ಪುಟ:Hosa belaku.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೆಳಗಿನ ನೆರಳು

೩೧

ರಾರು ತಾನೇ–ಛೇ, ಅಲ್ಲ-ವಾಸಂತಿಯೋ-ಅವಳೂ ಅಲ್ಲ ಹಾಗಾದರೆ ಈ ಅನಿಷ್ಟಕ್ಕೆ ಧರ್ಮಮಾರ್ತಂಡ ಗೋಪಾಲಸ್ವಾಮಿಯವರು !-ಗೋಪಾಲಸ್ವಾಮಿ ಧರ್ಮಮಾರ್ತಂಡ-"

ಸಿಟ್ಟಿನ ಭರದಲ್ಲಿ ಸುಬ್ಬ “ಧರ್ಮ ಮಾರ್ತಂಡ”ರ ಹೆಸರಿನಿಂದ ಹಲ್ಲು ಕಡಿಯುವಾಗ ಅವನ ನಾಲಿಗೆ ಆ ಹಲ್ಲುಗಳ ನಡುವೆ ಸಿಕ್ಕು ಗಾಸಿಯಾಯಿತು. ಸುಬ್ಬ ನಕ್ಕ ಮಾತ್ರ. ಬಡವರ ಸಿಟ್ಟೆಂದರೆ ಹೀಗೆ. ಸುಬ್ಬ ತನ್ನ ಹಿಂದಿನ ದಿನಗಳನ್ನು ನೆನಿಸುವದನ್ನು ಒಮ್ಮೆಲೆ ನಿಲ್ಲಿಸಬೇಕಾಯಿತು---ಅದಕ್ಕೆ ಕಾರಣವೆಂದರೆ, ನವಯುವಕನೊಬ್ಬ ಅವನ ಎದುರಿನಲ್ಲಿ ಬರತೊಡಗಿದ್ದ. ಆ ನವಯುವಕ ತೀರ ಹತ್ತಿರ ಬಂದಾಗ, ಸುಬ್ಬ ಎದ್ದು ನಿಂತ.

“I can use him as my tool” ಎಂದು ಆ ವ್ಯಕ್ತಿ ತನ್ನಷ್ಟಕ್ಕೆ ತಾನೇ ಪುಟುಪುಟಿಸಿದ “ಏನಯ್ಯಾ, ತುಂಬಾ ದಣಿದಿದ್ದೀಯಾ?”
“ ಹೌದು ಸ್ವಾಮಿ, ನನಗೆ ತುಂಬಾ ದಣಿವು. ಏಳು ದಿನಗಳಿಂದ ಒಪ್ಪತ್ತೇ ಊಟ ಮಾಡುತ್ತಿದ್ದೇನೆ."
"ನಿಮ್ಮ ಊರು ಯಾವುದು?"
"ಬಡವರಿಗೆಲ್ಲ ಊರು ಇರ್‍ತಾವೇ?"
"ಊರಿಲ್ಲದಿದ್ದರೂ ಹೆಸರಾದರೂ ಇದೆ ಅಲ್ಲವೇ?"
"ನನ್ನ ಹೆಸರು ಸುಬ್ಬ."
"ಬೆಂಗಳೂರಿಗೆ ಬಂದು ಬಹಳ ದಿನವಾಯ್ತೋ?"
"ಇಲ್ಲಾ ಸ್ವಾಮಿ, ಏನಾದರೂ ಉದ್ಯೋಗ ದೊರಕಿಸಿಕೊಳ್ಳೋಣ ಅಂತಾ ಈಗ ಬಂದಿದ್ದೀನಿ.”
"ಸರಿ ಒಳ್ಳೇದಾಯ್ತು. ಇನ್ನೂ ಏನೂ ಉದ್ಯೋಗ ದೊರಕಿಲ್ಲವಷ್ಟೇ?"
"ಇಲ್ಲ ಸ್ವಾಮಿ."
"ಹಾಗಾದರೆ ನಮ್ಮಲ್ಲಿ ಒಂದು ಕೆಲ್ಸ ಆಗಬೇಕಾಗಿದೆ ಮಾಡುವಿಯಾ?"
"ದೇವರೇ ನನ್ನ ಹತ್ತಿರ ನಿಮ್ಮನ್ನು ಕಳಿಸಿದ್ದಾನೆ."
"ನಿನಗೆ ಕೈತುಂಬಾ ಹಣ ಕೊಡುವೆ. ನೀನು ಪ್ರಾಮಾಣಿಕನಾಗಿ ಕೆಲ್ಸ ಮಾತ್ರ ಮಾಡಬೇಕು."