ಪುಟ:Duurada Nakshhatra.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧

ನಾಲ್ವತ್ತು ಮತ್ತು ಹದಿನೈದು ರೂಪಾಯಿ ಸಂಬಳ ಜಯದೇವನಿಗೆ ಬರುತಿತ್ತು, ಆ ಸಂಬಳವನ್ನು ತಾಲ್ಲೋಕು ಕೇಂದ್ರದಿಂದ ತರುವವರಿಗೆ ಪ್ರವಾಸ ಭತ್ತೆ ಒಂದು ರೂಪಾಯಿ. ಅಧಿಕೃತ ಜವಾನನಿದ್ದಿದ್ದರೆ ಆ ರೂಪಾಯಿಯನ್ನು ಆತನ ತಲೆಗೆ ಕಟ್ಟಬಹುದಿತ್ತು. ನಡೆದುಕೊಂಡೋ ಉಪವಾಸ ಬಿದ್ದೋ ಹೇಗಾದರೂ ಮಾಡಿ ಆತ ಹೋಗಿ ಬರುತಿದ್ದ.. ಆದರೆ ಜಯದೇವನಿದ್ದ ಶಾಲೆಗೆ ಸಂಬಂಧಿಸಿ ಅಂತಹ ತೊಂದರೆ ಇರಲಿಲ್ಲ. ಯಾಕೆಂದರೆ, ನಂಜುಂಡಯ್ಯನೇ ಆ ಕೆಲಸ ಮಾಡುತಿದ್ದರು. ಅವರು ಒಂದು ರೂಪಾಯಿಯನ್ನೇನೋ ಪಡೆಯುತಿದ್ದರೂ ಸ್ವಂತದ ಐದು ರೂಪಾಯಿ ವೆಚ್ಚ ಮಾಡದೆ ಹಿಂತಿರುಗುತ್ತಿರಲಿಲ್ಲ. ಒಂದೆರಡು ದಿನ ತಡವಾಗಿ ಅವರು ವಾಪಸ್ಸು ಬಂದರೂ ಬಂದರೇ.

ಒಮ್ಮೆ ವೆಂಕಟರಾಯರೆಂದರು:

“ಅಲ್ಲ ಜಯದೇವ್, ನಮ್ಮ ನಂಜುಂಡಯ್ಯ ತುಂಬಾ ರಸಿಕರೂಂತ ಕಾಣುತ್ತೆ.”

ನಂಜುಂಡಯ್ಯನ ವಿದ್ವತ್ತಿನ ಕುರಿತು ಯೋಚಿಸಿ ಜಯದೇವ ಗೌರವ ತಳೆದುದಿತ್ತೇ ಹೊರತು, ರಸಿಕತೆಯ ವಿಷಯ ಅವನ ಗಮನಕ್ಕೆ బందిరలిల్ల. ಹೀಗಾಗಿ, ವೆಂಕಟರಾಯರಿಗೆ ಏನು ಉತ್ತರ ಕೊಡಬೇಕೆಂದು ತಿಳಿಯದೆ, ಪ್ರಶಾರ್ಥಕ ದೃಷ್ಟಿಯಿಂದ ಅವರನ್ನೆ ಜಯದೇವ ನೋಡಿದ.

“ಸಂಬಳ ತರೋ ಕೆಲಸ ಒಂದು ಸಲವಾದರೂ ನಂಜುಂಡಯ್ಯ ತಪ್ಪಿಸ್ಕೋಳ್ಳೋದೇ ಇಲ್ವಲ್ರಿ! ಅಂತೂ ಅಲ್ಲಿ ಮಜಾ ಮಾಡಿ ವಾಪಸ್ಸು ಬರ್ತಾರೆ...ಸಿನಿಮಾ ಗಿನಿಮಾ ನೋಡ್ಕೊಂಡು...”

ಈ ಊರಿನಲ್ಲಿ ಸಿನೀಮಾ ಇರಲಿಲ್ಲ, ನಾಟಕ ಕಂಪೆನಿಯೊಂದು ಬಂದು. ಡೇರೆ ಹಾಕಿ ದಿವಾಳಿಯೆದು ಹೋಗಿತ್ತಂತೆ ಹಿಂದಿನ ವರ್ಷ.

“ಇರಬಹುದು ಸಾರ್, ಮನರಂಜನೆಯೇ ಇಲ್ಲ ನೋಡಿ ಈ ಪುಟ್ಟ ಊರಲ್ಲಿ.” -

“ನಿಮಗೆ ಇಲ್ಲಿ ಬೇಜಾರಾಗೊಲ್ವೆ ಜಯದೇವ್?”