ಈ ಪುಟವನ್ನು ಪರಿಶೀಲಿಸಲಾಗಿದೆ
ಚಿರಸ್ಮರಣೆ ೨೩೯
"ದುಡಿಯುವ ಜೀವಕ್ಕೆ ಬೇರೇನು ಬೇಕು ಹೇಳಿ? ಒಂದು ಬೀಡಿ, ಒಂದು
ಕಪ್ ಚಾ!"
ಅಲ್ಲಿದ್ದವರಿಗೆ ಚಹಾದ ನೆನಪಾಗಿ ಕೆಲವರು ಗೊಣಗಿದಾಗ, ಆತ
ಗೋಗರೆಯುತ್ತ ಹೇಳುತ್ತಿದ್ದ:
"ಪೋಲೀಸರು ಎಲ್ಲಾ ಸರಿ.ಆದರೆ ಒಂದು ವಿಷಯದಲ್ಲಿ ಮೋಸ ಮಾಡಿದ್ರು.
ಆ ಹೋಟೆಲು ರಾಮುಣ್ಣೀನ ಅವರು ಹಾಗೇ ಬಿಡೋದೆ? ಆತನನ್ನೂ ಇಲ್ಲಿಗೆ
ಕಳಿಸಿದ್ದಿದ್ರೆ,ಆಗ ತೋರಿಸ್ತಿದ್ದೆವು! ಏನು ಮಾಡೋಣ?"
೬
ಚಿರುಕಂಡ, ಅಪ್ಪು,ಮಾಸ್ತರು_ಈ ಮೂವರಿಗೆ ಕರೆ ಬಂತು, ಯಾರೋ ಭೇಟಿಗೆ
ಬಂದಿದ್ದರು.ಭೇಟಿಯ ಕೊಠಡಿಗೆ ಹೊರಡುತ್ತ ಮೂವರೂ ಯೋಚಿಸಿದರು;
ಯಾರಿರಬಹುದು? ಹಿಂದಿನ ದಿನವಷ್ಟೇ ಕಯ್ಯೂರಿನಿಂದ ಮಗಳೊಡನೆ
ದೇವಕಿಯೂ, ಮಗವನ್ನೆತ್ತಿಕೊಂದು ಜಾನಕಿಯೂ ಬಂದಿದ್ದರು.
ಈಗ ಇಷ್ಟರಲ್ಲೆ ಮತ್ತೆ ಯಾರು?
ರಕ್ಷಣಾ ಸಮಿತಿಯವರು ಬಂದಿದ್ದರೂ ಇರಬಹುದೆಂದು ಊಹಿಸುತ್ತಲೇ ಆ
ಮೂವರು ಕೊಠಡಿಯನ್ನು ಹೊಕ್ಕರು. ಜೇಲರು ಆಗಲೇ ಕುಳಿತಿದ್ದರು. ಆ ಭೇಟಿಯ
ಮಟ್ಟಿಗೆ ತರಿಸಿದ್ದ ಕುಚಿ ಮೇಲೊಬ್ಬರಿದ್ದರು__ಎತ್ತರದ ದೇಹ, ಕೆಂಪು
ಕೆಂಪಗಿನ ತುಂಬುಮುಖ, ಗುಂಗುರು ಕೂದಲು, ತೆರೆದುಕೊಂದು ನಗುತ್ತಲೇ ಇದ್ದ
ತುಟಿಗಳು,ಕರಿಯ ಕೋಟು, ವಕೀಲರೆಂಬುದರಲ್ಲಿ ಸಂದೇಹವಿರಲಿಲ್ಲ.ಅವರ
ಕೈಯಲ್ಲಿ ತೊಗಲಿನ ಚೀಲವಿತ್ತು.
ಆ ಮೂವರು ಬಂದೊಡನೆ ವಕೀಲರು ಎದ್ದುನಿಂತು ತಮ್ಮ ಪರಿಚಯ
ಮಾಡಿಕೊಟ್ಟರು:
"ನಾನು ರಾಜಾರಾವ್,ವಕೀಲ, ನಿಮ್ಮ ಕಡೆಯ ವಕೀಲ..."
ಮೂವರು ಅವರಿಗೆ ಕಮುಗಿದು ನಮಸ್ಕರಿಸಿದರು.
ವಕೀಲರು ಎದ್ದು ನಿಂತುದು ಜೇಲರಿಗೆ ಸರಿಬೀಳಲಿಲ್ಲ.ಅವರು ಹೇಳಿದರು:
"ನೀವು ಕೂತ್ಕಳ್ಳಿ ಮಿಸ್ಟರ್ ರಾಜಾರಾವ್."
ಜೇಲರತ್ತ ನೋಡಿ ರಾಜಾರಾಯರು ವಿನಯದಿಂದ ಅಂದರು:
"ಹೇಳೋದಕ್ಕೆ ಸಂಕೋಚವಾಗ್ತದೆ ಇವರೆ.ಇದು ಖಾಸಗಿ ಭೇಟಿಯಲ್ಲ.
ವಕೀಲನಾಗಿ ಕಗಳನ್ನ ನೋಡೋದಕ್ಕೆ ಬಂದಿದ್ದೇನೆ.ಈ ಸಂಭಾಷಣೆ ನೀವು