ಪುಟ:Duurada Nakshhatra.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಂಜುಂಡಯ್ಯ ಸುಮ್ಮನೆ ಕುಳಿತರು.

ಇದಕ್ಕೆಲ್ಲಾ ಪರಿಹಾರ ಅಂದ್ರೆ-ಜನಗಣಮನ. ರಾಷ್ಟ್ರಗೀತೆ ಹಾಕ್ಬೀಡೋಣ. ನಮ್ಮ ಹುಡುಗರಲ್ಲಿ ರಾಷ್ಟ್ರಾಭಿಮಾನ ತುಂಬಿದ ಹಾಗೂ ಆಗುತ್ತೆ. ಆಲ್ವೆ ಜಯದೇವ್?”

ಜಯದೇವ ಅಲ್ಲವೆನ್ನಲೂ ಇಲ್ಲ: ಹೌದೆನ್ನಲೂ ಇಲ್ಲ, ನಂಜುಂಡಯ್ಯನಿಗೂ ಒಂದುರೀತಿಯಲ್ಲಿ ಮುಖಭಂಗವಾಯಿತು.

ಆ ಸಾಯಂಕಾಲ ನಂಜುಂಡಯ್ಯ ಜಯದೇವನನ್ನು ಕರೆದರು.

“ಬನ್ನಿ, ವಾಕಿಂಗ್ ಹೋಗೋಣ.”

ತನ್ನೊಬ್ಬನನ್ನೇ ಕರೆಯುವುದೆಂದರೆ ವೆಂಕಟರಾಯರಿಗೆ ಅಪ್ರಿಯವಾದುದನ್ನೇನೋ ಮಾತಾಡುವುದಕ್ಕೋಸ್ಕರ ಇರಬೇಕು–ಎಂದು ಜಯದೇಷ ಊಹಿಸಿದ.

“ಇಲ್ಲ ಸಾರ್ ಕ್ಷಮಿಸಿ, ಇವತ್ತು ಬಟ್ಟೆ ಒಗೆದು ಹಾಕ್ಕೇಕು, ಬರೋದಿಲ್ಲ” ಎಂದು ಹೇಳಿ ಆತ ತಪ್ಪಿಸಿಕೊಂಡ.

ವೆಂಕಟರಾಯರು ಆಫೀಸು ಕೊಠಡಿಯಲ್ಲೂ ಸುಧಾರಣೆ ಮಾಡಿದರು. ಪಂಚಮ ಜಾರ್ಜರು ನಿವೃತ್ತರಾಗಬೇಕಾಯಿತು. ಊರಲ್ಲಿ ಸಂತೆಯ ದಿನ ಹೊಸ ಭಾವಚಿತ್ರಗಳನ್ನು ಕೊಂಡುತಂದರು. ಒಂದೆಡೆ ರಾಷ್ಟ್ರಾಧ್ಯಕ್ಷರು ಮತ್ತು ರಾಜಪ್ರಮುಖರು; ಇನ್ನೊಂದೆಡೆ ರಾಷ್ಟ್ರದ ಪ್ರಧಾನಿ ಮತ್ತು ಮೈಸೂರಿನ ಮುಖ್ಯ ಸಚಿವರು.

ಗೋಡೆ ಗಡಿಯಾರ ದುರಸ್ತಿಯಾಯಿತು.

ಶಾಲೆಗೊಬ್ಬ ಜವಾನ ಬೇಕೇಬೇಕೆಂದು ಆಗ್ರಹಪಡಿಸಿ, ವೆಂಕಟ ರಾಯರು ಮೇಲಧಿಕಾರಿಗಳಿಗೆ ಬರೆದರು. ಅಷ್ಟರವರೆಗೆ ತಾತ್ಕಾಲಿಕವಾಗಿ ಇರಲೆಂದು ತಿಂಗಳಿಗೆ ಎಂಟು ರೂಪಾಯಿ ಸಂಬಳದ ಮೇಲೆ, ಶಂಕರಪ್ಪನವರ ಸಹಾಯದಿಂದ, ಆಳೊಬ್ಬನನ್ನು ಗೊತ್ತು ಮಾಡಿದರು.

ಶಾಲೆಯ ಕೆಲಸವನ್ನಲ್ಲವಾದರೂ ಆ ಜವಾನ ವೆಂಕಟರಾಯರ ಸಮಸ್ತ ಕೆಲಸಗಳನ್ನೂ ಮಾಡಿದ.

ಆಡಳಿತದ ಶಿಸ್ತು-ಅಚ್ಚು ಕಟ್ಟು ಯಾರಾದರು ಮೆಚ್ಚುವಂಥದೇ. ಅದಕ್ಕಾಗಿ ವೆಂಕಟರಾಯರನ್ನು ಟೀಕಿಸುವ ಹಾಗೆಯೇ ಇರಲಿಲ್ಲ, ಆದರೆ ಅವರ