ಪುಟ:Chirasmarane-Niranjana.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ○試2. ಅವರು ಸಿದ್ದರಿರಲಿಲ್ಲ, ಅತನನ್ನು ಕಳುಹಿಸಿಬಿಡುವುದು ಬಲಾಢ್ಯರಾದ ಅವರಿಗೇನೂ ಕಷ್ಟದ ಮಾತಾಗಿರಲಿಲ್ಲ, ಆದರೆ ಖಾಲಿಯಾದ ಆ ಜಾಗಕ್ಕೆ ಬೇರೆ ಯಾರನ್ನು ನೇಮಿಸಬೇಕು?-ನಂಬೂದಿರಿ ಸಾಮಾನ್ಯವಾಗಿ ಪರ ಊರುಗಳಿಗೆ ಪಟ್ಟಣಗಳಿಗೆ ಹೋಗುವ ವ್ಯಕ್ತಿಯಲ್ಲ, ಹೋದರೂ ಕೋರ್ಟು ಕಚೇರಿಗಳ ಕೆಲಸಕ್ಕೆ ಎಷ್ಟೋ ಅಷ್ಟೆ, ಒಮ್ಮೆಯೂ ಪತ್ರಿಕೆ ಮುಟ್ಟದ ಅವರು, ಕಯಯ್ಯೋರಿನ ಹೊರಗೆ ಏನಾಗುತ್ತಿದೆ ಎಂದು ಸ್ಪಷ್ಟವಾಗಿ ತಿಳಿದವರಲ್ಲ, ನಂಬಿಯಾರರು ಭೇಟಿಯಾದಾಗ ಏನಾದರೂ ಹೇಳಿದರೆ, "ಹಾಗೆನು?" ಎಂದು ಹೇಳಿ, ವುರುಕ್ಷಣವೇ ಅದನ್ನು ಮರೆತುಬಿಡುತ್ತಿದ್ದರು. ಆದರೆ ಹೊರಗಿನ ವ್ಯವಹಾರವನ್ನು ತಕ್ಕ ಮಟ್ಟಿಗೆ ತಿಳಿದಿದ್ದ ನಂಬಿಯಾರರು, ಇಂತಹ ಸಮಸ್ಯೆಗಳನ್ನು ಕುರಿತು ಹೊರಗಿನವರೊಡನೆ ಚರ್ಚಿಸಿದ್ದವರು, ಎಲ್ಲ ಕಡೆಗಳಲ್ಲೂ ಈಗೀಗ 'ತಲೆಹೋಕ' ಉಪಾಧಾಯರೇ ಇರುವರೆಂದು ಕೇಳಿದ್ದರು. ಹಾಗಿರುತ್ರ, ಇರುವ ಮಾಸ್ತರನ್ನು ಕಳುಹಿಸಿ ಆತನಿಗಿಂತ ಹೆಚ್ಚು ಭಯಂಕರನಾದವನನ್ನು ಕರೆಸಲು ಅವರು ಸಿದ್ದರಿರಲಿಲ್ಲ, ಅಲ್ಲದೆ, ಅವರ ಹುಡುಗ ಕರುಣಾಕರನಿಗೆ ಅಲ್ಲಿದ್ದುದು ಮತ್ತೊಂದು ವರ್ಷದ ವಿದಾಭಾಸ ಮಾತ್ರ. ಮುಂದೆ ನೀಲೇಶ್ವರಕ್ಕೆ ಅವನನ್ನು ಕಳುಹಿಸಿಬೇಕು. ಅಷ್ಟರವರೆಗೆ ಈ ಮಾಸ್ತರೇ ఇdలి-ఎంబుదా: ఆవారి యణలజనేయాగి3ు. ಹೀಗಿದ್ದರೂ, ಒಮ್ಮೆ ಮಾತ್ರ ನಂಬಿಯಾರರಿಗೆ ತುಂಬ ದಿಗಿಲಾಯಿತು. ಕರುಣಾಕರನ ಪುಸ್ತಕಗಳ ಮೇಲೆ ಕಣ್ಣೋಡಿಸುತ್ತಿದ್ದಾಗ ಚರಿತ್ರೆಯ ಟಿಪ್ಪಣಿ ಪುಸ್ತಕದಲ್ಲಿದ್ದ ಕೆಲ ವಾಕ್ಯಗಳನ್ನೋದಿ, ಅವರು ದಂಗಾದರು. ಪ್ರಶ್ರೋತ್ತರಗಳ యణబెదాలికే ఆ ఓఖేణి. "ನಮ್ಮನಾಳುವವರು ಯಾರು?" "Edజిలయంు." "ಅವರ ಊರು ಎಲ್ಲಿದೆ ?" "అదో గావిరి మ్మెలుగళ ఆజీ." "ಆಳುವವರಿಗೆ ಏನೆನ್ನುತ್ತಾರೆ?" "రాజయ." "ఆళల్చడెవావరిగి వినేన్నుతారే?" "ಪ್ರಜೆಗಳು." ಈ ಪುಟದಲ್ಲೆ ಕೆಳಗೊಂದು ಸಾಲಿತು; "ಪರಕೀಯ ರಾಜರ ಪ್ರಜೆಗಳು ಗುಲಾಮರು.