ಪುಟ:Duurada Nakshhatra.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮರುದಿನ ಬೆಳಗ್ಗೆ ನಂಜುಂಡಯ್ಯ ಬರಲಿಲ್ಲ. ಆದರೆ ಒಂಬತ್ತು ಘಂಟೆಗೆ ಒಬ್ಬ ಹುಡುಗ ಬಂದ.

“ನಂಜುಂಡಯ್ಯನವರ ತಮ್ಮ ಬಂದಿದ್ದಾಬೆ ಜಯದೇವ,” ಎಂದರು ರಂಗರಾಯರು.

“ನಮ್ಮ ಅಣ್ಣ ಹೊಸ ಮೇಷ್ಟ್ರನ್ನ ಕರಕೊಂಡು ಬಾ ಅಂದ್ರು ಸಾರ್.” ಎಂದ ಆ ಹುಡುಗನೂ, ಗೌರವದಿಂದ ಆತ ಜಯದೇವನನ್ನೇ ದಿಟ್ಟಿಸುತಿದ್ದ ಆ ಕಣ್ಣುಗಳ ಸ್ವಚ್ಛತೆ ಮುಗ್ಧತೆ ಮೋಹಕವಾಗಿದ್ದವು.

ಅದೇ ಆಗ ಸ್ನಾನ ಮುಗಿಸಿದ್ದ ಜಯದೇವ ಹೊರಡಲು ಸಿದ್ಧನಾಗುತಿದ್ದಂತೆ ರಂಗರಾಯರೆಂದರು:

ನಾನು ಶಾಲೆಗೆ ಹೋಗಿರ್ತೀನಿ. ನಂಜುಂಡಯ್ಯನವರ ಜತೇಲೆ ನೀವು ಹಾಗೇನೆ ಬಂದ್ಬಿಡಿ.”

“ಆಗಲಿ.”

“ಐದು ನಿಮಿಷ ಬೇಗನೆ ಬನ್ನಿ, ಪಾಠ ಗೊತ್ಮಾಡೋಣ.”

“ಹೂಂ......"

ಹಾದಿಯಲ್ಲಿ ಹುಡುಗ ಸಂಕೋಚದಿಂದ ಜಯದೇವನಿಗಿಂತ ಒಂದು ಹೆಜ್ಜೆ ಹಿಂದೆ ಆತನ ಎಡಭಾಗದಲ್ಲಿ ನಡೆದ.

“ನೀನು ಹಿಂದೇನೇ ಇದ್ರೆ ಹ್ಯಾಗಪ್ಪ ನಡೆಯೋದು ? ನಾನು ಹಾದಿ ತಿಳೀದ ಹೊಸಬ.*

“ಪರವಾಗಿಲ್ಲ ಸಾರ್. ನಾನಿದೀನಿ"

“ನಿನ್ನ ಹೆಸರು?

“ವಿರೂಪಾಕ್ಷ”

“ಯಾವ ಕ್ಲಾಸು?”

“ಈ ವರ್ಷ ನಾಲ್ಕನೆ ತರಗತಿ ಸಾರ್.”

“ಆಮೇಲೆ ಹೈಸ್ಕೂಲ್ಗೆ ಹೋಗ್ವೇಕು ಅಲ್ವೆ?

*ಹೂಂ ಸಾರ್."