ಪುಟ:Duurada Nakshhatra.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕ್ಷಣವೆ, 'ನಾನೊಬ್ಬ ಹುಚ್ಚ, ಹಾಜರಿ ಪುಸ್ತಕ ಇದೆಯಲ್ಲ' ಎಂದು ಆ ಪುಸ್ತಕವನ್ನು ತೆರೆದ.

“ಶೇಷಪ್ಪ ಕೆ.ಬಾಲಕೃಷ್ಣ ಎಸ್.ರಾಮಚಂದ್ರ ಶೆಟ್ಟಿ ಟಿ.ಗರುಡಚಾರ್ ಎಲ್...'

ಹುಡುಗರು “ಪ್ರಸೆಂಟ್ ಸಾರ್” ಎನ್ನುತ್ತ ಹೋದರು. ಜಯದೇವ ಗುರುತು ಹಾಕುತ್ತ ನಡೆದ.

ಕೊನೆಯಲ್ಲಿ ಹುಡುಗಿಯರ ಹೆಸರುಗಳು...

“ನೀಲಮಣಿ ಎಂ....ಸುಮಿತ್ರಾ ಎಸ್....ಗಂಗೂಬಾಯಿ ಎಂ...."

..' ಐವರು ಹುಡುಗಿಯರೂ ತರಗತಿಗೆ ಬಂದಿದ್ದರು.ಆದರೆ ಹುಡುಗರಲ್ಲಿ ಹತ್ತಾರು ಜನ ಇರಲಿಲ್ಲ. ಒಂದು ವಾರದಿಂದಲೂ ಅವರು ಬ೦ದಿರಲಿಲ್ಲ.

‘ಯಾಕೆ ಇಷ್ಟೊಂದು ಜನ ಬಂದಿಲ್ಲ?

ಉತ್ತರ ಕೊಡುವುದೆಲ್ಲ ತನ್ನ ಹಕ್ಕು ಎಂಬಂತೆ ಮೊದಲ ಸಾಲಿನಲ್ಲಿದ್ದ ಒಬ್ಬ ಹುಡುಗ ಎದ್ದು ಕೈಕಟ್ಟಿ ನಿಂತ:

“ಅವರು ಯಾರೂ ಪುಸ್ತಕ ಕೊಂಡ್ಕೊಂಡಿಲ್ಲ ಸಾರ್, ಪುಸ್ತಕ ತರೋವರ್ಗೂ ಕ್ಲಾಸಿಗೆ ಬರ್ಕೂಡ್ದಂತ ನಂಜುಂಡಯ್ಯ, ಮೇಷ್ಟ್ರು ಹೇಳಿದಾರೆ ಸಾರ್"

ಜಯದೇವ, ಆ ಹುಡುಗನಿಗೆ ಕುಳಿತುಕೊಳ್ಳಲು ಸನ್ನೆ ಮಾಡಿದ.

ಶುಭಸೂಚಕವಾಗಿರಲಿಲ್ಲ ಆ ಆರಂಭ, ಪುಸ್ತಕ ಕೊಳ್ಳದೆ ಇದ್ದ ಹುಡುಗರು...ಅವನಿಗೆ ಗೊತ್ತಿತ್ತು....ಪುಸ್ತಕ ಕೊಳ್ಳಲಾಗದ ಹುಡುಗರು... ಹಳೆಯ ಕಥೆಯೇ, ಹಲವು ವರ್ಷಗಳ ಹಿಂದೆ ಮಾಧ್ಯಮಿಕ ಶಾಲೆಯಲ್ಲಿ ಆತ ಓದುತ್ತಿದ್ದಾಗಲೂ ಅಂತಹ ಹುಡುಗರಿದ್ದರು. ಮತ್ತೆ ಈಗಲೂ.

ಆ ವರ್ಷವೇ ಹೊಸದಾಗಿ ಅಚ್ಚಾಗಿ ಬಂದಿದ್ದ ಮೊದಲ ತರಗತಿಯ ಪುಸ್ತಕವನ್ನು-ಕನ್ನಡ ಐದನೆಯ ಪುಸ್ತಕವನ್ನು-ಆಫೀಸು ಕೊಠಡಿಯಿಂದ ಹಿಡಿದುಕೊಂಡು ಜಯದೇವ ಬಂದಿದ್ದ... ಮೊದಲ ಪಾಠದಿಂದಲೇ ಆರಂಭಿಸಬೇಕೆಂದೇನೂ ಇರಲಿಲ್ಲ, ಪುಟಗಳನ್ನು ಮಗುಚುತ್ತಾ ಯಾವುದಾದರೂ ಪದ್ಯವನ್ನು ಓದೋಣವೆಂದುಕೊಂಡ,

ಒಂಬತ್ತನೆಯ ಪಾಠವಾಗಿತು ಆ ಹಾಡು,

“ಹರಹರ ಮಹಾದೇವ ಶಂಭೋ”