ಪುಟ:Duurada Nakshhatra.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಂಜುಂಡಯ್ಯ ಮತ್ತು ಜಯದೇವನತ್ತ ನೋಡುತ್ತ, ರಾಯಭಾರಿಗಳನ್ನು ಸ್ವೀಕರಿಸುವ ರಾಷ್ಟ್ರಾಧಿಸನ ಹಾಗೆ ವೆಂಕಟರಾಯರು ತುಟಿಗಳ ಕೊನೆಯಿಂದಲೆ ಮುಗಳ್ನಕ್ಕರು.

ಔಪಚಾರಿಕವಾದ ವ೦ದನೆ-ಮರುವಂದನೆಗಳಾದುವು

“ಬನ್ನಿ ಸ್ನಾನ-ಊಟ ಮಾಡ್ಕೊಂಡು ಬರೋಣ” ಎಂದು ರಂಗರಾಯರು ಹೊಸಬರನ್ನು ಕರೆದರು. "

“ನೀವು ಯಾವಾಗಲೂ ಇಷ್ಟು ಹೊತ್ತಿಗೆ ಊಟಕ್ಕೆ ಹೋಗ್ತೀರೇನು?

ಆ ಪ್ರಶ್ನೆಯಲ್ಲಿ ಆಶ್ಚರ್ಯವಿರಲಿಲ್ಲ, ಅಣಕವಿತ್ತು, ಆಳವಾದ ಅರ್ಥವಿತ್ತು, ಶಾಲೆಯ ಕೆಲಸದ ನಡುವೆ ಊಟಕ್ಕೆ ಹೋಗುವುದು ಜವಾಬ್ದಾರಿಯ ವರ್ತನೆಯಲ್ಲವೆ೦ಬ ಧ್ವನಿಯಿತ್ತು.

ರಂಗರಾಯರಿಗೆ ಅದು ಹೊಳೆಯದೆ ಹೋಗಲಿಲ್ಲ, ಆದರೂ ಅದನ್ನು ಗಮನಿಸದೆ ಅ೦ದರು :

“ಹೌದು, ನಿಮ್ಮ ಊಟ ಇನ್ನೂ ಆಗಿಲ್ಲ ಅಲ್ವೆ? ಬನ್ನಿ ಹೋಗ್ಬಿಟ್ಟು ಬರೋಣ.”

“ಇಲ್ಲ. ನೀವು ಹೋಗಿ.. ನಾನು ಇಲ್ಲೇ ಎಲ್ಲಾದರೂ ಹೋಟೆಲಿನಲ್ಲಿ ಮುಗಿಸ್ಕೊಂಡು ಬರ್ತೀನಿ."

ಈ ಒರಟುತನ ಜಯದೇವನಿಗೆ ಆರ್ಥವಾಗಲಿಲ್ಲ, ಆ ವರ್ತನೆಯ ಸೂಚಾರ್ಥ ಠಂಗರಾಯರಿಗೆ ಹೊಳೆದು ಅವರು ನೊಂದುಕೊಂಡರು.

“ಉಪಾಧ್ಯಾಯರ ಜಾತಿಯಿ೦ದ ನನಗೇನೂ ಬಹಿಷ್ಕಾರಹಾಕಿಲ್ಲ ತಾನೆ? ನನ್ಮನೇಲಿ ಊಟ ಮಾಡ್ಕೂಡ್ದು ಅಂತ ಮೇಲಿನವರು"

“ಹೆ—ಹ್ಹೆ !" ಎಂದು ವೆಂಕಟರಾಯರು ನಕ್ಕರು. ರಂಗರಾಯರ 'ಮಾತು ಅವರ ಮೇಲೆ ಯಾವ ಪರಿಣಾಮವನ್ನೂ ಮಾಡಿದಂತೆ ತೋರಲಿಲ್ಲ.

“ಬನ್ನಿ ಹಾಗಾದರೆ.”

"ಬೇಡಿ! ನಾನು ಆಗ್ಲೇ ತೀರ್ಮಾನಿಸಿ ಬಿಟ್ಟಿದ್ದೀನಿ. ಊಟ ಹೋಟೆಲಲ್ಲೇ”

ನಂಜುಂಡಯ್ಯನಿಗೆ ಈ ನಿರಾಕರಣೆ ಮೆಚ್ಚುಗೆಯಾಯಿತು.

“ಇರಲಿ ರಂಗರಾವ್.. ಇವರ್ನ ಆನಂದವಿಲಾಸಕ್ಕೆ ಕರಕೊಂಡು ಹೋಗ್ತೀನಿ. ನೀವು ಹೋಗ್ಬನ್ನಿ” ಎಂದು ಅವರು ಹೇಳಿದರು.