ಪುಟ:Duurada Nakshhatra.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇರ್ತೀರೇನು? ನಾಳೆ ಮದುವೆ ಆಗ್ತೀರ, ಆಗ ಎಲ್ಲಿಗೆ ಸಾಕು ನಿಮಗೆ ಬರೋ ೪೦+೧೫. ಆಗ್ಲೂ ಟ್ಯೂಷನ್ ಒಲ್ಲೇಂತ ಹಟ ತೊಡ್ರೀರೇನು?

ಜಯದೇವನಿಂದ ಉತ್ತರವನ್ನು ನಿರೀಕ್ಷಿಸಿ ನಂಜುಂಡಯ್ಯ ಮಾತು ತಡೆದರು. ಅನುಭವ ಅವರ ಬಾಯಲ್ಲಿ ಸತ್ಯಾಂಶವನ್ನೇ ನುಡಿಸಿತ್ತು, ಅದನ್ನು ಜಯದೇವ ಅಲ್ಲಗಳೆಯುವುದು ಸಾಧ್ಯವಿತ್ತೆ ? ಆತ ನಿರುತ್ತರನಾದುದನ್ನು ಕಂಡು ಸಂತೋಷಪಡುತ್ತ ನಂಜುಂಡಯ್ಯನೆಂದರು.

“ನನ್ನ ವಿಷಯವೇ ತಗೊಳ್ಳಿ, ನನಗೇನೋ ಆಸ್ತಿಪಾಸ್ತಿ ಇದೆ. ಈ ಸಂಬ೪ಾನ ನಾನು ನೆಚ್ಕೊಬೇಕಾದ್ದಿಲ್ಲ, ಆದರೆ ನಾಳೆ ದಿವಸ ನಾವು ಖಾಸಗಿಯಾಗಿ ಹೈಸ್ಕೂಲು ಷುರು ಮಾಡ್ದಾಗ? ನಾನು ಗೌರವದ ಕೆಲಸಾಂತ ಮುಖ್ಯೋಪಾಧ್ಯಾಯನಾಗ್ಬಹುದು. ಬೇರೆಯವರೂ ಹಾಗೆ ಬರ್ತಾರೇನು? ಅವರಿಗೆ ನ್ಯಾಯವಾಗಿಯೇ ಸಂಬಳ ಕೊಡ್ಬೇಕು. ಆದರೆ ಎಷ್ಟೂಂತ ಕೊಡೋದಕ್ಕಾದೀತು? ಖಾಸಗಿ ಸಂಸ್ಕೆ, ಸರಕಾರದ ಕೈಲಿ ಇರೋವಷ್ಟು ದುಡ್ಡು ನಮ್ಕೈಲಿ ಇರೋದಿಲ್ಲ ಆಗ?... ಹೀಗಿದೆ ನೋಡಿ ವಿಷಯ...”

ಹಾಗಿತ್ತು ವಿಷಯ. ಮಾತು ಎಲ್ಲಿಗೋ ಸಾಗಿ ಮುಂದೆ ನಂಜುಂಡಯ್ಯನವರ ನೇತೃತ್ವದಲ್ಲಿ ಎಂದಾದರೊ೦ದು ದಿನ ಸ್ಠಾಪಿತವಾಗಬೇಕಾದ ಹೈಸ್ಕೂಲಿನ ತನಕ ಬಂದು ನಿಂತಿತು.

ಆ ಚರ್ಚೆ ಅಷ್ಟು ಸಾಕೆಂದು ನಂಜುಂಡಯ್ಯನೂ ಭಾವಿಸಿದರು. ಗುಣದಲ್ಲಿ, ವಿದ್ವತ್ತಿನಲ್ಲಿ, ವೆಂಕಟರಾಯರಿಗಿಂತ ತಾವು ಮೇಲು ಎಂದು ಅವರು ಜಯದೇವನಿಗೆ ತೋರಿಸಿ ಕೊಟ್ಟಿದ್ದರು. ಅಷ್ಟರಿಂದಲೇ ಅವರಿಗೆ ತೃಪ್ತಿಯಾಯಿತು. ಗೆಳೆತನಕ್ಕೂ ತನ್ನ ಹೃದಯದಲ್ಲಿರುವ ಸ್ಠಾನ ಕಡಮೆಯಾದುದೇನೂ ಅಲ್ಲವೆಂಬುದನ್ನು ತೋರಿಸುವಂತೆ ನಂಜುಂಡಯ್ಯ ಕೇಳಿದರು:

“ನೀವು ಬಹಳ ಇಳಿದ್ದೋಗ್ಬಿಟ್ಟಿದೀರಿ ಜಯದೇವ್.”

"ಹೌದೆ ಸಾರ್?"

“ಹೌದು. ಯಾಕೆ, ಮೈ ಚೆನಾಗಿಲ್ವೆ?

“ಇದೆಯಲ್ಲ !”