ಪುಟ:Hosa belaku.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
"ಇದ್ದಿತು, ನನಗೆ ಜ್ಞಾಪಕವಿಲ್ಲ"
"ಸರಿಯಾಗಿದೆ. ಗಾಂಧಿ ನೆಹರೂರವರನ್ನು ಎಲ್ಲರೂ ಗುರುತಿಸುತ್ತಾರೆ. ಆದರೆ ಅವರು ಎಲ್ಲರನ್ನು ಗುರಿತುಸುವದು ಸಾಧ್ಯವೇ? ಅದು ಅವರ ತಪ್ಪಲ್ಲ."
"ಅದೆಲ್ಲ ಇರಲಿ, ನೀನ, ಮ್ಯಾಟಿಕ ಪರೀಕ್ಷೆಯಲ್ಲಿ ಪಾಸಾಗಿದ್ದೀಯಾ? ಚೆನ್ನಾದ ನಡತೆಯ ಬಗ್ಗೆ ಸರ್ಟಿಫಿಕೇಟ ತಂದೀದಿಯಾ? "
"ನನ್ನನ್ನು ತಾವೇ ಬಲ್ಲಿರಿ ಎಂದು ಎಲ್ಲಿಯೂ ಒಳ್ಳೇ ನಡತೆಯ ಸರ್ಟಿಫಿಕೇಟು ದೊರಕಿಸುವ ಗೋಜಿಗೆ ಹೋಗಲಿಲ್ಲಮೇಲಾಗಿ ಕಾಗದದ ಮೇಲೆ ಯಾರಾದರೂ ಬರೆದು ಕೊಟ್ಟಷ್ಟಕ್ಕೇ ನಡತೆ ಸರಿಯಾಗಿರುತ್ತೆ ಎಂದು ನನ್ನ ನಂಬಿಕೆ ಇಲ್ಲ."
"ಓಹೋ, ಇಷ್ಟುದ್ದದ ಮಾತೇ. ಇರಲಿ, ನಿನ್ನ ನಡತೆ ಸರಿಯಾಗಿರುವ ಬಗ್ಗೆ ಇಬ್ಬರು ಸದ್ಧಹಸ್ಪರ ಸರ್ಟಿಫಿಕೀಟುಗಳನ್ನು ಹಾಜರಪಡಿಸು. ಮುಂದೆ ವಿಚಾರಿಸುವಾ?"

ಧರ್ಮ ಮಾರ್ತಂಡ ಗೋಪಾಲಸ್ವಾಮಿಯವರ ನಿಶ್ವಯ ಸ್ವರದ ಉತ್ತರ ಕೇಳಿ ತಾನು ನಿರಾಶನಾಗಿ ಹೊರಳಿ ಜಡವಾದ ಹೆಜ್ಜೆಯನ್ನು ಹಾಕಿ ಹಿಂದೆ ಹೊರಳುವದರಲ್ಲಿದ್ದೆ. ಅಷ್ಟರಲ್ಲಿ ಸ್ವಾಮಿಯವರ ಮಗಳು ವನಜಾಕ್ಷಿ ಕಮಲದ ಹೂಗಳನ್ನು ಕೈಯಲ್ಲಿರಿಸಿಕೊಂಡು ಒಳಗಿನಿಂದ ಬಂದು

"ಸುಬ್ಬಾ- ಏಯ್ ಸುಬ್ಬಾ ಯವಾಗ ಬಂದೆ. ಮ್ಯಾಟ್ರಿಕ್ ಪಾಸಾದೆ ಅಂತೆ, ನಾನೂ ಪಾಸಾದೆ."

"ವನಜಾ" ಗೋಪಾಲಸ್ವಾಮಿಯವರು ಗುಡುಗಿದರು. ತಾಲ್ಲೂಕು ಆಫೀಸರನ ಮಗಳು ಒಬ್ಬ ಸಾಮಾನ್ಯ ಮನುಷ್ಯ- ಅದೂ ನವಕರಿ ಕೇಳಲು ಬಂದವನ ಜತೆಯಲ್ಲಿ ಮಾತನಾಡುತ್ತಿರವದು ಅವರಿಗೆ ಸರಿಬರಲಿಲ್ಲವೇನೋ? ವನಜಾ ಒಂದು ಸಲ ತಂದೆಯ ಕಡೆ ಹೊರಳಿ ನೋಡಿ:"ಅಪ್ಪಾ, ಸುಬ್ಬಾ ಇವನು" ಅವಳ ವಾಕ್ಯ ಪೂರ್ತಿ ಮುಗಿಯುವ ಮೊದಲೇ ಗೋಪಾಲಸ್ವಾಮಿಯು ಉತ್ತರಿಸಿದ್ದರು.

"ನನಗೆ ಅರ್ಥವಾಯ್ತು. ಸುಬ್ಬನೇ, ನೌಕರೀ ಕೇಳೋಕೆ ಬಂದೀದಾನೆ."