ಪುಟ:Chirasmarane-Niranjana.pdf/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೨೫೪ ಚಿರಸ್ಮರಣೆ ಓದದೆಯೇ ಪುಟಗಳನ್ನು ಅವರು ತಿರುವಿದರು ಅಲ್ಲಿ ನೆಲೆಸಿದ್ದ ನೀರವತೆಯಲ್ಲಿ ಹಾಗೆ ಹಾಳೆ ತಿರುವಿದ ಸದ್ದು ಕೊಡ ಕೇಳಿಸಿತು.... ಅವರು ನಿಧಾನಿಸಿದುದು ಕೊನೆಯ ಭಾಗ ಬಂದಾಗ ಮಾತ್ರ. ಅದು ಶಿಕ್ಷೆಯ ವಿವರ.

 ನ್ಯಾಯಸ್ಥಾನದ ಹಿರಿ ಗುಮಾಸ್ತೆ ಆ ಭಾಗವನ್ನು ಮಲೆಯಾಳಿ ಭಾಷೆಯಲ್ಲಿ

ಕೈದಿಗಳಿಗೆ ತಿಳಿಸಿ ಹೇಳಿದ.ಒಟ್ಟಿನಲ್ಲಿ ಹೀಗಿತ್ತು ಶಿಕ್ಷೆ:

 ರಾಜದ್ರೋಹದ ಚಟುವಟಿಕೆಯ ಅಪರಾಧಕ್ಕಾಗಿ ಮಾಸ್ತರು, ಅಪ್ಪು, 

ಚಿರುಕಂಡ,ಕಣ್ಣ,ಅಬೂಬಕರ್,ಕುಂಞಂಬು ಮತ್ತಿತರ ಇಪ್ಪತ್ತು ಜನರಿಗೆ ಐದ್ಯೆದು ವರ್ಷಗಳ ಕಠಿಣ ಕಾರಾಗೃಹವಾಸ. ಕೃಷ್ಣನ್ ನಾಯರ್,ಮತ್ತಿತರ ಹದಿನೆಂಟು ಜನರಿಗೆ ಎರಡೆರಡು ವರ್ಷದ ಕಠಿಣ ಸಜೆ.ಪ್ರಭು,ಕೇಳು ನಾಯರ್,ಧಾಂಡಿಗ, ಚಂದು,ಅಪ್ಪುವಿನ ತಂದೆ,ಚಿರುಕಂಡನ ತಂದೆ,ಮತ್ತಿತರತಿಗೆ ಬಿಡುಗಡೆ. ಪೋಲೀಸನನ್ನು ಕೊಲೆಮಾಡಿದ ಅಪರಾಧಕ್ಕಾಗಿ ಅಪ್ಪು,ಚಿರುಕಂಡ,ಕುಂಞಂಬು, ಅಬೂಬಕರ್ ಮತ್ತು ಕುಟ್ಟಿಕೃಷ್ಣನಿಗೆ ಮರಣದಂಡನೆ.ಕೊನೆಯವನು ಅಪ್ರಾಯಸ್ಥನಾದುದರಿಂದ ಮರಣದಂಡನೆಯ ಬದಲು,ಕೈದಿಗಳ ಶಿಕ್ಷಣ ಶಾಲೆಗೆ ಆತನರವಾನೆ.

   'ಪ್ರಾಣಾಂತಿಕವಾದ ಪೆಟ್ಟನ್ನು ಪೋಲೀಸನಿಗೆ ಯಾರು ಕೊಟ್ಟರೋ ಹೇಳುವುದು

ಕಷ್ಟ' ಎಂಬ ಅಭಿಪ್ರಾಯ ತೀರ್ಪಿನಲ್ಲಿತ್ತು.ಹಾಗಿದ್ದರೂ ಪ್ರಾಣದಂಡನೆಯ ಶಿಕ್ಷೆ ನಾಲ್ವರಿಗೆ ದೊರೆತೇ ದೊರೆಯಿತು.

ತೀರ್ಪನ್ನೋದಿದ ನ್ಯಾಯಾಧಿಶರು,ಕೋರ್ಟಿನ ಕಾರ್ಯಕಲಾಪ ಆ ದಿನಕ್ಕೆ ಮುಕ್ತಾಯವಾಯಿತೆಂದರು.ಬಿಡುಗಡೆಯಾದ ಇಪ್ಪತ್ತೆರಡು ಜನರ ಕೈಕೋಳಗಳನ್ನು ಬಿಚ್ಚಿದುದಾಯಿತು.ಆದರೂ, ಹೊರಡಿರೆಂದರೂ ಸರಿಯದೆ, ಅವರು ಅಲ್ಲೇ ನಿಂತರು. ಸದಾಕಾಲವೂ ನಗುತ್ತಲಿದ್ದ ರಾಜಾರಾಯರು ಆಗ ಮಾತ್ರ ನಗಲಿಲ್ಲ. ಕೆಂಪಗಿನ ಅವರ ದುಂಡುಮುಖ ಜೋತುಕೊಂಡು ಕಪ್ಪಿಟ್ಟಿತು. ಆ ಕಾಲಿನಿಂದ ಈ ರೀತಿ ಅದೀತೊಂತ ನನಗೆ ಗೊತ್ತೇ ಇತ್ತು"ಎಂದು ಪಿಳ್ಳೆ ಗೊಣಗಿದರು."ಅಪೀಲಿಗೆ ಏರ್ಪಾಟು ಮಾಡೋಣ.ನಿರಾಶರಾಗ್ಬೇಡಿ"ಎಂದು ಹೇಳಿ ಅವರು ವಸತಿಗೃಹಕ್ಕೆ ತೆರಳಿದರು.

   ಆ ದಿನ ಬೆಳಗ್ಗೆ ಕೈದಿಗಳು ನಡೆದುಬಂದೊಡನೆ ಅವರ ಹಿಂದಿನಿಂದ ಪೋಲೀಸ್