ಪುಟ:Duurada Nakshhatra.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಮ್ಮೆಲೆ ಮಾಯವಾದ ನಗೆಯನ್ನು ಮತ್ತೊಮ್ಮೆ ಪ್ರಯತ್ನಪೂರ್ವಕವಾಗಿ ನಂಜುಂಡಯ್ಯ ತಂದುಕೊಂಡರು.

ಅಭಿನಂದನೆ ಜಯದೇವರಾವ್. ಹುಡುಗರ್ನ ಹತೋಟೀಲಿ ಇಟ್ಕೊಳ್ಳೋ ಜಾಣ್ಮೆ ನಿಮಗಿದೆ."

ಅಷ್ಟು ಹೇಳಿ ಅವರು ಒಳಹೋದರು. ಮುಂದಿನ ಪೀರಿಯಡು ಜಯದೇವನಿಗೆ ಪಾಠವಿರಲಿಲ್ಲ. ಆತ ಆಫೀಸ್ ಕೊಠಡಿಗೆ ಹೋಗಿ ಕುಳಿತುಕೊಂಡ.

ಒಮ್ಮೆಲೆ ಆತನಿಗೆ ಹೊಳೆಯಿತು... ನಂಜುಂಡಯ್ಯ ತನ್ನನು ಜಯದೇವರಾವ್ ಎಂದು ಸಂಬೋಧಿಸಿದ್ದರಲ್ಲವೆ?ತಮಾಷೆಗೆ ಹಾಗೆಂದರೇನೋ ... ಆದರೆ ಆ ರಾವ್' ಕಿವಿಗೆ ಇಂಪಾಗಿರಲಿಲ್ಲ...

ಜಯದೇವ ಕರವಸ್ತ್ರವನ್ನು ಹೊರತೆಗೆದು ಮುಖದ ಬೆವರೊರಿಸಿದ. ಆತನ ಆತ್ಮವಿಶಾಸ ಬಲಿಯಿತು. ತಾನು ಯಶಸ್ವಿಯಾದ ಉಪಾಧ್ಯಾಯನಾಗುವುದರಲ್ಲಿ ಸಂದೇಹವಿರಲಿಲ್ಲ. ವೇಣುಗೋಪಾಲ ಎಷ್ಟೋ ಸಾರಿ ತನ್ನನ್ನ ಕುರಿತು ನಗೆಯಾಡಿರಲಿಲ್ಲವೆ ?

“ನೀನು ಮೇಷ್ಟ್ರಾಗೋಕೆ ಹುಟ್ದೋನು ಕಣೋ, ಆ ವೃತ್ತಿಗುಣ ನಿನ್ನ ರಕ್ತದಲ್ಲೇ ಇದೆ.”

“ಪಾಠ ಹೇಳಿಕೊಡುವುದೂ ಒಂದು ಕಲೆ, ನಿಜ, ಉಪಾಧ್ಯಾಯ ಮನಃಶಾಸ್ತ್ಯವನ್ನು ಚೆನ್ನಾಗಿ ಬಲ್ಲವನಾಗಿರಬೇಕು. ಅಪಾರವಾದ ಸಹನಶೀಲತೆ ಆತನಿಗೆ ಇರಬೇಕು.

... ಜಯದೇವ ಯೋಚಿಸುತ್ತ ಹೋದ

ಅಷ್ಟೇ ಅಲ್ಲ, ಮಕ್ಕಳನಾತ ಪ್ರೀತಿಸಬೇಕು ; ಅಷ್ಟೇ ಚೆನ್ನಾಗಿ ತನ್ನ ವೃತ್ತಿಯನ್ನೂ ಆತ ಪ್ರೀತಿಸಬೇಕು.

..............

ಮಧಾಹ್ನದ ವಿರಾಮ ಕಾಲದಲ್ಲಿ ಮುಖೋಪಾಧ್ಯಾಯರು ಕೇಳಿದರು :

“ಹ್ಯಾಗಿದೀರಾ?”

“ಒಳ್ಳೆ ಹುಡುಗರು ಸಾರ್.”

“ಹುಡುಗರ ಒಳ್ಳೆತನ ಅಲ್ಲ, ಜಯದೇವ್.. ನಿಮ್ಮ ಮುಖ