣಿನಲ್ಲಿ ಒಳ್ಳೆಯವಳಾಗಿ ಆಕೆ ಕಾಣಿಸಿಕೊಳ್ಳುವುದು ಇನ್ನು ಸಾಧ್ಯವಿದೆಯಲ್ಲವೆ ?
ಮತು ಕ್ಷಣವೆ, ಮಗುವಿನ ಸಾವಿನಲ್ಲಿ ಲಾಭಕಾಣುವ ತಮ್ಮಯೋಚನೆ
ನಾಚಿಕೆಗೇಡಿನದೆಂದು ಅವರಿಗೇ ತೋರುತಿತ್ತು.
...ಸರನಮ್ಮ ಕೊಠಡಿಯಲ್ಲಿ ಕುಳಿತು ಬರೆಯುತಿದ್ದ ಆ ಬೆಳಿಗ್ಗೆ,
ತುಂಗಮ್ಮ ತಾನು ಬಗೆಹರಿಸಲಾಗದ ಉಳಿದಿದ್ದೊಂದು ಸಮಸ್ಯೆಯೊಡನೆ ಒಳಬಂದಳು.
" ದೊಡ್ಡಮ್ಮ ,ತೋಟದೊಂದ ಯಾರು ಹೂಕೀಳಬಾರದೂಂತ
ನಿಯಮ ಇದೆ ಅಲ್ವೆ? "
"ಹೌದು ಯಾಕೆ -ಯಾರು ಕೀತ್ತರು ?"
" ಯಾರೂ ಇಲ್ಲಪ್ಪ, ಸುಮ್ನೆ ನಾನೇ ವಿಚಾರಿಸ್ಥೆ,
" ಹೂ ಜಾಸ್ತಿ ಇದಾಗ ನಾನೇ ಕಿತ್ತು ಎಲ್ರಿಗೂ ಕೊಡ್ರೀ
ನಲ್ಲ?”
" ಅಯ್ಯೋ, ಅದಕ್ಕಲ್ಲ ದೊಡ್ಡಮ್ಮ ಕೇಳಿದ್ದು"
" ಮತ್ತೆ?"
"ಆಫೀಸುರೂಮ್ನಲ್ಲಿ ಮೇಜಿನಮೇಲೆ ದಿನಾಗಲೂ ಹೊಸ ಹೂ ಇರ
ಬೇಡ್ವೆ, ದೊಡ್ಡಮ್ಮ?”
" ಓ ! ಯಾರು ಬೇಡ ಅಂದೋರು ?"
" ಯಾಕೆ ಇಟ್ಟಿಲ್ಲ ಮತ್ತೆ?”
" ಹಿಂದೆ ನಾಲ್ಕು ದಿನ ಇಟ್ಟಿದ್ವಿ ತುಂಗ. ಆದರೆ
ಹೂದಾನಿಯಿಂದ್ದೇ ಅದನ್ನ ಎಗರಿಸ್ತಿದ್ದು ಯಾರಾದ್ರೂ..ಎತ್ಕೋಂಡೋರು ಮುಡೀತಲೂ ಇದ್ದಿಲ್ಲ ಇರ್ಲಿಲ್ಲ ಅದನ್ನ . ಎಲ್ಲಾದ್ರೂ ಹಿಚಕಿ ಎಸೀತಿದ್ರು.?”
" ಅಯ್ಯೋ ? ಅಂಥವೂ ಇದಾರಾ?”
" ಯಾಕೆ - ಎಲ್ಲೂ ನಿನ್ನ ಹಾಗೇನೇ ಅಂತ ತಿಳಕೊಂಡೈನು?”
ಆಫೀಸು ರೂಮ್ನಲ್ಲಿ ಮೇಜಿನ್ಮೇಲೆ ಯಾವಾಗ್ಲೂ ಹೂದಾನಿ ಇದ್ರೆ.