ಪುಟ:Chirasmarane-Niranjana.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣಿ ೧೫೭

  ಆ ಮಾತಿನಲ್ಲಿ ಸೂಚ್ಯವಾಗಿದ್ದುದು ತಮಗೆ ಅರ್ಥವಾಯಿತೆಂದು ಹಲವರು 

ನಕ್ಕರು.

  ಮುಂದೆ ಜನ,ಅರ್ಧ್ದಲ್ಲೇ ಬಿಟ್ಟು ಬಂದಿದ್ದ ಕೆಲಸಗಳನ್ನು

ಪೂರ್ತಿಗೊಳಿಸಿಲೆಂದು ಚದರಿದರು.

  ....ಹೊಸದುರ್ಗಕ್ಕೆ ಹೊರತುನಿಂತ ಫೌಜದಾರರಿಗೂ ಪೇಲೀಸರಿಗೂ

ಉಡುಗೊರೆಯನ್ನೇನ್ನೋ ಜಮೀನ್ದಾರರು ಕೊಟ್ಟರು. ಆದರೆ ತಮ್ಮ ಅಸಮಾದಾನವನ್ನು ವ್ಯಕ್ತಪಡಿಸದಿರಲಿಲ್ಲ. ಅವರೆಂದರು:

  "ನೀವು ಮೃದು, ಬಹಳ ಮೃದು."
  ತಮ್ಮ ಕಷ್ಟ ನಿಮಗೆ ಅರ್ಥವಾಗೋದಿಲ್ಲ. ನೀವಿನ್ನೂ ಹತ್ತೊಂಭತ್ತನೇ

ಶತಮಾನದ ನ್ಯಾಯ ಮಾತಾಡ್ತೀರಿ. ಈಗ ಪರಿಸ್ಥೈತಿ ಬದಲಾಗಿದೆ. ಮೊದಲಾದರೆ ಇಷ್ಟ್ ಬಂದಹಾಗೆ ಏನು ಬೇಕಾದರೂ ಮಾಡಬಹುದಿತ್ತು. ಈಗ ಹಾಗಲ್ಲ. ಪತ್ರಿಕೆಗಳಿವೆ. ಕಾಂಗ್ರೆಸಿನವರೂ ಗಲಾಟೆ ಎಬ್ಬಿಸ್ತಾರೆ.ಆದ್ದರಿಂದ ಪ್ರತಿಯೊಂದೂ ನ್ಯಾಯ ಪ್ರಕಾರ ನಡೀತಿದೆ ಅಂತ ತೋರಸ್ಕೊಂಡೇ ಮುಂದುವರೀಬೇಕು."

   "ಆದರೆ ನೀವು ಮುಂದುವರಿಯೋ ಹೊತ್ತಿಗೆ ಎಲ್ಲಾ ಮುಗಿದಿರತದೆ!"
   "ಹಾಗಂದರೇನು?"
   "ಆ ಅಪ್ಪು-ಚಿರುಕಂಡ ಎಲ್ಲಾ ನನ್ನ ಕಣ್ಣೆದುರಲ್ಲೇ ಹುಟ್ಟಿ ಬೆಳ್ದೋರು. ನೋಡಿ, 

ಹ್ಯಾಗೆ ಸೊಕ್ಕಿದ್ದಾರೆ ! ಅವರಿಗೆ ಏರಡು ಬಿಗೀಬೇಕಾಗಿತ್ತು."

  ತಮ್ಮ ಖಾಕಿ ಚಡ್ಡಿಯೊಳಕ್ಕೆ ಕೈತೊರಿಸುತ್ತ ಘೌಜದಾರರೆಂದರು:
  "ಬಿಗಿಯೋದು ದೊಡ್ಡ ಮಾತಲ್ಲ. ಆದರೆ ಎಷ್ಟೊಂದು ಜನ ಸೇರಿಬಿಟ್ಟ್ಟರೂ

ಅಂತ ನೋಡಿದಿರೋ ಇಲ್ವೋ?"ದ

  "ಜನ ನೋಡಿ ಗಾಬರಿಯಾದ್ರೇನೋ ನೀವು? ಅಷ್ಟೇ ಜನ ಇಲಿಳ್ಗೆ ಬಂದು

ನಿಮ್ಮೆದುರಲ್ಲೇ ಮನೆಗೆ ಬೆಂಕಿ ಇಡ್ತೇವೇಂತ ಹೇಳಿದರೂ ಸುಮ್ಮನಿರ್ತೀರೇನೊ?"

  "ಹಾಗಲ್ಲ ಸರ್."
  "ಹಾಗಲ್ಲ ಹೀಗೆ!"
  "ನೀವು ತಪ್ಪು ತಿಳಕೊಂಡಿದ್ದೀರಿ. ನಿಮಗೆ ಅಸಮಾಧಾನಪಡಿಸಿ ನಮಗೆ ಸಿಗೋ

ಲಾಭವಾದರೂ ಏನು? ಇನ್ನೊಂದ್ಸಲ ನೋಡಿ. ಹೀಗಾಗೋದಿಲ್ಲ."

  ಘೌಜದಾರರು ಸ್ಟಲ್ಪ ಹಾದಿಗೆ ಬಂದರೆಂದು ಜಮೀನ್ದಾರರೆಂದರು: