ಪುಟ:Chirasmarane-Niranjana.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ಚಿರಸ್ಮರಣೆ

ಶಾಲೆ. ಮುದುಕರ ಶಾಲೆಯಲ್ಲ. ಇದರಲ್ಲೆಲ್ಲ ಅಷ್ಟು ಆಸಕ್ತಿ ಇದ್ದವರು ಬೇರೆ ಶಾಲೆ ಕಟ್ಟೆಸ್ಲಿ."

  ಕೊನೆಯ ಮಾತು ನ೦ಬೂದಿರಿಯ ಮೇಲೆಸೆದ ಮರುಬಾಣ.ನ೦ಬೂದಿರಿ 

ಸುಮ್ಮನಿದುದನ್ನು ಕಂಡು ಮಾಸ್ತರತ್ತ ತಿರುಗಿ, ನಂಬಿಯಾರರು ಹೇಳಿದರು:

  "ಏನು ಹೇಳ್ತೀರಿ ಮಾಸ್ತರೆ?" 
  ತಮಗೆ ಅನುಕೂಲವಾಗುವಂತೆ ನಡೆದ ಈ ಪ್ರಕರಣದಿಂದ ಉತ್ತೇಜಿತರಾಗಿ 

ಮಾಸ್ತರು ಉತ್ತರವಿತ್ತರು:

  "ಈ ಶಾಲೆಯಲ್ಲೇ ವಯಸ್ಕರಿಗೂ ಪಾಠ ಹೇಳಬಾರ್ದು. ಅವರೇ ಎಲ್ಲಾದರೂ 

ಜಾಗ ಗೊತ್ಮಾಡ್ಲಿ."

  ಈಗ ನಂಬೂದಿರಿ ಮಾಸ್ತರನ್ನು ಕೇಳಿದರು: 
  "ಇದೆಲ್ಲ ನೋಡಿದರೆ ನಾಲ್ಕು ಕಾಸು ಹೆಚ್ಚಿನ ಸಂಪಾದನೆಗೆ ನೀವೇ ಏರ್ಪಾಟು ಮಾಡಿಕೊಂಡಹಾಗೆ ಕಾಣ್ತದೆ!"
  ಮಾಸ್ತರ ಮುಖ ಅವಮಾನದಿಂದ ರಂಗೇರಿತು. ಆದರೂ ಅವರು ನಕ್ಕು.

ಅ೦ತಹ ಆರೋಪವೂ ಒಳ್ಳೆಯದೇ ಎ೦ದು ಭಾವಿಸಿ ಉತ್ತರವಿತ್ತರು:

 "ಹಾಗೇನೂ ಇಲ್ಲ. ಕೊಟ್ಟರೂ ಮಹಾ ಅವರೆಷ್ಟು ಕೊಡಬಹುದು?" 
 "ಕೊಡ್ತಾರೆ ಮಣ್ಣು!" ಎಂದು ನಂಬಿಯಾರರು ಸಿಡುಕಿನಿಂದ ನುಡಿದು, 

ಸಿಗರೇಟಿಗೆ ಕೈ ಹಾಕಿದರು.

 ನಂಬೂದಿರಿ ನಗುತ್ತ ಅಂದರು:
 "ನಿಮಗೆ ಒಂದು ಹೇಳ್ತೇನೆ ಮಾಸ್ತರೆ. ಅವರನ್ನ ನೆಚ್ಕೊ೦ಡು ನೀವಿರ್ಬೇಡಿ.

ನಿಮ್ಮ ರಾತ್ರಿಶಾಲೆ ನಾಲ್ಕು ದಿವಸ ನಡೆದ್ರೆ ದೊಡ್ಡದು. ವಿಧ್ಯಾ ಸರಸ್ವತಿ ಎಲ್ಲಿ-- ರೈತರೆಲ್ಲಿ!ಕುಣಿಯೋ ಕೋತೀನ ನೋಡೋದಕ್ಕೆ ಇವರೆಲ್ಲ ಬಂದಾರೆ ಹೊರತು..."

 ರೈತರು ಮತ್ತು ವಿದ್ಯೆಗೆ ಸಂಬಂಧಿಸಿ ಇಬ್ಬರು ಜಮೀನ್ದಾರರಲ್ಲೂ 

ಭಿನ್ನಾಭಿಪ್ರಾಯಗಳಿರಲಿಲ್ಲ. ಅವರೊಳಗಿನ ವೈಯಕ್ತಿಕ ಅಸೂಯೆಯಿಂದ ರೈತರಿಗೆ ಆ ವಿಷಯದಲ್ಲಿ ಹಿತವಾಗಿತ್ತು ಅಷ್ಟೆ.ಅದು ಸ್ಪಷ್ಟವಾಗಿತ್ತು,ಮಾಸ್ತರಿಗೆ.

 ಕರುಣಾಕರನನ್ನೂ ನಂಬೂದಿರಿಯ ಮಕ್ಕಳನ್ನೂ ಕರೆದು ಮಾಸ್ತರೆಂದರು: 
 "ನನ್ನ ಕೊಠಡಿಗೆ ಹೋಗಿ ಕೂತ್ಕೊಳ್ಳಿ ಬಂದ್ಬಿಟ್ಟೆ." 
 ಅದು ತಮ್ಮ ಮಕ್ಕಳಿಗೋಸ್ಕರ ವಿಶೇಷ ಪಾಠ. ಜಮೀನ್ದಾರರಿಬ್ಬರಿಗೂ 

ಅದರಿ೦ದ ಸಮಾಧಾನವಾಯಿತು.

 "ಇನ್ನು ಹೋಗೋಣವೇನಪ್ಪ?” ಎಂದರು ನಂಬೂದಿರಿ ನಂಬಿಯಾರರಿಗೆ,