ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೪೮ ಚಿರಸ್ಮರಣೆ
ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು. ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ: "ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?" "ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?" ಎಂದ ಪ್ರಭು, ನಗುತ್ತ. ಪಂಡಿತರೂ ನಕ್ಕರು. "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ" ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು. ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ: "ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ ಕಾದಿರ್ತೆನೆ. ನನಗೇನೂ ಅವಸರವಿಲ್ಲ." ಉಳಿದವರು ಆ ಮಾತು ಕೇಳಿ ನಕ್ಕರು. ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು. ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ. ಒಮ್ಮೆಲೆ ಪಂಡಿತರು ಕೇಳಿದರು: " ಬೇರೆ ಯಾರಾದರೂ ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ: "ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ." ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು. ಮಾಸ್ತರತ್ತ ನೋಡಿ ಪಂಡಿತರು ಕೇಳಿದರು: "ಶುರು ಮಾಡೋಣ್ವ ಇನ್ನು?" "ಹೂಂ." ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ ಹೋಗಿದ್ದಾಗ, ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ