ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೫೬ ಚಿರಸ್ಮರಣೆ ಹತ್ತು ವರ್ಷಗಳ ಹಿಂದಿನ ಎಳೆಯರಾದ ಅಪ್ಪು ಚಿರುಕಂಡರು... ಏನೆಂದರು ಇಲ್ಲ ಚಿರುಕಂಡ---ನಾನೀಗ ಬೀಡಿ ಸೇದೋದ ಇಲ್ಲ! 'ಏನು? ಅದಲ್ಲವೆ?
ಪ್ರಶ್ನೆ ಮತ್ತೋಮ್ಮೆ ಬಂತು: "ನಾವು ನಾಲ್ಕು ಜನರನ್ನು ಈಗಲೆ ಒಯ್ತಾರಾ ಸರ್?" ಎದೆಯಿಂದ ಅಳಲಿನ ಮುದ್ದೆ ಎದ್ದು ಗಂಟಲಿನ ಮೇಲಕ್ಕೆ ಬರಲು ಯತ್ನಿಸಿತು. ಆದರೆ ಗಂಟಲು ಚಿಕ್ಕದು. ಉಗುಳು ನುಂಗಿ ಆ ಮುದ್ದೆಯನ್ನು ಕೆಳಕ್ಕೆ ತಳ್ಳುತ್ತ ಮಾಸ್ತರೆಂದರು: "ಇಲ್ಲವಪ್ಪ. ಇನ್ನೂ ನಾವು ಜತೇಲೇ ಇರ್ತೇವೆ." ಯಾರೋ ಕೇಳಿದರು: "ಇವರಿಗೆ ಐದು ವರ್ಷ ಶಿಕ್ಷೆ ಆದ್ಮೇಲೆ ಮರಣದಂಡನೆಯೋ ವಕೀಲರೆ?" ಹಾಗಲ್ಲವೆಂದರು ರಾಜಾರಾಯರು. ಒಂದೊಂದು ಅಪರಾಧಕ್ಕೆ ಒಂದೊಂದು ಬಗೆಯ ಶಿಕ್ಷೆ. ಮರಣದಂಡನೆಯ ಜತೆಗೆ ಬೇರೆ ಶಿಕ್ಷೆ ಇದ್ದಾಗ, ಮರಣದಂಡನೆಯ ಬಸಿರಲ್ಲಿ ಆ ಶಿಕ್ಷೆ. ಚಿರುಕಂಡ ಮಾಸ್ತರನ್ನು ಕೇಳಿದ:"ಬಿಡುಗಡೆಯಾದೋರು ಅವತ್ತೇ ಕಯ್ಯೂರಿಗೆ
ಹೋಗೋದು ಮೇಲು, ಅಲ್ವ ಸರ್?"
ಆತ ಯಾವಾಗಲೂ ಕಾರ್ಯದರ್ಶಿಯೇ---ಯಾವಾಗಲೂ ಮುಂದಿನ ಕ್ರಮದ
ಯೋಚನೆಯೇ ಆತನಿಗೆ.
"ಹೂಂ ಹೌದು." "ಅವರ ಖರ್ಚಿಗೆ?---" ಅಲ್ಲೇ ನಿಂತಿದ್ದ ರಾಜಾರಾವ್ ಹೇಳಿದರು: "ಹೊರಗೆ ನಿಮ್ಮವರು ಕೆಲವರಿದ್ದಾರೆ. ಎಲ್ಲಾ ನೋಡಿಕೊಳ್ತಾರೆ. ಆ ಯೋಚನೆ
ಮಾಡ್ಬೇಡಿ."
ಅಷ್ಟರಲ್ಲಿ ಪೋಲಿಸರ ಸ್ವರ ಕೇಳಿಸಿತು: "ಮುಂದೆ ನಡೀರಿ!" ಇವತ್ತು ಇನ್ನಳಿದ ಮೂವತ್ತೆಂಟು ಜನ ಬೀದಿಯಲ್ಲಿ ನಡೆಯಬೇಕಾದುದಿಲ್ಲ.
ಈ ನ್ಯಾಯಸ್ಥಾನದ ಕೊನೆಯ ದರ್ಶನದ ಬಳಿಕ ಈಗ ಅವರಿಗೆ ಮೋಟಾರು ವಾಹನವಿದೆ.
ಜನ ಹತ್ತಿರ ಹತ್ತಿರಕ್ಕೆ ಬಂದರು. ಇವರು ರೈತರಲ್ಲ. ಕಯ್ಯೂರು ಬಲು ದೂರ