ಪುಟ:Abhaya.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೪

ಅಭಯ

ತಮ್ಮ ಬಳಿಯಲ್ಲೆ ಕುಳಿತಿದ್ದ ಮಗನನ್ನೆ ನೋಡುತ್ತ ತಂದೆಯಂದರು:
"ಇಲ್ಲವಮ್ಮ ನಿನ್ನ ಕಾಹಿಲೆ ವಿಷಯ ನದ್ದೂಗೆ ಬರೀಲೆ ಇಲ್ಲ.
ಜೂನ್ ತಿಂಗಳಲ್ಲಿ ನಾನೇ ಹೋಗೋಣಾಂತಿದೀನಿ....."
ತನ್ನ ಈ ಅಕ್ಕ ಕಾಹಿಲೆ ಮಲಗಿದ್ದಳು ಹಾಗಾದರೆ ಎಂದುಕೊಂಡು
ತಮ್ಮ ಗುಣಮುಖಳಾಗಿದ್ದ ಆಕೆಯನ್ನು ಮುಟ್ಟಿ ನೋಡುವ ಆಸೆಯಾಯಿತು
ಅವನಿಗೆ.
"ರಿಟೈರಾಯ್ತಲ್ಲಣ್ಣ? ಇನ್ನೇನ್ಮಾಡ್ಬೇಕೂಂತಿದೀರಾ?"
ಆ ಪ್ರಶ್ನೆಯನ್ನು ತಾವೇ ಮಗಳಿಗೆ ಕೇಳಬೇಕೆಂದು ಆ ತಂದೆ
ಬಂದಿದ್ದರು. ಆದರೆ, ತಮಗಿಂತ ಮುಂದಾಗಿ ಮಗಳೇ ಅದನ್ನು ಕೇಳಿದ್ದಳು.
ಆದರೆ ಆ ಪ್ರಶ್ನೆಗೆ ನೇರವಾದ ಉತ್ತರವನ್ನೀಯುವುದು ಸುಲಭ
ವಾಗಿರಲಿಲ್ಲ.
"ತುಮಕೂರು ಬಿಟ್ಬಿಡೋಣ್ವೇ ತುಂಗ?"
ತುಂಗಮ್ಮನಿಗೆ ತಿಳಿದಿತ್ತು. ತನ್ನಿಂದಾಗಿಯೇ ಆ ತೀಮಾನಕ್ಕೆ ತಂದೆ
ಬಂದಿದ್ದರು.ಅದರಲ್ಲಿ ಸಂದೇಹವಿರಲಿಲ್ಲ.
ಆ ತಮ್ಮನಿಗೋ-ಅದು ಆಶ್ಚರ್ಯವನ್ನುಂಟುಮಾಡಿದ ಹೊಸ
ವಿಷಯ. ಆಗಲೆ ಅವನ ಮನಸ್ಸು, ತುಮಕೂರನ್ನು ಬಿಟ್ಟು ಮುಂದೆ ತಾವು
ಹೋಗಲಿರುವ ಊರನ್ನು ಚಿತ್ರಿಸಿಕೊಳ್ಳತೊಡಗಿತು.
"ಯಾಕಣ್ಣ ?"
"ಯಾಕೊ ಬೇಜಾರು. ರಿಟೈರಾದಮೇಲೆ ಆ ಊರಲ್ಲಿ ಇರೋಕೆ
ಇಷ್ಟವಿಲ್ಲ."
ಆ ಮಾತಿನಲ್ಲಿ ಸ್ವಲ್ಪ ಸತ್ಯಾಂಶವೂ ಇತ್ತು. ಆದರೆ ಅದು ಬಲು ಸ್ವಲ್ಪ.
ನಿಜವಾದ ಕಾರಣವನ್ನು ಅವರು ಹೇಳಲಿಲ್ಲ. ಆದರೆ, ಅವರು ಹೇಳದೆ
ಇದ್ದರು, ತುಂಗಮ್ಮ ತಿಳಿದುಕೊಂಡಳು.
"ತುಮಕೂರು ಬಿಟ್ಟು ಎಲ್ಲಿರೋದೂಂತ ?
"ಯಾವುದಾದರೂ ಒಂದೂರಲ್ಲಿ. ಅಂತೂ ಪುಟಾಣಿ ಓದಿಗೆ ಅನು
ಕೂಲವಾಗೋ ಹಾಗೆ ಹೈಸ್ಕೂಲು ಇದ್ದರಾಯಿತು."
"ಬೆಳಗಾಂವಿಗೆ ಹೋಗಿ ಪದ್ದಕ್ಕನ ಮನೇಲಿ ಇರ್‍ತೀರಾ ?"