ವಿಷಯಕ್ಕೆ ಹೋಗು

ಪುಟ:Abhaya.pdf/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೫೦
ಅಭಯ

ಆ ಹುಡುಗಿಯನ್ನು ತಾಯಿ ಮತ್ತು ಅಣ್ಣನೊಡನೆ ಆ ಕೊಠಡಿಯಲ್ಲಿ ಬಿಟ್ಟು ಕಾರ್ಯರ್ಶಿನಿ ಆಫೀಸು ರೂಮಿಗೆ ಬಂದರು.

" ಹೆಸರು ಏನೂಂತ ಬರಕೊಳ್ಳೋಣ?”

–ಎ೦ದು ಕೇಳಿದರು ಸರಸಮ್ಮ.

"ಏನಾದರೊಂದು ಬರಕೊಂಡ್ಬಿಡೀಪ್ಪಾ. ಇದೊಳ್ಳೆ ಗೋಳು ! ಇದೊಳ್ಳೆ ಸಮಾಜಸೇವೆ! ಅಂತೂ ಬಾಡಿಗೆಮನೆ ಕೆಟ್ಟೋಯ್ತು ಈ ಅಭಯಧಾಮ."

ಎದುರಲ್ಲಿ ಅಷ್ಟೊಂದು ವಿನಯದಿಂದ ಅವರೊಡನೆ ವರ್ತಿಸುತಿದ್ದವರು, ಅವರಿಂದ ದೂರ ಉಳಿದಾಗ ಬೇಸರ ವ್ಯಕ್ತಪಡಿಸುತ್ತ ಮುಖ ಒರೆಸಿಕೊಂಡರು

ಸರನಮ್ಮನಿಗೂ ಅದು ತಿಳಿದಿತ್ತು, ಆದರೆ ಅದಕ್ಕೆಲ್ಲ ಒಪ್ಪದೆ ಬೇರೆ ಹಾದಿ ಇರಲಿಲ್ಲ, ಸಮಾಜದಲ್ಲಿನ ಪ್ರತಿಷ್ಠಿತರ ಹಣಸಹಾಯದ ಆಧಾರದ ಮೇಲೇಯೇ ಮುಖ್ಯವಾಗಿ ನಡೆದಿತ್ತು ಆ ಅಭಯಧಾಮ ಎಲ್ಲಾದರೂ ಒಂದೆಡೆ ಅಗೌರವವಾದರೂ ಸಾಕು,ಆಡಳಿತ ಸಮಿತಿ ಮುರಿದು ಮಣ್ಣುಪಾಲಾದ ಹಾಗೆಯೇ.

ಆ ಯುವಕ ಬಂದು ಹೇಳಿದ;

" ಇನ್ನು ಹೊರಡಬಹುದೇ ಅಂತ ಮಮ್ಮಿ ಕೇಳ್ತಾರೆ."

"ಕೊಠಡಿಯಲ್ಲಿ ಹುಡುಗಿ ತಾಯಿಯಮಡಿಲಲ್ಲಿ ಮುಖವಿಟ್ಟ ಅತ್ತಳು;

ಮಮ್ಮೀ!ಮಮ್ಮೀ!'

"ಅಳಬೇಡ ಮಗೂ...ಆದಷ್ಟು ಬೇಗನೆ ಮನೆಗೆ ಕರಕೊಂಡು ಹೋಗ್ತೀವಿ”

" ಹಿ..ಹಿ .. ದಿಗಿಲಾಗುತ್ತಮ್ಮ ...”

" ಇಲ್ಲಿರೋ ಜನರಿಗೆ ಹೇಳ್ತೀನಿ ನಿನಗೇನೂ ಕೊರತೆ ಆಗದ ಹಾಗೆ ನೋಡೋತಾರೆ."

ಹುಡುಗಿ ಅಳು ನಿಲ್ಲಿಸಿದಳು.

ಡ್ರೈವರ್, ಕಾರ್ಯದರ್ಶಿನಿ ಮತ್ತು ಆ ಯುವಕ ಹೊರಗೆ ಅಂಗಳಕ್ಕಿಳಿದ ಮೇಲೆ, ಹುಡುಗಿಯ ತಾಯಿಯೊಬ್ಬರೇ ಸರಸಮ್ಮನೆಡೆಗೆ ನಡೆದು ಬಂದರು.