ಸರಸಮ್ಮನಿಗೆ ಗೊತ್ತಿತ್ತು.ಹುಡುಗಿಯರಿಗೂ ತಿಳಿದಿತ್ತು ಆ ವಿಷಯ.
ಆಕೆ ಕಸಬಿನವಳು.ಆದರೆ ಆಕೆ ಆ ಜೀವನದಿಂದ ತಪ್ಪಿಸಿಕೊಂಡು,
ಬಂದಿದ್ದಳು. ಪೋಲಿಸರು ನಡುರಾತ್ರೆಯಲ್ಲಿ ಬೀದಿಯಲ್ಲಿ ಒಬ್ಬಂಟಿಗ
ಳಾಗಿಯೆ ಇದ್ದ ಆಕೆಯನ್ನು ಹಿಡಿದಾಗ ಪ್ರತಿಭಟನೆ ಇರಲಿಲ್ಲ ತಪ್ಪಿಸಿಕೊಂಡು
ಹೋಗುವ ಯತ್ನವಿರಲಿಲ್ಲ.ಅಭಯಧಾಮಕ್ಕೆ ಸೇರಿಸಲ್ಪಟ್ಟಾಗಲಂತೂ
ಆಕೆಗೆ ಸಂತೋಷವಾಗಿತ್ತು.
ಈ ನೃತ್ಯ ಕಸಬಿನ ಮನೆಯಲ್ಲಿ ಆಕೆ ಕಲಿತ ಕಲೆ.
ಝಣಕ್ ಝಣಕ್....ಜಣಿರ್ ಜಣಿರ್....ಐ....ಟಣಕ್ ಟಣಕ್....
ಆ ನಾದಮಾಧುರ್ಯದ ಗುಂಗಿನಲ್ಲಿ ತುಂಗಮ್ಮ ಜಲಜೆ ಲಲಿತೆಯರೆಲ್ಲ
ಕುಳಿತು,ತಮ್ಮೆದುರು ನೋಡಿಬೀಸುತಿದ್ದ ಸೊಬಗಿಗೆ ಮಾರುಹೋದರು.
ಮುಗುಳುನಗು,ಹುಬ್ಬುಗಳ-ಎದೆಯ ಕುಣಿತ,ಹಾವಿನಂತೆ-ಬಳ್ಳಿಯಂತೆ
ಬಳುಕಿ ಬಾಗುತ್ತಿದ್ದ ದೇಹ...
ಶಾಸ್ತ್ರೀಯವಲ್ಲದ ನೃತ್ಯ ನಿಜ.ಆದರೆ ನೋಡುತಿದ್ದ ಪ್ರಿಯ
ತಮವನ್ನು-ವಿಟನನ್ನು-ಹುಚ್ಚನಾಗಿ ಮಾಡುವ ಸಾಮರ್ಥ್ಯವಿತ್ತು
ಅದಕ್ಕೆ.
ನೃತ್ಯ ನೋಡಿ ಸರಸಮ್ಮ, ಸುಮತಿಯ ಪಾದಗಳ ಚಲನೆಯನ್ನೇ
ದಿಟ್ಟಿಸುತ್ತ ಕುಳಿತರು.
ಆ ಬಳಿಕ ಕುರುಡಿ ಸುಂದ್ರಾ ಹಾಡು:
"ಎಲ್ಲಿರುವೆ ರಂಗ ಬಾರೋ...."
ರಾಧಾಹಾಡಿದಳು:
"....ನಾನು ನಿಮ್ಮಯ ದಾಸನಹುದು;ನೀವು ಈ ಜಗದೀಶನಹುದು
...ನಾನಿನ್ನ ದಾಸನಯ್ಯ...."
ಮತ್ತೆ ಸುಮತಿಯ ಬೇಟೆಗಾತಿಯ ಕುಣಿತ....
ಬೇಟೆಗಾರನಿರಲಿಲ್ಲ...ಅದರೆ ಸುಮತಿ ಲಲಿತೆಯತ್ತ ಕುಡಿನೋಟ
ಬೀರುತಿದ್ದಳು.ಲಲಿತ ನಿಶ್ಚಲಳಾಗಿದ್ದಳು.ಆದರೆ ಅದನ್ನು ನೋಡಿದ
ಬೇರೆ ಹುಡುಗಿಯರು ಹಲವರ ಮುಖಗಳು ಕೆಂಪಗಾದವು.
ಕೊನೆಯದಾಗಿ ಸುಮತಿ ಕೃಷ್ಣನಾಗಿ ಕುಣಿದಳು...ಕೊಳಲನೂದುವ