“ಇವರು ಜಯದೇವ ಅಂತ.. ಬೆಂಗಳೂರೊರು. ಹೊಸ ಉಪಾ ಧಾಯರಾಗಿ ಬಂದಿದ್ದಾರೆ.”
ಜಯದೇವ ಸೂಕ್ಷ್ಮವಾಗಿ ಅವರಿಬ್ಬರನ್ನೂ ಗಮನಿಸಿದ. ತನ್ನ ಹೆಸರು ಕಿವಿಗೆ ಬಿದ್ದೊಡನೆ ಅವರ ಮನಸ್ಸಿನಲ್ಲಿ ಏನು ತರ್ಕ ನಡೆದಿರಬಹುದೆಂಬುದನ್ನು ಊಹಿಸುವುದು ಆತನಿಗೆ ಕಷ್ಟವಾಗಲಿಲ್ಲ....ಮತ....ಜಾತಿ. ತನ್ನ ಹೆಸರು ಕೇಳಿ ತನ್ನನ್ನು ನೋಡಿ, ಎಷ್ಟೋ ಜನ ವಿಧವಿಧವಾಗಿ ಯೋಚಿಸುವ ಪ್ರಮೇಯವನ್ನು ನೆನೆಸಿ ಜಯದೇವನಿಗೆ ನಗು ಬಂತು.
ಆ ಉಪಾಧ್ಯಾಯರಿಬ್ಬರೂ ನಮಸ್ಕರಿಸಿದರೆಂದು ಜಯದೇವನೂ ಪ್ರತಿ ನವುಸ್ಕಾರ ಮಾಡಿದ.
"೬೦-೫-೯೦ ರವರೋ, ೪೦-೨-೫೦ ರವರೋ?"
ಅಷ್ಟು ವರ್ಷಗಳ ಉಪಾಧ್ಯಾಯ ವೃತ್ತಿಯ ಬಳಿಕವೂ ತಿಮ್ಮಯ್ಯ ಮೇಷ್ಟಲ್ಲಿ ಹಾಸ್ಯ ಪ್ರವೃತ್ತಿಯ ಕಿಡಿ ಜೀವಂತವಾಗಿ ಉಳಿದಿದ್ದಂತೆ ಕಂಡಿತು.
ಆ ಮಾತು ನಂಜುಂಡಯ್ಯನಿಗೆ ಏನೇನೂ ಇಷ್ಟವಾಗಲಿಲ್ಲವೆಂಬುದನ್ನು ಸಾರಿ ಹೇಳಿತು ಅವರ ಮುಖಮುದ್ರೆ, ರಂಗರಾಯರು ಮಾತ್ರ ತಿಮ್ಮಯ್ಯ ಮೇಷ್ಟ್ರ ಮಾತು ಕೇಳಿ ನಕ್ಕರು.
"ಇಂಟರ್ ಮಿಡಿಯೆಟ್ ಮುಗಿಸಿದಾರೆ."
“ತಪ್ಪು ತಿಳ್ಕೊಬೇಡೀಪ್ಪಾ... ನಾವು ಹಳ್ಳಿಯೋರು.....ಬೆಂಗಳೂರ್ನೋರ್ಜತೇಲಿ ಮಾತನಾಡಿ ಅಭ್ಯಾಸ ಇಲ್ಲಾ...”
ನಾಟಕದ ಒಬ್ಬ ಪಾತ್ರಧಾರಿಯ ಹಾಗಿದ್ದರು ತಿಮ್ಮಯ್ಯ,
ಆ ವೃತ್ತಿ ಭಾಂಧವರನ್ನು ಬೀಳ್ಕೊಟ್ಟಮೇಲೆ, ಮುಂದೆ ನಡೆಯುತ್ತಾ ರಂಗರಾಯರೆಂದರು :
“ಆ ತಿಮ್ಮಯ್ಯನಿಗೆ ನಾಟಕದ ಖಯಾಲಿ ಜಾಸ್ತಿ, ಜಯದೇವ್.”
“ಅವರ್ನ ನೋಡ್ದಾಗ ನನಗೂ ಹಾಗೇ ಅನಿಸ್ತು.”
ನಂಜುಂಡಯ್ಯ ಮಾತ್ರ ಕಟುವಾಗಿ ಅ೦ದರು :
'ನಾಟಕ ! ಹು೦ ! ಶಾಲೆಗೆ ರಜಾ ಕೊಟ್ಟು, ಹುಡುಗರ ಮನೆಗೆ ಕಳಿಸಿ, ನಾಟಕದ ಮಜಾ ಈ ಮೇಷ್ಟಿಗೆ...ಇಂಥವರಿಂದಾನೇ ಈಗಿನ ವಿದ್ಯಾಭ್ಯಾಸ ಕೆಟ್ಟಿರೋದು.”
ಜಯದೇವನಿಗೆ ಆ ಖಂಡನೆ ಒಪ್ಪಿಗೆಯಾಗಲಿಲ್ಲ. ಹಾಗೆಂದು ಸ್ಪಷ್ಟ