೧೮೦ ಅಭಯ
ವಾದ ಮಾತುಗಳು...ಅಭಯಧಾಮಕ್ಕೆ ಸರಕಾರವೂ ಸಾರ್ವಜನಿಕರೂ ನೀಡುತಿದ್ದ ನೆರವು...ಸಮಾಜದಲ್ಲಿ ಅಧೋಗತಿಗಿಳಿಯುತಿದ್ದ ನೀತಿಯ ಮಟ್ಟ.
ಏನನ್ನು ಮಾತನಾಡಿದರೂ ತಮ್ಮದೇ ಪ್ರಶ್ನೆ ಮತ್ತೆ ಮತ್ತೆ ತುಂಗಮ್ಮನ ತಂದೆಯ ಕಣ್ಣೆದುರು ಬಂದು ನಿಲ್ಲುತಿತ್ತು.
“ ಹೀಗಾಗುತ್ತೇಂತ ನಾನು ಭಾವಿಸಿರ್ಲಿಲ್ಲ ಅಮ್ಮ..
ಆ ಹೆಣ್ಣಿನ ತಂದೆಗೆ ಮನಸ್ಸಮಾಧಾನವಾಗುವಂಶಹದೇನನ್ನಾದರೂ ಹೇಳಬೇಕೆಂದು ಸರಸಮ್ಮ ಅಪೇಕ್ಷೆ ಪಟ್ಟರು.
« ನೀವು ತಪ್ಪುತಿಳೀಬಾರ್ದು. ನಿಮ್ಮ ಮಗಳು ಒಳ್ಳೆಯವಳು. ಏನೋ ಅಚಾತುರ್ಯದಿಂದ ಹಾಗಾಯ್ತು ನಂಬಿಕೆ-ಮೋಸ. ಏನ್ಮಾಡೋದ ಕ್ಕಾಗತ್ತೆ ಹೇಳಿ?...ಆದರೆ ಇಷ್ಟು ಮಾತ್ರ ನಿಜ ಆಕೆ ಸದ್ಗುಣ ಸಂಪನ್ನೆ. ಆಕೆಯ ತಾಯ್ತಂದೆಯರು ಭಾಗ್ಯವಂತರು.”
“ ಒಳ್ಳೇ ಹೇಳಿದಿರಿ!”
__ಎಂದರು ತುಂಗಮ್ಮನತಂದೆ ಒಣನಗೆನಕ್ಕು.
ಸರಸಮ್ಮನ ಸ್ವಾಭಿಮಾನವನ್ನು ಕೆಣಕಿದಂತಾಯಿತು
« ಯಾಕೆ ಹಾಗಂತೀರಾ? ಸಭ್ಯ ಗೃಹಸ್ಥರು ಅನ್ನಿಸಿಕೊಂಡ ದೊಡ್ಡೋರ ನೂರು ಮನೆತನಗಳ ಸಾವಿರ ಹುಳುಕು ತೋರಿಸಿ ಕೊಡ್ಲೇನು? ದುಡ್ಡಿದೆ, ಪ್ರಭಾವ ಇದೆ, ಅಂತ ಮುಚ್ಚೊಂಡು ಹೋಗುತ್ತೆ!"
ತುಂಗಮ್ಮನ ತಂದೆ ತಲೆದೂಗಿದರು. ಸರಸಮ್ಮ ಆಡಿದ ಮಾತು ನಿಜವಾಗಿತ್ತು.
....ತನ್ನ ಮಗಳ ಬಾಳ್ವೆಯ ಆ ಪ್ರಕರಣವನ್ನೂ ಹಾಗೆಯೇ ಸುಲಭ ವಾಗಿ ಮುಚ್ಚಿಕೊಂಡು ಹೋಗುವುದು ಸಾಧ್ಯವಾಗಿದ್ದರೆ?
“ಅಮ್ಮ, ಏನೇನಾಯ್ತೂಂತ ತುಂಗ ಎಲ್ಲ ಹೇಳಿದಾಳಾ ?”
"ಹೇಳಿದಾಳೆ. "
" ಹೆರಿಗೆ__"
" ಸುಲಭವಾಗಿರ್ಲಿಲ್ಲ. ಸಾಧ್ಯವಿರೋದನ್ನೆಲ್ಲಾ ಮಾಡಿದ್ವಿ....ಮಗೂನ ಉಳಿಸಿಕೊಳ್ಳೋದಕ್ಕಾಗ್ಲಿಲ್ಲ."