ಪುಟ:Duurada Nakshhatra.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕರಿಂದ, ಯಾವನ, ಜೋಗಿನ ಜಲಪ ತ ಇದ್ದಹಾಗೆ ಅದರ ಸದ್ವ್ಯಯ ಆಗಬೇಕು.

ವೆಂಕಟರಾಯರು ಬರುತಿದ್ದುದರಿಂದ ಮಾತು ಅಲ್ಲಿಗೇ ನಿಂತಿತು.

ತಿಳಿಯಾದ ಜಲರಾಶಿಯಲ್ಲಿ ಮುಳುಗಿ ಎದ್ದು ಹೊರಬಂದ ಹಾಗೆ, ಜಯದೇವನ ಹೃದಯ-ಮೆದುಳು ನಿರ್ಮಲವಾಗಿದುವು. ಆತ ಕುಳಿತಲ್ಲಿಂದ ಎದ್ದು, ಒಬ್ಬನೇ ಅಲ್ಲೇ ದೂರ ಸರಿದ.

ಆ ರಾತ್ರೆಯೇ ಮನೆಗೆ ಹೊರಡುತ್ತ ವೆಂಕಟರಾಯರು ಕೇಳಿದರು :

“ಏನು ಜಯದೇವ, ಮಾತುಕತೆ ನಡೆದಿತ್ತಲ್ಲಾ..”

ಸುಳ್ಳಿನ ಹೊರತು ಬೇರೆ ಹಾದಿ ಇರಲಿಲ್ಲ.

“ಒಬ್ಬನೇ ಯಾಕಿದೀಯಾಂತ ಕೇಳ್ತಾ ಇದ್ರು”

“ಅಷ್ಟೇನಾ!”

'ಹೂಂ.”

“ಯಾವಾಗ ಹೊರಡ್ತಾರಂತೆ?

“ನಾಳೇನೇ”

“ನಾಳೆ ರಜೆಕೊಟ್ಬಿಡೋಣ. ನನಗಂತೂ ಇಪ್ಪತ್ತನಾಲ್ಕು ಘಂಟೆ ಅಖಂಡ ನಿದ್ದೆ ಮಾಡ್ಬೇಕು!”