ಈ ಪುಟವನ್ನು ಪ್ರಕಟಿಸಲಾಗಿದೆ
ಕೆಳಗಿನ ನೆರಳು.
- "ಟಪ್...ಟಪ್...ಟಪ್...."
ಟಾಯಿಪಿನ ಸಪ್ಪಳ ಅಲ್ಲಲ್ಲಿ ಕೇಳಬರುತ್ತಿತ್ತು. ಆದರೂ ಆಫೀಸಿನ ಉಳಿದೆಲ್ಲ ಕಾರಕೂನರು, ಒಂದೆಡೆಯಲ್ಲಿ ಕಲೆತು ಹರಟೆಯಾಡುತ್ತಿದ್ದರು, ಸಾಮಾನ್ಯವಾಗಿ ಆಫೀಸಿನಲ್ಲಿ ಹರಟೆಯೆಂದರೆ-ಸಿನಿಯಾರಿಟಿ ಗ್ರೇಡ್, ಸಸ್ಪೆಂಡ, ವಾರ್ನಿಂಗ-ಇತ್ಯಾದಿಗಳು. ಆದರೆ ಇಂದಿನ ಹರಟೆ ತುಂಬಾ ವಿಚಿತ್ರ ರೀತಿಯದಾಗಿತ್ತು.
ವಿಷಯ ಕಡೂರ ಸುಬ್ಬಣ್ಣನದಾಗಿತ್ತು. ಅವನ ಜತೆಯಲ್ಲಿ ವಾಸಂತಿಯ ಹೆಸರೂ ಕೇಳಬರತೊಡಗಿತ್ತು.
- "ಪಾಪ ಸುಬ್ಬನದೇನು ತಪ್ಪು. ಹೆಣ್ಣಿನ ಬಾಣಕ್ಕೆ ಬಲಿ ಬೀಳದ ಶುಕಮುನಿಗಳು ಈಗಿನ ದಿವ್ಸದಲ್ಲಿ ಸಿಕ್ತಾರೆಯೇ? "
- "ಸರಿಯಯ್ಯಾ ಸುಬ್ಬ ಅವಳ ಪಾಶದಲ್ಲಿ ಸಿಲುಕಿದ್ದರೂ, ತಾನಿನ್ನೂ ಪವಿತ್ರನಾಗಿಯೇ ಇದ್ದೆನೆ, ಅಂತ ಹೇಳ್ತಾನಯ್ಯಾ"
- "ಇದರಲ್ಲಿ ಸತ್ಯ ಇದ್ದರೂ ಇರಬಹುದು. "
- "ಏನಯ್ಯ ನೀನು ಕಣಿ ಹೇಳೋರ ಹಾಗೇ ಹೇಳ್ತಾ ಇದೀಯ. "
- "ನಾನು ಕಣಿ ಹೇಳುವವನಲ್ಲ, ನಾನು ಕವಿಯಾಗಿದ್ದೇನೆ. ರವಿ ಕಾಣದ್ದನ್ನೂ ಕವಿ ಕಾಣುತ್ತಾನೆ ಎಂಬ ಮಾತು ನಿನಗೆ ಗೊತ್ತಿಲ್ಲವೇ ?"
- "ಓಹೋ, ನೀನು ಕವಿ ಬೇರೆ ಆಗಿಬಿಟ್ಟಿದ್ದೀಯಾ ? ನೀನು ಯಾವಾಗಿನಿಂದ ಬರಿಯೋಕೆ ಪ್ರಾರಂಭಿಸಿದ್ದಿ?"
- "ಅಯ್ಯೋ ಇವನು ಬರೀತಾ ಇರೋದು ನಿಂಗೆ ಗೊತ್ತಿಲ್ಲವೇ ? ಬರದೂ ಬರದೂ ೩-೪ ಡಿಸ್ಪ್ಯಾಚ್ ಬುಕ್ ತೀರಿಸಿ ಬಿಟ್ಟಿದ್ದಾನಲ್ಲಾ.”
ಈ ಮಾತಿನ ಜತೆಯಲ್ಲಿ ನಗುವಿನ ದೊಡ್ಡ ತೆರೆ ಅಲೆ ಅಲೆಯಾಗಿ ಆಫೀ