ಈ ಪುಟವನ್ನು ಪ್ರಕಟಿಸಲಾಗಿದೆ
ಹೊಸ ಬೆಳಕು
೧೯
- “ನನ್ನ ಜೀವನಕ್ಕೆ ಜ್ವರ ಬಂದಿತ್ತು"
- "ಜ್ವರ ಬಂದಾಗ ಜನ ಔಷಧಿ ತೆಗೆದುಕೊಳ್ಳುತ್ತಾರೆ !"
- "ಹೌದು ನನಗೂ ಔಷಧಿ ಸಿಕ್ಕಿತು. ತುಂಬಾ ಕಹಿ ಇತ್ತು ಜ್ವರವಾಸಿಯಾಯಿತು ! ”
- “ಔಷಧಿ ಕಹಿಯಾಗಿಯೇ ಇರುವುದು ! ಮೇಲೆ ಸಕ್ಕರೆ ತಿನ್ನುತ್ತಾರೆ !”
- "ನನಗೆ ಸಕ್ಕರೆ ಬೇಡ !”
- "ಮತ್ತೇನು ? "
- "ಬೆಲ್ಲ..."
ಉರಿಯುತ್ತಿದ್ದ ದೀಪವನ್ನು ಲೀಲಾಬಾಯಿ ಸಣ್ಣಗೆ ಮಾಡಿದರು. ಅಲ್ಲಿ ಪಸರಿಸಿದ ನಸುಗತ್ತಲೆ, ಅವರ ಸಂಸಾರಕ್ಕೆ ಹೊಸ ಬೆಳಕು ಕೊಟ್ಟಿತು.