ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೫೦ ಏಕಾಂಗಿನಿ
....ಮುಂದೆ ಒಂದು ವಾರದೊಳಗೇ ರಾಮಕೃಷ್ಣಯ್ಯನವರ ಕಾಗದ ಬಂತು.
ಹದಿನಾರು ರೂಪಾಯಿ ಬಾಡಿಗೆಗೆ ಪುಟ್ಟದೊಂದು ಔಟ್ ಹೌಸನ್ನು ಶೇಷಾದ್ರಿ ಪುರದಲ್ಲೆ ಗೊತ್ತು ಮಾಡಿದ್ದರು. 'ಒಳ್ಳೇ ಮುಹೂರ್ತ ನೋಡಿ ಹೊರಟುಬನ್ನಿ' ಎಂದು ಕೊನೆಯಲ್ಲಿ ಬರೆದಿದ್ದರು.
ಆ ವಾಕ್ಯವನ್ನೋದಿ ಸುನಂದೆ, “ಅಯ್ಯೋ!” ಎಂದು ನಕ್ಕಳು
“ಹುಟ್ಟಿದ ಕ್ಷಣದಿಂದ ಸಾಯೋವರೆಗೂ ಮುಹೂರ್ತ ನೋಡೋದೇ ಆಯ್ತು, ಅಲ್ವೆ ಅಪ್ಪಾ ?” ಎಂದಳು.
“ಹಾಗೆಲ್ಲಾ ಮಾತಾಡ್ಬಾರದಮ್ಮ,” ಎಂದರು ಕೃಷ್ಪಪ್ಪನವರು.
೧೯ ಸುನಂದಾ ಬೆಂಗಳೂರಲ್ಲೇ ನೆಲೆಸುವಳೆಂಬ ಸುದ್ದಿ ತಿಳಿದು, ರಾಧಮ್ಮ–
ಕುಸುಮೆಯರಿಗೆ ಸಂತೋಷವಾಯಿತು. ಆದರೆ, ಯಾವತ್ತು-ಏನು ಎಂದೆಲ್ಲ ಸುನಂದಾ ಬರೆದಿರಲೆಲ್ಲ.
ಒಂದು ಮಧ್ಯಾಹ್ನ, ಸ್ವತಃ ಸುನಂದೆಯೇ ಮಗಳ ಜತೆಯಲ್ಲಿ ತಮ್ಮನ್ನು
ಕಾಣಲು ಬಂದಾಗ, ಅವರಿಗಾದ ಆಶ್ಚರ್ಯ ಅಷ್ಟಿಷ್ಟಲ್ಲ.
-“ಇದೇನ್ರಿ ಇದು? ಯಾವತ್ತು ಬಂದಿರಿ?” -"ಮನೆ ನೋಡ್ಕೊಂಡು ಹೋಗೋಕೆ ಬಂದಿದೀರಾ ?” ಸುನಂದಾ ಹೇಳುತ್ತಿದ್ದುದು ನಿಜವೇ ಎಂದು ನಂಬಲು ಅವರಿಬ್ಬರಿಗೂ
ಸ್ವಲ್ಪ ಹೊತ್ತು ಹಿಡಿಯಿತು.
“ಅಬ್ಬ ! ಏನೋಂತಿದ್ದೆ, ಪರವಾಗಿಲ್ಲ ನೀವು,” ಎಂದು ಕುಸುಮಾ ರಾಗ
ವೆಳೆದಳು.
ಮನೆ ಮಾಡಿರುವುದು ದೂರದ ಶೇಷಾದ್ರಿಪುರದಲ್ಲಿ ಎಂದು ತಿಳಿದಾಗ
ರಾಧಮ್ಮ ರೇಗಿದರು :
“ಎಷ್ಟೊಂದು ಸಮೀಪ ! ಯಾಕೆ, ಕೆಂಗೇರೀಲೋ ಯಶವಂತಪುರದಲ್ಲೊ
ಮನೆ ಸಿಗಲಿಲ್ವೇನು?”