ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೪೪ ಚಿರಸ್ಮರಣೆ
"ಶುರು ಮಾಡೋಣವೆ?" ಕ್ಷೀಣ ಸ್ವರ. ಒಡಲ ಒಳಗಿಂದ ಬಂದುದಲ್ಲ. ವಿಚಾರಣೆಯ ದರ್ಪ-ವೈಭವ- ಭಯೋತ್ಬಾದಕ ಗಾಂಭೀರ್ಯಗಳನ್ನು ಚಿತ್ರಿಸಿ ಬಂದಿದ್ದ ಹಲವರು ಕೈದಿಗಳಿಗೆ ಇದೆಲ್ಲ ಸಪ್ಪೆಯಾಗಿ ತೋರಿತು. ಈ ವಿಚಾರಣೆಯಲ್ಲಿ ಹೆದರುವಂಧದೇನೂ ಇಲ್ಲ. ಕೆಲವು ದಿನಗಳಲ್ಲಿ ತಾವೆಲ್ಲ ಇಲ್ಲಿಂದ ಹೊರಗೆ ನಡೆದುಹೋಗಬಹುದು-ಎಂದು ಅವರು ಭಾವಿಸಿದರು. ಆದರೆ ಅಪ್ಪು ಮತ್ತಿತರರನ್ನು ಬೇರೆ ಸಂಕಟಗಳು ಬಾಧಿಸುತ್ತಿದ್ದುವು; ಇಲ್ಲಿ ತಮ್ಮವರು ಯಾರೂ ಇಲ್ಲ.ಕಯ್ಯೂರಲ್ಲೇ ಈ ವಿಚಾರಣೆ ನಡೆದಿದ್ದರೆ ಆಗ ಸಾಧ್ಯವಿತ್ತು,ಜನ ಬಂದು ಕಿಕ್ಕಿರಿದು ನೆರೆದ ನ್ಯಾಯಸ್ಧಾನ! ಇಲ್ಲಿ ಏನೂ ಇಲ್ಲ.ಬಲು ಮುಖ್ಯವಾದ ಐತಿಹಾಸಿಕವಾದ ವಿಚಾರಣೆಯೊಂದು, ನೋಡುವವರಿಲ್ಲದೆ ಕೇಳುವವರಿಲ್ಲದೆ ಆರಂಭವಾಗಿತ್ತು. ಮಾಸ್ತರು-ಚಿರುಕಂಡ ಬೇರೆ ಯೋಚನೆ ಮಾಡುತ್ತಿದ್ದರು.ಇನ್ನು ದಿನವೂ ತಾವಿಲ್ಲಿಗೆ ಬರಬೇಕು.ಅಗ ಕಯ್ಯೂರಿನ ತಮ್ಮವರೊಡನೆ ನಿತ್ಯ ಸಂಪರ್ಕ ಬೆಳೆಸಲು ತಾವೇನಾದರೂ ಮಾಡಬಹುದೆ? ಇಲ್ಲಿ ಯರೂ ಬಂದೇ ಇಲ್ಲವೆ?ಕಟ್ಟಡದ ಹೊರಗೆ ಅಲ್ಲಿ ಇಲ್ಲಿ ಕೆಲವರಿದ್ದರು.ಅವರಲ್ಲಿ ಕೆಲ್ಲವರು ಗೂಢಚಾರರಿರಬಹುದು.ಉಳಿದವರು? ಪೋಲೀಸರಿಗೂ ಅಂಜದೆ ಇಲ್ಲಿ ತಮ್ಮೊಡನೆ ಮಾತನಾಡಬಲ್ಲವರು ಯರು- ಯರು? ಇದುಕಯ್ಯೂರು ಪೋಲೀಸು ಕೊಲೆ ಮೊಕದ್ದಮೆ. ಶಾಲೆಯಲ್ಲಿ ಹಾಜರಿ ತೆಗೆದುಕೊಳ್ಳುವ ಹಾಗೆ ಅರವತ್ತು ಕೈದಿಗಳ ಹೆಸರುಗಳನ್ನೂ ಓದಿದ್ದಾಯಿತು.ಮುಂದಿನ ಎರಡು ಹೆಸರುಗಳನ್ನು ನ್ಯಾಯಾಸ್ಧಾನದ ಗುಮಾಸ್ತೆ ಓದಿದಾಗ,ಕೆಲ ಕೈದಿಗಳು ಪರಸ್ವರ ಮುಖ ನೋಡಿಕೊಂಡು ನಸುನಕ್ಕರು. ಇಂಗ್ಲೀಷಿನಲ್ಲಿ ನ್ಯಾಯಾದೀಶರೆಂದರು: "ಅಪಾದನೆಯ ವಿವರನ್ನೋದಿ." ಅಷ್ಟು ಜನರ ಮೇಲೆ ಸರಕಾರದ ಪೋಲೀಸರು ನ್ಯಾಯಾಸ್ಧಾನಕ್ಕೆ ಕೊಟ್ಟ ದೂರು. ಸರಕಾರಿ ವಕೀಲರು ಮೂವತ್ತು ನಾಲ್ವತ್ತು ಪುಟಗಳಷ್ಟು ಬರೆದು ತಂದಿದ್ದುದನ್ನು ನಿಧಾನವಾಗಿ ಒಂಟಿ ಧ್ವನಿಯಲ್ಲಿ ಓದತೊಡಗಿದರು.ಇಂಗ್ಲಿಷ್ ಭಾಷೆ. ಕೈದಿಗಳ ಪರ ವಕೀಲರು ಆಕ್ಷೇಪವೆತ್ತಿದರು: "ಇದಕ್ಕೆ ನನ್ನ ಆಕ್ಷೇಪವಿದೆ, ಖಾವಂದರೆ.ಆಪಾದನೆಯ ವಿವರ ಏನು ಎಂಬೋದು ಆರೋಪಿಗಳಿಗೆ ಅರ್ಧವಾಗ್ತಾ ಇಲ್ಲ." "ನೀವು ವಿವರಿಸಬಹುದಲ್ಲಾ!"ಎಂದರು ನ್ಯಾಯಾಧೀಶರು.