ಪುಟ:Duurada Nakshhatra.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ದೂ ತಮಾಷೆಯ ತಿಳಿವಳಿಕೆಯೇ.

“ಆಗಲೀಪ್ಪ.. ನಿನಗೆ ಪಾಠ ಈಗ ಮಾಡೋಣವೋ ಬೆಳಗ್ಗೆ ಮಾಡೋಣವೋ ?

“ಬೆಳಗ್ಗೆ ಮಾಡೋಣ ಸಾರ್. ನನಗೆ ಅಕ್ಕನ ಜತೇಲಿ ಮಾತಾಡ್ಬೇಕು"

ಜಯದೇವನಿಗೂ ಏಕಾಂತ ಬೇಕಾಗಿತ್ತು, ಆಗ ಪಾಠ ಹೇಳಿಕೊಡುವ ಮನಸ್ಸು ಆತನಿಗಿರಲಿಲ್ಲ. ಅವನು ಆರಾಮಕುರ್ಚಿಯ ಮೇಲೆ ಕುಳಿತ.

“ಹಾಸನ್ದಲ್ಲಿ ಕಾಲೇಜಿದೆಯಂತೆ ಸಾರ್.”

"ಇದೆ...."

“ಆದರೆ ಕಟ್ಟಡ ಅಷ್ಟೇನೂ ಚೆನಾಗಿಲ್ವಂತೆ...”

ಜಯದೇವ ಏನೂ ಹೇಳದೆ ಕಿಟಕಿಯ ಹೊರಗೆ ಆಕಾಶದಲ್ಲಿ ಕಾಣುತಿದ್ದ ತಾರೆಗಳನ್ನು ನೋಡುತ್ತ ಕುಳಿತ.

ನಾಗರಾಜನೂ ಜಯದೇವರ ನಿರಾಸಕ್ತಿಯನ್ನು ಗಮನಿಸಿ, “ಬರ್ತಿನಿ ಸಾರ್” ಎಂದು ಕೆಳಕ್ಕಿಳಿದು ಹೋದ. *

ಆದರೆ ಸ್ವಲ್ಪ ಹೊತ್ತಿನಲ್ಲೆ ಹಿಂತಿರುಗಿ ಬರದಿರಲಿಲ್ಲ. ಅವನ ಕೈಯಲ್ಲಿ ಬೆಳ್ಳಿಯ ತಟ್ಟೆಯಲ್ಲಿ ಆರೆಂಟು ರಸಬಾಳೆ ಹಣ್ಣುಗಳಿದುವು.

“ಅಮ್ಮ ಕೊಟ್ಬಿಟ್ಟು ಬಾ ಅಂದು ಸಾರ್.”

“ನನಗೆ ಊಟವಾಗಿದೆ ನಾಗರಾಜ.”

“ಊಟವಾದ್ಯೇಲೆ ಅಲ್ವೇ ಸಾರ್ ಹಣ್ಣು ತಿನ್ನೋದು ?”

ತಟ್ಟೆಯನ್ನು ಹಾಗೆಯೇ ಅಲ್ಲಿ ಇರಿಸುವುದರಲ್ಲಿದ್ದ ನಾಗರಾಜನನ್ನು ತಡೆದು, ಹಣ್ಣಗಳನ್ನೆತ್ತಿಕೊಂಡು ತಟ್ಟೆಯನ್ನು ಜಯದೇವ ಹಿಂದಕ್ಕೆ ಕಳುಹಿಸಿದ

ಎರಡು ಹಣ್ಣುಗಳು ಆಹಾರವಾದುವು. ಒಂದು ಲೋಟ ನೀರು ಪಾನೀಯವಾಯಿತು, ಹಾಸಿಗೆ ಬಿಡಿಸಿಕೊಂಡು ದೀಪ ಆರಿಸಿ ದಿಂಬಿಗೆ ಜಯದೇವ ತಲೆಯಾನಿಸಿದ

ಕೆಳಗೆ ಹಜಾರದಲ್ಲಿ ಯಾರೋ ನಗುತಿದ್ದರು... ಹೆಂಗಸಿನ ನಗು... ಯುವತಿ.ನಾಗರಾಜನ ಅಕ್ಕನೇನೋ...