ಪುಟ:Duurada Nakshhatra.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

.ಬೆಂಗಳೂರಲ್ಲಿ ಅಷ್ಟು ಹೊತ್ತಿಗೆ ವೇಣು-ಸುನಂದ ಏನು ಮಾಡುತ್ತಿರಬಹುದು? ನಿದ್ದೆ?...

.ಬಾಲ್ಯದ ನೆನಪುಗಳು...ಅಂತೂ ತಾನು ಉಪಾಧ್ಯಾಯನಾದೆ. ಎಂತಹ ಉಪಾಧ್ಯಾಯ !

ಕಣ್ಣುಗಳು ತೇವವಾದುವು. ಜಯದೇವ ಮಗ್ಗುಲು ಹೊರಳಿ ಕತ್ತಲೆಯಲ್ಲಿ ಕಾಣದೆ ಇದ್ದ ಛಾವಣಿಯನ್ನೇ ದಿಟ್ಟಿಸಿ ನೋಡುತ್ತ ನಿದ್ದೆ ಹೋಗಲು ಯತ್ನಿಸಿದ.