ಪುಟ:Duurada Nakshhatra.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಷಯವೇನೆಂಬುದನ್ನು ಸೂಕ್ಷ್ಮವಾಗಿಯೆ ಊಹಿಸಿಕೊಂಡ ರಂಗರಾಯರೆಂದರು :

“ಈಗಿನ ವಿದ್ಯಾಭ್ಯಾಸ ಪದ್ಧತೀನೇ ಸರಿಯಾಗಿಲ್ಲ ಅಂತ ನಾವು ಅಂತೀವಿ. ಆ ಮಾತು ನಾವು ಪಾಠ ಹೇಳಿಕೊಡೋ ರೀತಿಗೂ ಅನ್ವಯಿಸುತ್ತೆ, ಎಷ್ಟೋ ಬದಲಾವಣೆ ಆಗ್ಬೇಕಪ್ಪ, ಅದು ಮಾತ್ರ ಖಂಡಿತ. ಪಾಠ ಮಾಡೋ ರೀತೀಲೂ ನಾವು ಹೊಸ ಹೊಸ ಪ್ರಯೋಗ ಮಾಡಿ ನೋಡ್ಬೇಕು. ಇದು ನನ್ನ ಅಭಿಪಾಯ.”

ಆ ಪ್ರೋತ್ಸಾಹದ ಮಾತಿಗಾಗಿ ತಾನು ಚಿರಕೃತಜ್ಞ ಎನ್ನುವ ನೋಟದಿಂದ ಜಯದೇವ ಮುಖ್ಯೋಪಾಧ್ಯಾಯರನ್ನು ನೋಡಿದ.

ಆದರೆ ನಂಜುಂಡಯ್ಯ ಅಷ್ಟು ಸುಲಭವಾಗಿ ಸೋಲನ್ನೊಪ್ಪಿಕೊಳ್ಳುವಂತಿರಲಿಲ್ಲ,

“ಹಾಗಾದರೆ ಇಷ್ಟೊಂದು ವರ್ಷ ಪ್ರಯೋಗ ಮಾಡಿದ್ರಲಾ ಸಾರ್,ಏನಾಯ್ತು? ರಿಟೈರಾಗೋ ಸಮಯ--"

“ನಿಜ ನಂಜುಂಡಯ್ಯ, ಪ್ರಯೋಗ ಮಾಡಿ ಏನೂ ಆಗಲಿಲ್ಲ, ನಾನು ರಿಟೈರಾಗೋ ಸಮಯವೂ ಬಂತು. ಆದರೂ ಬಿಟ್ಬಿಡಬಾರ್ದಪ್ಪ ಕೊನೇವರೆಗೂ ಪ್ರಯೋಗ ಮಾಡ್ತಾನೇ ಇರ್ಬೇಕು.”

ನೋವು ತು೦ಬಿತ್ತು ಆ ಧ್ವನಿಯಲ್ಲಿ.

ಜಯದೇವ ವ್ಯಥೆಯಿಂದ ನಿಟ್ಟುಸಿರು ಬಿಟ್ಟ.