ಪುಟ:Duurada Nakshhatra.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಹಾಗಂದ್ರೆ ಸಾಲ್ದು, ನೀವು ಪೂರ್ತಿ ಜವಾಬ್ದಾರಿ ತಗೋಬೇಕು.”

“ಆಗಲಿ--ಆಗಲಿ."

“ಮೂರು ವಾರ ತಯಾರಿ ಮಾಡಿದ್ರೆ ಸಾಕಲ್ವೆ? ಇಲ್ದೆ ಹೋದ್ರೆ. ನಾಟಕ-ನಾಟಕ ಅಂತ ಹುಡುಗ್ರು ಕೆಟ್ಟು ಹೋಗ್ತಾರೆ”

ಹುಡುಗರು ಮುಂದೆ ಉತ್ತೀರ್ಣರಾಗದೆ ಇದ್ದರೆ ಅದಕ್ಕೆ ನೀನೇ ಕಾರಣನಾಗುವೆ–ಎಂದು ಎಚ್ಚರಿಸಿದ ಹಾಗಿತ್ತು ಆ ಮಾತು.

“ನಾಟಕಗಳೂ ಚೆನಾಗಿರ್ಬೇಕು, ಯಾವುದನ್ನು ಆರಿಸ್ತೀರೋ' ಬಂದು ಹೇಳಿ,” ಎಂಬ ನಿರ್ದೇಶ ಜತೆಯಲ್ಲೆ.

ಆಯ್ಕೆ ಸುಲಭವಾಗಿರಲಿಲ್ಲ, ವೇಣುಗೋಪಾಲನಿಗೆ ಬರೆಯೋಣವೆ? -ಎಂಬ ಯೋಚನೆ ಬಂತು. ಆದರೆ ಅದು ಬೇಗನೆ ಆಗುವ ಕೆಲಸವಲ್ಲ. ತನ್ನಲ್ಲಂತೂ ಯಾವುದೂ ಇರಲಿಲ್ಲ. ' ಕನ್ನಡದಲ್ಲಿ ಸಾಕಷ್ಟು ಒಳ್ಳೆಯ. ನಾಟಕಗಳೇ ಇಲ್ಲ, ಹುಡುಗರಿಗಾಗಿಯೇ ಬರೆದ ಮೆಚ್ಚಿಕೊಳ್ಳುವ ನಾಟಕಗಳಂತೂ ಇಲ್ಲವೇ ಇಲ್ಲ—' ಎಂದು ಯಾರೋ ಸಾಹಿತಿಯೊಬ್ಬರು ಹಿಂದೆ ಒಂದು ಭಾಷಣದಲ್ಲಿ ಹೇಳಿದುದು ಜಯದೇವನ ನೆನಪಿಗೆ ಬಂತು. ಆ ಮಾತು ಸುಳ್ಳಾಗಿರಲಿಲ್ಲ, ಶಾಲೆಯ ಪುಸ್ತಕ ಭಂಡಾರದಲ್ಲಿದ್ದ ನಾಟಕಗಳು ಎರಡೇ ಎರಡು : ವಿ.ಸೀ. ಯವರ 'ಸೊಹ್ರಾಬ್-ರುಸ್ತುಂ' ಮತ್ತು ಚಿ.ಸದಾಶಿವಯ್ಯನವರ 'ಜಯಶ್ರೀ', ಎರಡು ನಾಟಕಗಳೂ ಅಲ್ಲಿನ ಹುಡುಗರ ಮಟ್ಟವನ್ನು ಮೀರಿದ್ದವು. ಆದರೆ 'ಸೊಹಾಬ್-ರುಸ್ತುಂ' ನಾಟಕದಲ್ಲಿನ ಹೃದಯಸ್ಪರ್ಶಿಯಾದ ಮಾನವೀಯ ಸಂಬಂಧವನ್ನು ಆ ಹುಡುಗರೂ ಕೂಡಾ ಅಭಿನಯಿಸಿ ತೋರಿಸುವುದು ಸಾಧ್ಯವಾದೀತೆಂದು ಜಯದೇವನಿಗೆ. ತೋರಿತು.

'ಸೊಹಾಬ್-ರುಸ್ಸುಂ' ನಾಟಕದ ಹೆಸರೆತ್ತಿದಾಗ ಮುಖ್ಯೋಪಾಧ್ಯಾಯರು ಮೊದಲು ಮೂಗು ಮುರಿದರು. ಅದು ಒಳ್ಳೆಯ ನಾಟಕಎಂಬ ಕಾರಣದಿಂದ ಅದನ್ನೊಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ, ಆದರೆ ಅದನ್ನು ಬರೆದವರು ವಿ.ಸೀ. ಯವರೆಂದು ತಿಳಿದ ಬಳಿಕ, “ಆಗಬಹುದು” ಎಂದರು.

ಹುಡುಗರ ನಾಟಕದಲ್ಲಿ ಸ್ತ್ರೀ ಪಾತ್ರವನ್ನು ಹುಡುಗರೇ ವಹಿಸಬೇಕಾಗಿತ್ತು, ಹುಡುಗಿಯರ ನಾಟಕದಲ್ಲಿ ಅವರೇ ಪುರುಷರು, ಬೆಂಗಳೂರಲ್ಲೇ