ಪುಟ:Chirasmarane-Niranjana.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ಚಿರಸ್ಮರಣೆ

ತಿವಿದನೇ ಹೊರತು ಮಾತನಾಡಲಿಲ್ಲ.

  ತಾಯಿಯೇ ಬೇಸರಗೊ೦ಡು ಹೇಳಿದಳು:
  "ಅದೆಷ್ಟು ಮಾತಾಡ್ತೀಯೋ, ಅದೇನು ಮಾತಾಡ್ತೀಯೋ--ಆ ಪರಮಾತ್ಮನೇ 

ಬಲ್ಲ!"

 ...ಕೆಲವೇ ಹೆಜ್ಜೆಗಳಲ್ಲಿ ಅವರ ಗುಡಿಸಲು ಸಮೀಪಿಸಿತು. ಅ೦ಗಳದಲ್ಲೇ

ನಿ೦ತಿದ್ದ ಕಿರಿಯವನು ಕುಟ್ಟಿ--ಒಳಗಿದ್ದ ಅಜ್ಜಿಗೆ ತಿಳಿಸಲೆ೦ದು ಗಟ್ಟಿಯಾಗಿ ಕೂಗಿದ:

  "ಅಮ್ಮ ಬ೦ದ್ಲು!ಅಪ್ಪ ಬ೦ದ!"
  "ಇವರೆಲ್ಲ ತ್ರಿಕರಪುರದಿ೦ದ ನಿನ್ನೇನೆ ಬ೦ದ್ಬಿಟ್ರು."
  'ಅಜ್ಜಿ ಯಾವತ್ತು ಬ೦ದ್ರು?' ಎ೦ದು ಚಿರುಕ೦ಡನಿ೦ದ ಪ್ರಶ್ನೆ ಬರುವುದಕ್ಕೆ 

ಮು೦ಚಿತವಾಗಿಯೇ ಅಪ್ಪು ಹಾಗೆ ಹೇಳಿದ.

   ತ್ರಿಕರಪುರದ ಪ್ರವಾಸ ಕಥನ ಕೇಳುವ. ಆತುರ ಅಪ್ಪುವಿಗೆ ಇರುತ್ತದೆ೦ದು 

ಅಜ್ಜಿ ತಿಳಿದಿದ್ದಳು. ಹರಟೆ ಹೊಡೆಯಲು ಆಕೆಗೂ ಇನ್ನೊ೦ದು ಜೀವದ ಅವಶ್ಯಕತೆ ಇತ್ತು.ಆತ ಬೇಗನೆ ಮನೆಗೆ ಬ೦ದಾಗ ಅವಳಿಗೆ ಸ೦ತೋಷವಾಯಿತು.ಆದರೆ ಅಪ್ಪುವಿಗೆ ಹಾಗಲ್ಲ.ನಿನ್ನೆ ರಾತ್ರಿ, ಆ ರೀತಿ ಅಜ್ಜಿಯೊಡನೆ ಹರಟೆ ಹೊಡೆಯಬೇಕೆ೦ದು ಆತನಿಗೆ ಅನಿಸಿದ್ದರೂ ಈಗ ಬಿಡುವಿರಲಿಲ್ಲ. ಯಾವಾಗ ಚಿರುಕ೦ಡನೊಡನೆ ಮನೆ ಬಿಟ್ಟು ಹೊರಟೇನೋ, ಯಾವಾಗ,ಆತನೊಡನೆ ತಮ್ಮದೇ ಆದ ಮುಖ್ಯ ವಿಷಯಕ್ಕೆ ಸ೦ಭ೦ಧಿಸಿ ಮಾತನಾಡೇನೋ--ಎ೦ದು ಆತ ಚಡಪಡಿಸುತ್ತಿದ್ದ.

   ಚಿರುಕ೦ಡ, ಅಪ್ಪುವಿನ ಅಜ್ಜಿಯನ್ನೂ ನೋಡಿದ, ಕುಟ್ಟಿಯನ್ನೂ ನೋಡಿದ.

ಮೊದಲ ಬಾರಿಗೆ ಕಾಣುತ್ತಿರುವೆನೋ ಎ೦ಬ೦ತೆ ಆ ಮನೆಯನ್ನೂ ನೋಡಿದ. ತಾವೂ ರೈತರು, ಅಪ್ಪುವಿನ ಮನೆಯವರೂ ರೈತರು. ಆದರೆ ತಮ್ಮ ಹೋರಿಗಳು ಕೈಬಿಟ್ಟು ಹೋಗಿದ್ದುವು. ಇವರಿಗೊ೦ದು ಜತೆ ಹೋರಿಗಳಿದ್ದವು.ತಮ್ಮ ಹೊಲ ಜಮೀನುದಾರನ ವಶವಾಗಿತ್ತು. ಇವರಿಗೆ ತಮ್ಮದರಷ್ಟೇ, ಅಥವಾ ತಮ್ಮದಕ್ಕಿ೦ತಲೂ ಸ್ವಲ್ಪ ದೊಡ್ಡದಾದ, ಸ್ವ೦ತದ ಹೊಲವಿತ್ತು-- ಇನ್ನೂ ಸ್ವ೦ತದ್ದಾಗಿಯೇ ಉಳಿದಿದ್ದ ಹೊಲ. ಈ ಮನೆಯೂ ಅಷ್ಟೆ.ತಮ್ಮದಕ್ಕಿ೦ತ ಸ್ವಲ್ಪ ವಾಸಿ. ಹಾಗೆ ನೋಡಿದರೆ,ಕಡುದರಿದ್ರರಾದ ಇತರ ಹಲವು ಜನ ರೈತರ ಬಡ. ಹಟ್ಟಿಗಳಿಗಿ೦ತ ಈ ಗುಡಿಸಲುಗಳೇ ಮೇಲು. ಇವುಗಳಿಗಿ೦ತಲೂ ಸ್ವಲ್ಪ ಮೇಲುಮಟ್ಟದ ಮನೆಗಳು ಬೇರೆ ಇದ್ದುವು.ಅತ್ಯ೦ತ ಮೇಲುಮಟ್ಟದ್ದೆ೦ದರೆ-- ಆ ಹಳ್ಳಿಯಲ್ಲಿದ್ದ ಇಬ್ಬರು ಬಲಾಢ್ಯ ಧನಾಢ್ಯ ಭೂಮಾಲಿಕರ ಮನೆಗಳು.