ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಿರಸ್ಮರಣೆ ೨೫೩ ...ತೀರ್ಪು ಕೊಡುವ ದಿನ ಗೋತ್ತಾಯಿತು. ಆ ದಿನ ಸಮೀಪಿಸಿದಂತೆ, ಕೈದಿಗಳ ಮನಸ್ಸಿನ ನೆಮ್ಮದಿ ಇರಲಿಲ್ಲ. ತನ್ನ ನಗೆಮಾತುಗಳು ಈಗೀಗ ವಿಫಲವಾಗುತ್ತ ಬಂದ್ದುವೆಂದು ಧಾಂಡಿಗನೂ ಮುಖ ಬೀಗಿಸಿಕೊಂಡು ಸಿಳ್ಳು ಹಾಕುತ್ತ ಕುಳಿತ.
ಮನಸಿನ ದುಗುಡ ತಡೆಯಲಾರದೆ ಅಪ್ಪು ಕೇಳಿದ: "ತೀರ್ಪು ಕೊಡೋದಕ್ಕೆ ಅವರು ಇಷ್ಟು ದಿನ ಯಾಕೆ ತಗೋಬೇಕು? ಇನ್ನೂ
ಅವರು ತೀರ್ಮಾನ ಮಾಡಿಲ್ಲ_ಅಂತಲೆ?"
ಪ್ರಭು ಮಾತನಾಡಿದ:
"ತೀರ್ಪು ಬರೀಬೇಕಲ್ಲ! ಅದಿನ್ನೇನು ನೂರು ಪುಟವಿರ್ತದೋ ಸಾವಿರ ಪುಟ ಇರ್ತದೋ!"
ಆ ಪರಿಸ್ಥಿತಿಯಲ್ಲೂ ತಿಳಿವಳಿಕೆಯ ಮಾತನ್ನು ಮಾಸ್ತರು ಆಡಿದರು: "ಇಂಥ ಸಂದರ್ಭಗಳಲ್ಲಿ ನ್ಯಾಯಸ್ಥಾನದಲ್ಲಿ ನಡೆಯೋದೇ ಹೀಗೆ.ಈ
ಮೊಕದ್ದಮೆ ಹ್ಯಾಗಿರ್ಬೆಕು? ಏನು ತೀರ್ಪು ಕೊಡಬೇಕು?_ಅನ್ನೋದೆಲ್ಲಾ ಮೊದಲೇ ತೀರ್ಮನವಾಗಿರ್ತದೆ. ವಚಾರಣೆಯ ನಾಟಕವೆಲ್ಲ ಫೂರ್ತಿಯಾದ್ಮೇಲೆ
ತೀರ್ಪು ಹೇಳ್ತಾರೆ..." ಒಬ್ಬ ರೈತನೆಂದ: "ಈ ನ್ಯಾಯಸ್ಥಾನವೇ ಕೊನೇದೇನೂ ಅಲ್ಲವಲ್ಲ!" ಕೋರ ಧ್ವನಿ ತೆಗೆದ. "ಏನು? ಬೇರೊಂದು ಕೋರೋಟಿನಲ್ಲಿ ಇನ್ನೊಂದ್ಯಾರೆ ಇದೇ ನಾಟಕ ಆಗಬೇಕು ಅಂತೀರಾ?" ಮಾಸ್ತರು ನಕ್ಕು ಹೇಳಿದರು: "ಉಚ್ಚ ನ್ಯಾಯಸ್ಥಾನಸದಲ್ಲಿ ಬಹಳ ಸುಲಭ. ಅಲ್ಲಿ ಆರೋಪಿಗಳ ಮುಖ ನೋಡದೆಯೇ ತೀರ್ಪು ಕೊಡ್ತಾರೆ:"
.....ತೀರ್ಪು ಕೊಡುವ ದಿನ ಕಯ್ಯೂರಿನಿಂದ ಯಾರೂ ಬಂದಿರಲಿಲ್ಲ.ಆದರೆ
ಮಂಗಳೂರಿನವೆರೇ ನ್ಯಾಯಸ್ಥಾನದಲ್ಲಿ ಕಿಕ್ಕಿರಿದು ನೆರೆದಿದ್ದರು. ನ್ಯಾಯಾಧೀಶರು ತಡವಾಗಿ ಬಂದರು. ಬಂದವರೇ ಬರೆದು ತಂದಿದ್ದುದನ್ನು ಅವಸರ ಅವಸರವಾಗಿ ಓದತೊಡಗಿದರು_ಅದು ನೂರು ಪುಟಗಳಷ್ಟಿದ್ದ ತೀರ್ಪು. ಪೂರ್ತಿ ಓದಿದರೆ ಸಂಜೆಯ ಹೊತ್ತಿಗೂ ಮುಗಿಯುತ್ತಿತ್ತೋ ಇಲ್ಲವೊ. ಅವರು ಏನು ಓದುತ್ತಿದ್ದರೆಂಬುದು ಸ್ಪಷ್ಟವಾಗದಹಾಗಿತ್ತು ಓದಿನ ವೇಗ. ನಡುನಡುವೆ,