ಈ ಪುಟವನ್ನು ಪ್ರಕಟಿಸಲಾಗಿದೆ
ಕೆಳಗಿನ ನೆರಳು
೩೧
ರಾರು ತಾನೇ–ಛೇ, ಅಲ್ಲ-ವಾಸಂತಿಯೋ-ಅವಳೂ ಅಲ್ಲ ಹಾಗಾದರೆ ಈ ಅನಿಷ್ಟಕ್ಕೆ ಧರ್ಮಮಾರ್ತಂಡ ಗೋಪಾಲಸ್ವಾಮಿಯವರು !-ಗೋಪಾಲಸ್ವಾಮಿ ಧರ್ಮಮಾರ್ತಂಡ-"
ಸಿಟ್ಟಿನ ಭರದಲ್ಲಿ ಸುಬ್ಬ “ಧರ್ಮ ಮಾರ್ತಂಡ”ರ ಹೆಸರಿನಿಂದ ಹಲ್ಲು ಕಡಿಯುವಾಗ ಅವನ ನಾಲಿಗೆ ಆ ಹಲ್ಲುಗಳ ನಡುವೆ ಸಿಕ್ಕು ಗಾಸಿಯಾಯಿತು. ಸುಬ್ಬ ನಕ್ಕ ಮಾತ್ರ. ಬಡವರ ಸಿಟ್ಟೆಂದರೆ ಹೀಗೆ. ಸುಬ್ಬ ತನ್ನ ಹಿಂದಿನ ದಿನಗಳನ್ನು ನೆನಿಸುವದನ್ನು ಒಮ್ಮೆಲೆ ನಿಲ್ಲಿಸಬೇಕಾಯಿತು---ಅದಕ್ಕೆ ಕಾರಣವೆಂದರೆ, ನವಯುವಕನೊಬ್ಬ ಅವನ ಎದುರಿನಲ್ಲಿ ಬರತೊಡಗಿದ್ದ. ಆ ನವಯುವಕ ತೀರ ಹತ್ತಿರ ಬಂದಾಗ, ಸುಬ್ಬ ಎದ್ದು ನಿಂತ.
- “I can use him as my tool” ಎಂದು ಆ ವ್ಯಕ್ತಿ ತನ್ನಷ್ಟಕ್ಕೆ ತಾನೇ ಪುಟುಪುಟಿಸಿದ “ಏನಯ್ಯಾ, ತುಂಬಾ ದಣಿದಿದ್ದೀಯಾ?”
- “ ಹೌದು ಸ್ವಾಮಿ, ನನಗೆ ತುಂಬಾ ದಣಿವು. ಏಳು ದಿನಗಳಿಂದ ಒಪ್ಪತ್ತೇ ಊಟ ಮಾಡುತ್ತಿದ್ದೇನೆ."
- "ನಿಮ್ಮ ಊರು ಯಾವುದು?"
- "ಬಡವರಿಗೆಲ್ಲ ಊರು ಇರ್ತಾವೇ?"
- "ಊರಿಲ್ಲದಿದ್ದರೂ ಹೆಸರಾದರೂ ಇದೆ ಅಲ್ಲವೇ?"
- "ನನ್ನ ಹೆಸರು ಸುಬ್ಬ."
- "ಬೆಂಗಳೂರಿಗೆ ಬಂದು ಬಹಳ ದಿನವಾಯ್ತೋ?"
- "ಇಲ್ಲಾ ಸ್ವಾಮಿ, ಏನಾದರೂ ಉದ್ಯೋಗ ದೊರಕಿಸಿಕೊಳ್ಳೋಣ ಅಂತಾ ಈಗ ಬಂದಿದ್ದೀನಿ.”
- "ಸರಿ ಒಳ್ಳೇದಾಯ್ತು. ಇನ್ನೂ ಏನೂ ಉದ್ಯೋಗ ದೊರಕಿಲ್ಲವಷ್ಟೇ?"
- "ಇಲ್ಲ ಸ್ವಾಮಿ."
- "ಹಾಗಾದರೆ ನಮ್ಮಲ್ಲಿ ಒಂದು ಕೆಲ್ಸ ಆಗಬೇಕಾಗಿದೆ ಮಾಡುವಿಯಾ?"
- "ದೇವರೇ ನನ್ನ ಹತ್ತಿರ ನಿಮ್ಮನ್ನು ಕಳಿಸಿದ್ದಾನೆ."
- "ನಿನಗೆ ಕೈತುಂಬಾ ಹಣ ಕೊಡುವೆ. ನೀನು ಪ್ರಾಮಾಣಿಕನಾಗಿ ಕೆಲ್ಸ ಮಾತ್ರ ಮಾಡಬೇಕು."