ಪುಟ:Duurada Nakshhatra.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉದ್ವಿಗ್ನಗೊಂಡಿದ್ದ ಭಾವನೆಗಳನ್ನು ಅದುಮಿ ಹಿಡಿಯುತ್ತಾ ರಂಗ ರಾಯರು ಜಯದೇವನ ಕೈ ಕುಲುಕಿದರು.

ಜಯದೇವನೆಂದ :

“ಆಗಾಗ್ಗೆ ಕಾಗ್ದ ಬರೀರಿ ಸಾರ್.”

*ಹೂಂ ಜಯದೇವ.”

ಬಸ್ಸು ಧೂಳೆಬ್ಬಿಸಿ ಹೊರಟು ಹೋಯಿತು.

ಆವರೆಗೂ ಗೌರವದಿಂದ ರಂಗರಾಯರನ್ನೂ ಬಸ್ಸನ್ನೂ ದೂರದಿಂದಲೇ ನೋಡುತಿದ್ದ ಹುಡುಗ ಜಯದೇವನ ಬಳಿಗೆ ಬಂದು ಕೇಳಿದ:

“ಅದ್ಯಾಕ್ಸಾರ್ ಕಳಿಸ್ಕೊಡೋಕೆ ಬೇರೆ ಯಾರೂ ಬರ್ಲಿಲ್ಲ?”

“ಯಾರಿಗೂ ಗೊತ್ತಿರ್ಲಿಲ್ಲ, ಅಕಸ್ಮಾತ್ ಇವತ್ತೇ ಹೊರಟ್ಬಿಟ್ರು....”