ವಿಷಯಕ್ಕೆ ಹೋಗು

ಪುಟ:Aramane.pdf/೬೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಳ್ಳೊಳಗೆ ಸೋಭಾಯ ಮಾನವಾಗಿರುವ ಮುತ್ತಿನಹಾರವನ್ನೂ ಪೀಠಿಕಾ ಪ್ರಕರಣವಾಗಿ ಪ್ರಸ್ತಾಪಿಸಿದೊಡನೆ ಮರೇಲಿ ಅಡಗಿ ಕೂತಿದ್ದ ಗರುಡನ ಕಿವಿಗಳು ಜುಮ್ಮೆಂದವು.. ಅದು ಮಯ್ಯಿ ತುಂಬ ಕಿವಿಮುಡಿದು ಕೊಂಡು ಅವರ ಮಾತುಕತೆಯತ್ತ ನಿಗಾಯಿಟ್ಟಿತು. ಅವರು ಯಲ್ಲಾ ಪ್ರಕೊರಚಟ್ಟಿಯ ಜೋರಾಗ್ರೇಸರರೆಂದು ಖಚಿಪಡಿಸಿಕೊಂಡಿತು. ಅವರು ಅಪಹರಣದ ಯಿಯಿಧ ನಮೂನೆಗಳ ಬಗ್ಗೆ ಚರ್ಚಿಸುತ್ತಿದ್ದುದನ್ನು ಕೇಳಿಸಿಕೊಂಡಿತು. ಅದೇ ಸಮಯಕ್ಕೆ ಸರಿಯಾಗಿ ಆಗಮಿಸಿದ ಯೇಳನೆ ಯ್ಯಕ್ತಿಯು ಕಲೆಟ್ಟರು ಸಾಹೇಬನು ಯಿಲ್ಲಿಗೆ ಹರದಾರಿ ದೂರದಲ್ಲಿರುವ ಚೆಲಿಮಲ ಯಂಬ ಕುಗ್ರಾಮದ ಹೊರ ವಲಯದ ಹಣುಮಂದೇವರ ಗುಡಿ ವವುಳಿಯಲ್ಲಿ ಬಿಡಾರ ಹೂಡಿರುವನೆಂದೂ, ನಾಡಿದ್ದು ರಾತ್ರಿಯೀರಭದ್ದರ ದೇವರ ಕೊಂಡುಚ್ಚಯ್ಯವನ್ನು ವುದ್ಘಾಟಿಸಲಿರುವನೆಂದೂ, ಆ ಗಲಾಟೆಯಲ್ಲಿ ತಾವು ಆತನ ಸರೀರದಿಂದ ಮುತ್ತಿನ ಸರವನ್ನು ವುತಾರ ಮಾಡಬೇಕೆಂದೂ ವರದಿ ವಪ್ಪಿಸಿದನು. ಅದನು ಕೇಳಿ ಸಂಬುಗನು ಬಲು ಸಂಬರ ಪಟ್ಟನು. ಆತನು ತನ್ನ ಸಹಚರರಿಗೆ ಸಲಹೆ ಸೂಚನೆಗಳನ್ನು ಕೊಡುತ್ತಿರುವಾಗ್ಗೆ....

ಯೀ ಸಮಾಚಾರವನ್ನು ಸಿಪಾಯಿಗಳಿಗೆ ಹೇಳಿ ಸ್ವಾಮಿನಿಷೆವಿ ಮೆರೆಯಬೇಕೆಂದು ಕ್ರುತು ನಿಚ್ಚಯವಂ ಮಾಡಿ ಗರುಡ ಚೆಲಿಮಲದ ಕಡೇಕ ಹಾರುತ್ತ ತಲುಪಿದಾಗ ಸೂರ್ಯ ಯಿಳಿಮುಖವಾಗಿದ್ದ.. ಜೀವಚ್ಫವವಾಗಿದ್ದ ರಾಣಿಯು ರೆಕ್ಕೆ ಯಿಗ್ಗಲಿಸಿ ಸ್ವಾಗತಿಸಿದಳು. ಭೋಜನ ಮಾಡಿ ದರ್ಬೆ ಚಾಪೆಯ ಮ್ಯಾಲ ಮಲಗಿದ್ದ ಸಾಸ್ತ್ರಿದ್ವಯರು ಗರುಡನ ಆಗಮನವಾಯಿತೆಂಬ ಸುದ್ದಿಯನ್ನು ಕೇಳಿ ಯಚ್ಚರಗೊಂಡ ರಲ್ಲದೆ ಅದರ ಕಾಲಲ್ಲಿದ್ದ ಪತ್ರವನ್ನು ಬಿಚ್ಚಿ ‘ಹೆನ್ರಿಮರ್ಕಟಸ್ಯ ಮರ್ಕಟಸ್ಯೋ ಹೆನ್ರಿ..’ ಯಂತು ಮುಂತಾಗಿ ಮೋದಿ ಆನಂದ ತುಂದಿಲರಾದರು.

ಮುಂದೆರಡು ದಿವಸಗಳಲ್ಲಿ ನಡೆಯಲಿರುವ ಯೀರಭದ್ದರದೇವರ ವುತ್ಸವಮೋ.. ವುತ್ಸವವು

ಸದರಿ ಗ್ರಾಮಕ್ಕೆ ಯಿರುವೆಯೋಪಾದಿಯಲ್ಲಿ ಹರಿದು ಬರುತಲಿದ್ದ ಭಕುತಾದಿ ಮುಂದಿಯು ಯೀರಭದ್ದರ ದೇವರೊಳಗ ಮನ್ರೋ ಸಾಹೇಬನುಂಟಾ.. ಮನ್ರೋ ಸಾಹೇಬನೊಳಗೆ ಯೀರಭದ್ದರದೇವ ರುಂಟಾ ಯಂದು ಯೋಚಿಸುತಲಿದ್ದ ರೀತಿ ಅಗಾಧವಾಗಿತ್ತು ಸಿವನೇ..

ಕೊಂಡ ಹಾದು ನಾನಾತನ ಕ್ರುಪೆಗೆ ಪಾತ್ರನಾಗಲಬೇಕು? ತಾನಾತನ