ಪುಟ:Duurada Nakshhatra.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಕಾಫಿಗೆ ಪುರಸೊತ್ತು ಇದೆಯೊ?"

“ಓ! ಅದಕ್ಕೇನ್ಸಾರ್ ಹೋಗ್ಬನ್ನಿ..”

ಒಂದು ರೂಪಾಯಿ ಒಂದಾಣೆ ಕೊಟ್ಟ ಜಯದೇವ ಟಿಕೆಟು ಪಡೆದು ಕೊಂಡ. ಪುಸ್ತಕಗಳ ಚೀಲವನ್ನು ತಾನು ಕುಳಿತಿದ್ದ ಸಾನಕ್ಕೇರಿಸಿ, “ಸ್ವಲ್ಪ ನೋಡ್ಕೋತೀರಾ?” ಎಂದು ಪಕ್ಕದವರನ್ನು, 'ದಯವಿಟ್ಟ ನೋಡಿಕೊಳ್ಳಿ' ಎಂಬರ್ಥದಲ್ಲಿ ಕೇಳಿ, ಕೆಳಕ್ಕಿಳಿದ.

ಅಲ್ಲೇ ಇತ್ತು ಉಡುಪಿ ಬ್ರಾಹ್ಮಣರ ಹೋಟೆಲು.

“ಈ ಸಾಹಸಿಗಳಿಲ್ಲದ ಊರೇ ಇಲ್ಲ."

-ಎಂದುಕೊಂಡು ಜಯದೇವ ಆತ್ತ ಸಾಗಿದ. ಆತ ಕಾಫಿಗೆಂದು

'ನಮ್ಮ ಜನರೇ ಹಾಗೆ. ಒಬ್ಬರು ಮುನ್ನುಗ್ಗದೇ ಇದ್ದರೆ ಅವರಿಗೆ ಧೈರ್ಯವೇ ಬರೋದಿಲ್ಲ.'

ಆತ ಅವಸರವಾಗಿ ಮುಖ ತೊಳೆದು, ಎರಡು ಇಡ್ಲಿ ತಿಂದು, ಕಾಫಿ ಕುಡಿದು ದುಡ್ಡು ಕೊಡುತ್ತಿದ್ದಂತೆ, ಹೊಸತಾಗಿ ತೋರಿದ ದಿನಪತ್ರಿಕೆಯೊಂದು ಅವನ ಕಣ್ಣಿಗೆ ಬಿತ್ತು.

"ಇವತ್ತಿನ್ದೆ ಪೇಪರು?"

ದುಡ್ಡು ಪಡೆಯುತ್ತಿದ್ದವರು "ಹೌದು" ಎಂದರು,

ಮಡಚಿದ್ದ ಪತ್ರಿಕೆಯನ್ನು ಎತ್ತಿ ಬಿಡಿಸಿದ ಜಯದೇವ. ಆದರೆ ಪುಟದ ಅಗಲಕ್ಕೂ ಇದ್ದ ಶಿರೋನಾಮೆ....... ಅದನ್ನು ಈಗಾಗಲೇ ತಾನು ಓದಿದ್ದನಲ್ಲವೆ?

"ಇದು ಹಳೇದು."

ಆದರೆ ಹೋಟ್ಲಿನವನು ಬುದ್ಧಿವಂತನಾಗಿದ್ದಂತೆ ತೋರಿತು.

"ನೀವು ಬೆಂಗಳೂರಿಂದ ಬಂದಿರಾ?"

"ಹೌದು."

"ಸರಿ ಮತ್ತೆ ! ನೀವು ನಿನ್ನೆ ಅಲ್ಲಿ ಓದಿದ್ದೇ ನಮಗೆ ಇಲ್ಲಿ ಇವತ್ತಿನ್ದು!"