ಪುಟ:Duurada Nakshhatra.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ಪಲ್ಲವಿಯ ಬಳಿಕ –

“ಬಾಲದಳದವರಾವು ಕಾಲಿಗೆರಗುವೆವು

ಬಾಲಭಟರಾವುಗಳು ಹರಕೆ ಬೇಡುವೆವು”

ಬಾಲದಳದವರ-ಸ್ಕೌಟು ಚಳವಳಿಯ-ಹಾಡು.. ಎದುರು ಪುಟದಲ್ಲಿ ಸ್ಕೌಟೊಬ್ಬನ ಚಿತ್ರವೇನೋ ಇತ್ತು, ಆದರೂ ಸ್ಕೌಟು ಚಳುವಳಿಯ ಕಲ್ಪನೆ ಆ ಹುಡುಗರಿಗೆ ಇರಲಿಲ್ಲ, ಆ ಹಾಡು ಅಷ್ಟಾಗಿ ಅವರಿಗೆ ರುಚಿಸಲಿಲ್ಲ.

ಒಂದೆಡೆ ಇತ್ತು:

“ಆವ ಸಮಯದೊಳಾರು ಸಾಹ್ಯ ಬೇಡಿದರು

ನಾವೊಡನೆ ಸಿದ್ಧರಾಗಿರುವ ವೃತ್ತಿಯನು”

ಸಾಹ-ಅದೆಂತಹ ಪದವೋ! ಜಯದೇವ ಕೊನೆಯ ಪುಟಗಳನ್ನು ಮಗುಚಿ ಟಿಪ್ಪಣಿಯನ್ನೋದಿದ. ಅಲ್ಲೇನೂ ಇರಲಿಲ್ಲ, ಸಹಾಯ ಎಂದೇ ಇರಬೇಕೆಂದು ಕೊ೦ಡ.

'ಈ ಪದ್ಮವನು ಯಾರಾದರೂ ಓದ್ದೀರೇನಪ್ಪಾ?"

ಒಬ್ಬ ಹುಡುಗನೆದ್ದು ಹೇಳಿದ:

“ನನಗೆ ಬಾಯಿಪಾಠ ಬರುತ್ತೆ ಸಾರ್.”

“ಹೇಳು ಹಾಗಾದರೆ.”

“ಹರ ಹರ ಮಹಾದೇವ್ವ ಶಮ್ ಭೋ...”

ಆ ಉಚ್ಚಾರವೂ ತಾಳಲಯವೂ ವಿಚಿತ್ರವಾಗಿದ್ದವು.

ಕೊನೆಯ ಸಾಲುಗಳನ್ನಾತ, ಎರಡೂ ಕೈಗಳನ್ನೆತ್ತಿ, ಛಾವಣಿಯ ಹೆಂಚು ಹಾರಿಹೋಗುವ ಹಾಗೆ ಗಟ್ಟಿಯಾಗಿ ಹೇಳಿದ:

“ಭೀಮ ಬಲವನು ಎಮ್ಮ ಬಾಹುವಿಗೆ ಬರಿಸು

ಎಮ್ಮ ದಂಡದೊಳಿರಿಸು ಭೀಮ ಗದೆಯನ್ನು.”

ಅವನು ಹೇಳಿದ ರೀತಿ ಏನೂ ಚೆನಾಗಿರಲಿಲ್ಲ.ಆದರೂ ಜಯದೇವನೆಂದ: * ಚೆನ್ನಾಗಿ ಹೇಳ್ದೆ. ಕೂತ್ಕೊ”

ಸತ್ಯಕ್ಕೆ ದೂರವಾದ ಪ್ರಶಂಸೆ! ಆದರೆ ಆ ಸಂದರ್ಭದಲ್ಲಿ ಉತ್ತೇಜನವೀಯುವ ಮಾತುಗಳೇ ಮುಖ್ಯವಾಗಿದ್ದುವು.

ಅದೇ ಊರಿನ ಪಾಥಮಿಕ ಶಾಲೆಯಿಂದ ಉತ್ತೀರ್ಣರಾಗಿ ಬಂದಿದ್ದ ಹುಡುಗರು.ಉಪಾಧ್ಯಾಯನಾದ ತನ್ನಿಂದ ಮೊದಲ ಪಾಠ ಹೇಳಿಸಿ ಕೊಂಢ ತಂಡ...,