ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೧೦ ಏಕಾಂಗಿನಿ
ವಿಳಾಸವಿಲ್ಲ. ನಿನ್ನ ಹತ್ತಿರವೂ ಇಲ್ಲಾಂತ ತೋರುತ್ತೆ. ಹೌದೆ? ಅಪ್ಪ ಏನು ಹೇಳುತ್ತಾರೆ? ಇಲ್ಲಿ ಮಳೆಯ ಆರ್ಭಟ ಮುಗಿಯುತ್ತ ಬಂದಿದೆ, ಅಪ್ಪನನ್ನು ಒಮ್ಮೆ ಕಳಿಸಿಕೊಡ್ತೀಯಾ? ಆದರೆ ಸರಸ್ವತಿಯನ್ನು ನೋಡಿಕೊಳ್ಳುವವರು ಯಾರು? ನಿನಗೆ ಕಷ್ಟವಾದರೆ ಬೇಡ . ಆಗಾಗ್ಗೆ ಕಾಗದ ಬರಿ. ಸೀತಮ್ಮನವ ರನ್ನು ಇತ್ತೀಚೆಗೆ ಕಂಡಿದ್ದಿಯಾ? ತಿಳಿಸಬೇಕಾಗಿರುವ ವಿಶೇಷ ಇನ್ನೂ ಏನೂ ಇಲ್ಲ! ನೀನು ಸಂತೋಷವಾಗಿದ್ದಿ ಅಲ್ಲವಾ? ಸರಸ್ವತಿ ಚಿಕ್ಕಮ್ಮನನ್ನ ಮರೆತಿಲ್ಲ ತಾನೆ? ಶಿಶು ವಿಹಾರ ಏನನ್ನುತ್ತೆ? ರಾಧಮ್ಮ__ಕುಸುಮಾ ಏನು ಹೇಳ್ತಾರೆ? ರಾಮಕೃಷ್ಣಯ್ಯನವರ ಮನೆಗೆ ಹೋಗಿದ್ದೆಯಾ? ಚುಟುಕಾಗಿ ಉತ್ತರ ಬರೀ ಬೇಡ__ ಹಾಂ!" ಅದನ್ನು ಮತ್ತೆ ಮತ್ತೆ ಓದುತ್ತ ಸುನಂದಾ.'ಈ ಒಲವಿಗಿಂತ ಹಿರಿದಾದ ಸಿರಿ ಸಂಪದ ಬೇರೆ ಇಲ್ಲ' ಎಂದು ಮನಸ್ಸಿನಲ್ಲೆ ಅಂದುಕೊಂಡಳು. * * * * ರಾಧಮ್ಮನ ದೊಡ್ಡ ಮಗನಿಗೆ ಬ್ರಹ್ಮೋಪದೇಷವೆಂದು, ಕೃಷ್ಣಪ್ಪನವರನ್ನೂ ಸುನಂದೆಯನ್ನೂ ಕರೆಯಲು ರಾಧಮ್ಮ ಬಂದರು. "ಆಫೀಸಿನ ಕೆಲಸದಲ್ಲಿ ಅವರಿಗೆ ಪುರುಸೊತ್ತೇ ಇಲ್ಲ. ಅದಕ್ಕೋಸ್ಕರ ನಾನೇ ಕರೆದ್ಬಿಟ್ಟು ಹೋಗೋಣ--ಅಂತ ಬಂದೆ, ಏನೂ ತಿಳ್ಕೋಬೇಡಿ," ಎಂದು ಕೃಷ್ಣಪ್ಪನವರೊಡನೆ ರಾಧಮ್ಮ ಹೇಳಿದರು. "ಮಗಳನ್ನೂ ತಂದೆಯನ್ನೂ ಕರೆಕೊಂಡು ತಪ್ಪದೆ ಬನ್ನಿ," ಎಂದು ಸುನಂ ದೆಗೆ ಅಂದರು. * * * *
ಬೀದಿಗಿಳಿದಾಗ ನೆರೆಹೊರೆಯವರು ಸುನಂದೆಯನ್ನೇ ನೋಡುತ್ತಿದ್ದರು. ಇತ್ತೀಚಿನ ಘಟನೆಗಳು ಅವರಿಗೆ ಗೊತ್ತಿರಲಿಲ್ಲವಾದರೂ ಸುನಂದೆಯನು ಗಂಡ ಬಿಟ್ಟಿರುವನೆಂಬುದು ತಿಳಿದಿತ್ತು ನಾಲಿಗೆಗೆ ನವೆ. ಮೂದಲಿಸಿ ಲೇವಡಿ ಮಾಡುವ ತವಕ.[ಯಾರಪ್ಪನ ಗಂಟು] ಆದರೆ ಸುನಂದೆಯ ನಯವಿನಯ್ನ ಸ್ನೇಹಪರತೆ, ಜತೆಯಲ್ಲಿ ಗಾಂಭೀರ್ಯ--ಅವರ ಬಾಯಿ ಮುಚ್ಚಿಸಿದುವು.
* * * *
ಸೋಮಶೇಖರ, ಹೆಂಡತಿ ಮತ್ತು ಮಗುವಿನೊಡನೆ ಒಗೆ ಸುನಂದೆಯ ಮನೆಗೆ ಬಂದ.