ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಏಕಾಂಗಿನಿ ೨೦೧ ತೊಂಭತ್ತರಷ್ಟು ಪಾಲು ಎತ್ತಲಾರಳು. ಹಾಗೇನಾದರೂ ಕೇಳಿ, ನ್ಯಾಯಾ ಸ್ಥಾನ ಆಜ್ಞೆ ಕೊಟ್ಟರೆ ತಕರಾರು ಮಾಡುವುದು. ಅದಕ್ಕೇನು ವಕೀಲರಿಲ್ಲವೆ? ಸುಲಭ ಸಂಭವವಲ್ಲದ ಪ್ರಶ್ನೆಯನ್ನೆತ್ತಿಕೊಂಡು ಚಿಂತಿಸುವುದರಲ್ಲಿ ಅರ್ಧವಿಲ್ಲ... ಬಂದಾಗ ನೂಡಿಕೊಂಡರಾಯ್ತು. ...ನ್ಯಾಯಾಸ್ಥಾನದ ನೋಟೀಸು ಬಂತು.ಏಳಾಸದಾರ ಸಿಗಲಿಲ್ಲ. ಎನಿಸು ವುದು ಅಷ್ಟೇನೂ ಖರ್ಚಿನ ಬಾಬಲ್ಲ. ಆದರೆ ಅದು ಅಗತ್ಯವೆನಿಸದೆ, ಪೂಟ್ಟಣ್ಣ ನೋಟೀಸನ್ನು ಸ್ವೀಕರಿಸದೆ. ಸುನಂದಮ್ಮನ ಪರವಾಗ ಸಲ್ಲಿಸಲಾಗಿದ್ದ ಅರ್ಜಿಯ ನಕಲು! ವಕೀಲರ ನೋಟೀಸಿನಲ್ಲಿದ್ದ ಅಂಶಗಳೇ..... ... ವಿಚಾರಣೆಯ ದಿನ ಹತ್ತಿರ ಬಂದಂತೆ, 'ನಾನೂ ಕೊರ್ಟಿಗೆ ಹೋದರೆ ಚೆನಾಗಿರತ್ತೆ. ತಮಾಷೆ ನೋಡಬಹುದಿತ್ತು. ಆಕೆಯ ಪರವಾಗಿ ಸಾಕ್ಷ್ಯ ಹೇಳೋಕೆ ಬರುವ ಆಸಾಮಿಗಳೊ! ಅವರನ್ನೆಲ್ಲ ಮಾತಿನಲ್ಲೆ ಸಿಲುಕಿಸಿ ಅಪ್ಪಚ್ಚಿ ಮಾಡಬಹುದಿತ್ತು' ಎನಿಸಿತು. ಆದರೆ ಅಲ್ಲಿಯೂ ಆ ಆಸೆಯನ್ನು ಮೊಟಕು ಮಾಡಿತು ವಿವೇಕ, ಮಾರಿ ತಾನಾಗಿ ಊರು ಬಿಟ್ಟು ಹೋಗುವೆ ನೆಂದು ಹೇಳುತ್ತಿರುವಾಗ , ಆದನ್ನು ತಡೆದು ನಿಲ್ಲಿಸಿ ಮಾತನಾಡುವುದು ಯಾವ ಬುದ್ದಿವಂತಿಕೆ? ಆದರೂ ಒಂದು ವಿಷಯ ಪುಟ್ಟಣ್ಣನಿಗೆ ಅರ್ಥವಾಗಿರಲಿಲ್ಲ . ವಿವಹ ವಿಚ್ಛೇದನಕ್ಕೆ ಆಕೆಯ ತಂದೆ ಹೇಗೆ ಒಪಿಗ' ಆತನ ಸರವು ಸ್ನೇಹಿತ ಜಾ೦ಬ ವಂತ ರಾಮಕ್ರಿಷ್ಣಯ್ಯ ಹೇಗೆ ಒಪ್ಪಿದ ವಿವರಣೆ ಹುಡುಕಿದಾಗಲೆಲ್ಲ ತನ್ನ [ಹಿಂದಿನ] ಮಾವನಿಗೆ ತಾನು ಬೀದಿಯ ಬದಿಯಲ್ಲಿ ಮಾಡಿದ ಮಂಗಳಾರ ಶಿಯ ನೆನಪಿಗೆ ಬರುತ್ತಿತ್ತು, ಆ.! ಹೇಗಿತ್ತು ಆ ದಿನ! ಅದನ್ನು ಕರಿತು ಯೋಚಿಸಿದಾಗಲೆಲ್ಲ ಆತನಿಂದ ಹೊರಸೂಸುತಿತ್ತು ವಿಜಯೋತ್ಸಾಹ ನಗು... * * * * ವಿಚಾರನೆಯ ದಿನ ಬಂತು ಮಂಗಳೂರು ಹೆಂಚು ಹೊದಿಸಿದ್ದ ಸಣ್ಣ ಕಟ್ಟಡ. ತಗ್ಗಾದ ಗೋಡೆಗಳು ಯಾವುದೋ ಮೊಕದ್ದಮೆಯಲ್ಲಿ ಸಾಕ್ಷ್ಯಗಳಾಗಿದ್ದ ಸೌದೆ ತುಂಬಿದ ಲಾರಿಗ ಳೆರಡು, ಕೈ ಬೇಡಿ ಹಾಕಿಸಿಕೊಂಡಿದ್ದ ಆರೊಪಿಗಳು - ಪೋಲೀಸರು. ಬೇರೆ ಬೇರೆ ವ್ಯವಹರಣೆಗಳಿಗಾಗಿ ಬಂದಿದ್ದ ನೂರಾರು ಜನ.