ನಲ್ಲದೆ ಬೇರೆಯಿಲ್ಲ. ನಾನು ಹಾಗೆ ಹೇಳಿದೆನೆ? ಏನೆಂದು ಹೇಳಿದೆನು? ಏನೂ
ಇಲ್ಲ. 'ಫೌಜುದಾರನ ಮಗನಿಗೆ ನನ್ನಿಂದ ಕೇಡು ಸಂಭವಿಸಿತೆಂದರೆ, ಸಂಭವನೀ
ಯವೆ? ಎಂದಿಗೂ ಅಲ್ಲ. ಆಗಳಿನಿಂದಲೂ ನಾನು ಹೇಳುತ್ತಿದ್ದುದು ಒಂದೇ.
ನನ್ನಷ್ಟು ಕೂಗಿದರೂ, ನಾನು ಮಾತನಾಡಿದೆನೆ? ರಮೇಶನು ದೊಡ್ಡವನೋ –
'ಫೌಜುದಾರನ ಮಗನು ದೊಡ್ಡವನೋ??? -ಹೇಳುಹೇಳುತ್ತೆ, ಅವನು ಅಲ್ಲಿಂದ
ಕಾಲ್ಗೆಗೆದನು.
'ಫೌಜುದಾರನ ಮಗನ ಮರಣಸಂವಾದವನ್ನು ತಂದ ಆ ಕೃಷಕನು ಅದಿತಿ
ವಿಶಾರದನನ್ನು ಕುರಿತು- “ಮಹಾಶಯ! ತಮ್ಮ ಸೊಸೆಯವರೂ ಹಿಂದಿರುಗಿ ಮನೆ
ಗೆ ಬರುತ್ತಿದ್ದಾರೆ” ಎಂದನು.
ಕೇಳಿದೊಡನೆಯೆ, ವಿಶಾರದನು ಎಲ್ಲರ ಮೊಗವನ್ನೂ ನೋಡಿದನು. ಆರೂ
ಏನನ್ನೂ ಹೇಳಲಿಲ್ಲ. ಕೊನೆಗೆ, ವಿಶಾರದನು ತಾನಾಗಿಯೇ ಎಲ್ಲರೊಡನೆ “ಆ
ಯ್ಯ! ಈಗ ಮಾಡತಕ್ಕುದೇನು? ನನ್ನ ಹೊಸ ಯವನಪ್ಪರ್ಶಿತೆಯಾಗಿರುವಳು;
ಅಂತಗಳನ್ನು ಪುನಃ ಗ್ರಹಣಮಾಡಬಹುದೇ-ಕೂಡದೇ?” ಎಂದು ಕೇಳಿದನು.
ಅದಕ್ಕೆ ಅವರೆಲ್ಲರೂ--“ಮಹಾಶಯ! ತಾವು ಅದ್ವೀತಿಯ ಪಂಡಿತರು. ಇದರ
ಇತ್ಯರ್ಥವನ್ನು ತಾವೇ ಮಾಡಬೇಕಾಗಿದೆ. - ಎಂದರು. ವಿಶಾರದನು ಕೊಂಚ
ಹೊತ್ತು ಏನನ್ನೋ ಯೋಚಿಸುತ್ತಿದ್ದು, ಕೊನೆಗೆ ಒಳಗೆ ಹೋಗಿ, ಗೃಹಿಣಿಯೊಡ
ನೆ ಈ ವಿಚಾರವನ್ನು ಕುರಿತು ಆಲೋಚಿಸತೊಡಗಿದನು.
ಗೃಹಿಣಿಯು ಹೇಳಿದಳು:- “ಅದೇ ಹುಡುಗಿಯನ್ನು ಪುನಃ ಮನೆಗೆ? ಅದೇ
ನಿಮ್ಮ ಇಷ್ಟವಾದರೆ, ಬೇರೆಯ ಮನೆಮಾಡಿಕೊಂಡು ಸಂಸಾರಮಾಡಬಹುಮ!”
ಅದಿತಿ:- “ಏನು ಹಾಗೆಂದರೆ? ಅವಳಲ್ಲಿ ಏನು ದೋಷ?
ಗೃಹಿಣಿ:-ದೋಷವೆಲ್ಲವೂ ನನ್ನದೇ, ಹಾಗಾದರೆ!?
ಅದಿತಿ;-.-“ಇಲ್ಲ; ನಿನ್ನನ್ನು ದೋಷಿಯೆಂದು ಹೇಳಲಿಲ್ಲ. ಸೊಸೆಯನ್ನು ಪು
ನಃ ಕರೆದುಕೊಳ್ಳುವುದರಿಂದಾದರೂ ಉಂಟಾಗುವ ದೋಷವೇನೆಂದು ಕೇಳಿದೆನು;
ಅಷ್ಟೆ"
ಗೃಹಿಣಿ:-“ದೋಷವು ಏನೇ? ದೋಷವು ಎಷ್ಟೋ ಇದೆ. ಮೊದಲು,
ಜನರು ಮುಖಕ್ಕೆ ಕಪ್ಪು ಸುಣ್ಣವನ್ನು ಬರೆಯುವರು. ಆಮೇಲೆ, ಶಿಷ್ಯರು ಗುರುಗ
ಳನ್ನು ತ್ಯಾಗಮಾಡುವರು. ಆಗ ನಮ್ಮ ಮಕ್ಕಳುಮರಿಗಳಿಗೆ ಏನು ಗತಿ???
ಅದಿತಿ:-“ಜನರೇತಕ್ಕೆ ದೂರುವರು? ಶಿಷ್ಯರೇತಕ್ಕೆ ತ್ಯಜಿಸುವರು? ನಮ್ಮ
ಸೊಸೆಯೇನೂ ಕುಲತ್ಯಾಗಿನಿಯಲ್ಲ; ಇಚ್ಚಾಪೂರ್ವಕವಾಗಿ ಹೋದವಳಲ್ಲ; ಹೋದ
ಪುಟ:Daaminii.pdf/೨೧
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
15
ದಾಮಿನಿ.
