ಪುಟ:Duurada Nakshhatra.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ವಲ್ಪ ತಡೆದು ನಂಜುಂಡಯ್ಯನೇ ಅಂದರು:

"ಮೊದಲಿಂದೆರಡೂ ಗಂಡು. ಎರಡೂ ತೀರಿಕೊಂಡ್ವು–”

"ಓ!"

ವಿರೂಪಾಕ್ಷ ಬಂದು, ಊಟದ ಸಿದ್ಧತೆಯಾಗಿದೆಯೆಂದು ಸೂಚನೆಯನ್ನಿತ್ತ, ಆಮಂತ್ರಿತನನ್ನು ಕರೆದುಕೊಂಡು ನಂಜುಂಡಯ್ಯ ಒಳನಡೆದರು.

ಆ ರೀತಿಯ ಊಟ ಜಯದೇವನಿಗೆ ಹೊಸತಾಗಿರಲಿಲ್ಲ.

ದಿನದ ಊಟಕ್ಕಿಂತಲೂ ಆ ದಿನ ಒಂದು ಸಿಹಿ ಜಾಸ್ತಿಯಾಗಿತ್ತು. ಮನೆಯೊಡತಿ ಬಡಿಸಲು ಹತ್ತಿರ ಬಂದೊಡನೆ ನಂಜುಂಡಯ್ಯನೆನ್ನುತ್ತಿದ್ದರು:

“ನೀಡು,ಇನ್ನೂ ಅಷ್ಟು ನೀಡು. ಬೆಂಗಳೂರ್ನೋರ್ಗೆ, ಸಂಕೋಚ ಜಾಸ್ತಿ”

ಆ ಮನೆಯೊಡತಿ ಮಾತನಾಡುತ್ತಿರಲಿಲ್ಲ, ಗಾಂಭೀರ್ಯ ತಳೆದಿದ್ದ ಆ ಮುಖದಲ್ಲಿ ಕಣ್ಣುಗಳಷ್ಟೆ ನಿರಂತರವಾಗಿ ಚಲಿಸುತ್ತಾ ಮುಗುಳುನಗು ಸೂಚಿಸುತ್ತಿದ್ದವು. ಎರಡು ಗಂಡು ಮಕ್ಕಳನ್ನು ಕಳೆದುಕೊಂಡಿದ್ದ ಆ ತಾಯಿಯು ಹೃದಯದಲ್ಲಿ ಒಬ್ಬಂಟಿಗನಾದ ಈ ಎಳೆಯನಿಗಾಗಿ-ಜಯದೇವನಿಗಾಗಿ-ವಾತ್ಸಲ್ಯವಿತ್ತು. ಅವರನ್ನು ನೋಡುತ್ತಲಿದ್ದಂತೆ ಜಯದೇವನಿಗೆ ಅವರ ಬಗೆಗೆ ಗೌರವ ಉತ್ಪನ್ನವಾಯಿತು.

ದೂರದಲ್ಲಿ ಬಾಗಿಲ ಬಳಿ ತುಂಬಾ ವಯಸಾಗಿದ್ದವರೊಬ್ಬರು ಕುಳಿತಿದ್ದರು. ಅಪರನು ತೋರಿಸುತ್ತ ನಂಜುಂಡಯ್ಯನೆಂದರು:

"ನಮ್ಮವ್ವ"

ಆ ಬಳಿಕ ಗಟ್ಟಿಯಾಗಿ ಆ ಅವ್ವನನ್ನುದ್ದೇಶಿಸಿ ಅವರೆಂದರು:

“ಏ ಅವ್ವಾ..ಇವರೇ ನೋಡು ಒಸ್ಮೇಷ್ಟ್ರು.'

ಆ ಮಾತು ಕೇಳಿಸಿದಂತೆ ಹಲ್ಲಿಲ್ಲದ ಆ ಬಾಯಿ ಸ್ವಾಗತದ ನಗೆ ನಕ್ಕಿತು. ಕಣಗಳನ್ನು ಕಿರಿದುಗೊಳಿಸುತ್ತಾ ಆ ಮುದುಕಿ ಹೆಚ್ಚು ಸೂಕ್ಷ್ಮವಾಗಿ ಹೊಸ ಮೇಷ್ಟ್ರನ್ನು ನೋಡಲೆಳಸಿದಳು ಆದರೆ ಪ್ರಟ್ಟ ಮೊಮ್ಮಗಳು ಅಜ್ಜಿಯ ಬಳಿಗೋಡಿ ಮಡಿಲನ್ನೇರಲೆತ್ನಿಸುತ್ತಾ ತೊಂದರೆ ಕೊಟ್ಟಳು.

ರುಚಿಕರವಾಗಿದ್ದ ಆ ಊಟ ಮುಗಿಯುತ್ತ ಬಂದಂತೆ ನಂಜುಂಡಯ್ಯ ಅಂದರು;

“ನಿನ್ನೆ ನಿಮ್ಮನ್ನ ಊಟಕ್ಕೆ ಕರೆದಾಗ ನೀವು ಬರ್ತಿರಿ ಅಂತ ನನಗೆ ನಂಬಿಕೆ ಇರಲಿಲ್ಲ.”