ಪುಟ:Chirasmarane-Niranjana.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ಚಿರಸ್ಮರಣೆ

   ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ
   ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.
      ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:
      "ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"
       "ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"
        ಎಂದ ಪ್ರಭು, ನಗುತ್ತ.
       ಪಂಡಿತರೂ ನಕ್ಕರು.
      "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"
     ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.
    ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು.
    ಆತ ಗಂಭೀರವಾಗಿಯೇ ನುಡಿದ:
    "ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ
     ಕಾದಿರ್ತೆನೆ.    ನನಗೇನೂ ಅವಸರವಿಲ್ಲ."
    ಉಳಿದವರು ಆ ಮಾತು ಕೇಳಿ ನಕ್ಕರು.
    ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.
   ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ
   ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ 
   ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.
    ಒಮ್ಮೆಲೆ ಪಂಡಿತರು ಕೇಳಿದರು:
    " ಬೇರೆ ಯಾರಾದರೂ      
    ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:
    "ಊಟ ಮಾಡ್ಕೊಂಡು      ಹೇಳಿದೋರು ಇಬ್ಬರಿದ್ದಾರೆ."
    ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು.
    ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:
    "ಶುರು ಮಾಡೋಣ್ವ ಇನ್ನು?"
     "ಹೂಂ."
     ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು 
    ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ
    ಹೋಗಿದ್ದಾಗ, ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ