ಈ ಪುಟವನ್ನು ಪ್ರಕಟಿಸಲಾಗಿದೆ
'
ಅಭಯ
೩೦೧
ಘಾಟಿ ಹುಡುಗಿ. ನಿರಾಶೆಯಧ್ವನಿ ಬರಿಯನಟನೆ ಕಣ್ಣುಗಳಲ್ಲಿ ತುಂಟತನ ಮಿಂಚುತಿತ್ತು. ಆದರೆ ಸೋಮಶೇಖರ ವಿಮನಸ್ಕನಾಗಿದ್ದ. ಅವನಿಗೇನೂ ಅರ್ಥವಾಗಲಿಲ್ಲ. " ಯಾಕೆ ? ಅಭಯಧಾಮಕ್ಕೆ ಬಂದಾಗ ನಿಮ್ಮನ್ನ ಕಾಣ್ತೀನಲ್ಲ." " ಓ ! ಅಭಯಧಾಮಕ್ಕೆ ಬರ್ತಾನೇ ಇರ್ತೀರೇನು ?" ಆ ಪ್ರಶ್ನೆಯ ಜತೆಯಲ್ಲೆ ಅಣಕಿಸುವ ನಗುವಿತ್ತು. ಈಗ ಸೋಮಶೇಖರ ಎಚ್ಚರಗೊಂಡ ಅವನ ಮುಖ ಕೆಂಪೇರಿತು ಆ ಸಂಭಾಷಣೆ ತುಂಗಮ್ಮನಿಗೆ ಬಲು ಪ್ರಿಯನಾಗಿ ಕಂಡಿತು. ಆ ಸಂಜೆ ಆತ ಸೈಕಲು ತಂದಿರಲಿಲ್ಲ. ಆಸ್ಪತ್ರೆಯ ಹೆಬ್ಬಾಗಿಲು ದಾಟ್ಟುತ್ತ ಅವನೆಂದ : " ನಡಕೊಂಡು ಹೋಗೋಣವೆ ?" ಆಕೆ ಬೇಡವೆನ್ನಲಿಲ್ಲ ಇಬ್ಬರೂ ಬೀದಿಯುದ್ದಕ್ಕೂ ನಡೆದರು. ತುಂಗಮ್ಮನ ಎದೆ ಡವಡವನೆ ಹೊಡೆದುಕೊಂಡಿತು. ಗುರುತಿನವರು ಈಗ ಯಾರಾದರೂ ತಮ್ಮನ್ನು ಕಂಡರೆ ? ಮಾವಳ್ಳಿ ಮನೆಯವರು ? ಅಥವಾ ತುಮಕೂರಿನವರು ಯಾರಾದರೂ? ದೀಪಗಳು ಹತ್ತಿಕೊಂಡು, ಇನ್ನು ಕತ್ತಲು- ಎಂದು ಸೂಚಿಸಿದುವು. ಸೋಮಶೇಖರ, ನಡೆಯುತ್ತಲಿದ್ದ ತುಂಗಮ್ಮನ ವಾದಗಳನ್ನ ದಿಟ್ಟಿಸಿ ಹೇಳಿದ : " ನೀವು ಚಪ್ಪಲಿ ಯಾಕ್ರಿ ಹಾಕ್ಕೊಳ್ಳೊಲ್ಲ ?" " ಅಭಯಧಾಮದಲ್ಲಿ ದೊಡ್ಡಮ್ಮನ್ನ ಬಿಟ್ಬಿಟ್ಟು ಬೇರೆ ಯಾರೂ ಹಾಕ್ಕೊಳ್ಳೊಲ್ಲ" " ಸಹಾಯಿಕೇನೂ ಹಾಕ್ಕೋಬಾರದೂಂತ ನಿಯಮ ಇದೆಯೇನು ?" " ಛೆ ! ಛೆ ! ನಾನು ಏನುಬೇಕಾದರೂ ಕೊಂಡ್ಕೋಬಹುದೂಂತ ದೊಡ್ಡಮ್ಮ ಹೇಳಿದಾರೆ. ನಾನೆ ಬೇಡ ಅಂತ ನುಮ್ಮನಿದೀನಿ." ಸೋಮಶೇಖರನಿಗೆ ಅರ್ಥವಾಯಿತು. ಅದು ಜಿಪುಣತನವಾಗಿರಲಿಲ್ಲ.