ಈ ಪುಟವನ್ನು ಪ್ರಕಟಿಸಲಾಗಿದೆ
ಉದ್ವಿಗ್ನಗೊಂಡಿದ್ದ ಭಾವನೆಗಳನ್ನು ಅದುಮಿ ಹಿಡಿಯುತ್ತಾ ರಂಗ ರಾಯರು ಜಯದೇವನ ಕೈ ಕುಲುಕಿದರು.
ಜಯದೇವನೆಂದ :
“ಆಗಾಗ್ಗೆ ಕಾಗ್ದ ಬರೀರಿ ಸಾರ್.”
*ಹೂಂ ಜಯದೇವ.”
ಬಸ್ಸು ಧೂಳೆಬ್ಬಿಸಿ ಹೊರಟು ಹೋಯಿತು.
ಆವರೆಗೂ ಗೌರವದಿಂದ ರಂಗರಾಯರನ್ನೂ ಬಸ್ಸನ್ನೂ ದೂರದಿಂದಲೇ ನೋಡುತಿದ್ದ ಹುಡುಗ ಜಯದೇವನ ಬಳಿಗೆ ಬಂದು ಕೇಳಿದ:
“ಅದ್ಯಾಕ್ಸಾರ್ ಕಳಿಸ್ಕೊಡೋಕೆ ಬೇರೆ ಯಾರೂ ಬರ್ಲಿಲ್ಲ?”
“ಯಾರಿಗೂ ಗೊತ್ತಿರ್ಲಿಲ್ಲ, ಅಕಸ್ಮಾತ್ ಇವತ್ತೇ ಹೊರಟ್ಬಿಟ್ರು....”