ಪುಟ:Duurada Nakshhatra.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಡೆಯುತಿದ್ದಂತೆ ಮೌನ ತರವಲ್ಲವೆಂದು ಜಯದೇವನೆಂದ:

“ರಂಗರಾಯರು ಬೆಳಗ್ಗೆ ಬೇಗ್ನೆ ಶಾಲೆಗೆ ಹೋಗ್ತಾರೇಂತ ಕಾಣುತ್ತೆ”

“ಹೌದು, ಮಧಾಹ್ನದ ವಿರಾಮದಲ್ಲಿ ಊಟಕ್ಕೆ ಹೋಗಿಬರ್ತಾರೆ.”

ಮುಂದೇನು ಹೇಳಬೇಕೆಂದು ತಿಳಿಯದೆ ಜಯದೇವ ಮೌನವಾದ, ಒಮ್ಮೆಲೆ ಬೇಸರದ ಛಾಯೆಯೊಂದು ಆತನನ್ನು ಆವರಿಸಿ, ಉಸಿರಾಡುವುದು ಕಷ್ಟವಾಯಿತು. ಎಳೆಯ ವಿದ್ಯಾರ್ಥಿಗಳೊಡನೆ ಬೆರೆತು, ಆ ಸುಂದರಲೋಕದಲ್ಲಿ ಅವರ ಒಡನಾಡಿಯಾಗಿ, ಭಾವೀ ಪ್ರಜೆಗಳನ್ನು ರೂಪಿಸಲು ನೆರವಾಗುವ ಹಲವೊಂದು ಕನಸುಗಳನು ಆತ ಕಂಡಿದ್ದ, ಆದರೆ ವಸ್ತುಸ್ಥಿತಿ ಅಷ್ಟು ಸರಳವಾಗಿರಲಿಲ್ಲ; ಆತನ ಕೆಲಸ ಅಷ್ಟು ಸುಲಭವಾಗಿರಲಿಲ್ಲ.

"ತರಗತಿ ವಿಷಯ ಯೋಚಿಸ್ತಿದೀರಾ?

ಜಯದೇವ ನಿರ್ದಿಷ್ಟವಾಗಿ ಆಲೋಚನೆಯನ್ನು ಮಾದುತ್ತಿರಲಿಲ್ಲ. ಆದರೂ, ಮನಸಿನಲ್ಲಿದ್ದುದನ್ನೆ ಹೇಳಲಾಗದೆ, ಅವನೆಂದ, ಆದರೂ, ಮನಸಿನಲ್ಲಿದುದನ್ನೆ ಹೇಳಲಾಗದೆ, ಅವನೆಂದ:

"ಹೂಂ ಒಂದು ರೀತಿ ಹಾಗೆಂತ ಅನ್ಬಹುದು."

“ನನ್ನ ಕೇಳಿದರೆ, ಈ ಪಾಠ ಹೇಳ್ಕೊಡೋದೆಲ್ಲ ಬಹಳ ಸುಲಭ. ಅದರ ಬದಲು ನೀವು ವಸತಿ ಊಟದ ಯೋಚನೆ ಮಾಡ್ಬೇಕು.”

“ಅದೂ ನಿಜವೇ!"

“ಏನು ತೀರ್ಮಾನ ಮಾಡಿದಿರಿ? ರಂಗರಾಯರು ಏನಂದ್ರು?

“ಇನ್ನೂ ಏನೂ ಇಲ್ಲ.”

“ಸ್ವಲ್ಪ ಸಮಯ ನೀವು ಶಾಲೆಯಲ್ಲೇ ವಾಸವಾಗಿರೋದು ಮೇಲು. ಊಟ ಬೇಕಾದ್ರೆ--"

“ಸದ್ಯ ಯಾವುದಾದರೂ ಹೋಟೆಲ್ನಲ್ಲೇ ಊಟ ಮಾಡೋಣಾಂತಿದೀನಿ.”

“ಹಾಗೂ ಆಗ್ಬಹುದು. ಆನಂದವಿಲಾಸದವನಿಗೆ ಹೇಳ್ತೀನಿ. ಸ್ನಾನಕ್ಕೆಲ್ಲ ಅಲ್ಲೇ ಅನುಕೂಲ."

'ಹೊ೦.'

ನಿಟ್ಟುಸಿರು ಬಿಟ್ಟು ಹುಬ್ಬು ಹಾರಿಸಿ ನಂಜುಂಡಯ್ಯ ಅಂದರು :

“ನಿಮ್ಮನ್ನ ನೋಡಿದ್ರೆ ನಂಗೆ ಅಸೂಯೆಯಾಗುತ್ತೆ.'

“ಯಾಕ್ಸಾರ್?”