ಪುಟ:Hosa belaku.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨

ಕೆಳಗಿನ ನೆರಳು


ಪ್ರಾಮಾಣಿಕನಾಗಿರಬೇಕು ಎಂದಾಕ್ಷಣವೇ ಮೊದಲು ಸುಬ್ಬ ಅಂಜಿದ. ಒಮ್ಮೆ ಆ ಯುವಕನನ್ನು ನಖಶಿಖಾಂತ ದೃಷ್ಟಿಸಿದ.

ಅಂದವಾಗಿ ಬಾಚಿದ ತಲೆ, ಕುತ್ತಿಗೆಯಲ್ಲಿ ಟಾಯ್, ಸರ್ಜ ಸೂಟ ಬೂಟು ಇವುಗಳಿಂದ ಅಲಂಕೃತವಾದ ಯುವಕನನ್ನು ನೋಡಿ ಸುಬ್ಬನ ಸಂದೇಹ ಮಾಯವಾಯಿತು. ಪ್ರಾಮಾಣಿಕನಾಗಿರಬೇಕು ಎಂಬುವದರ ಅರ್ಥ, ಕಳ್ಳರು ತಮ್ಮ ಜತೆಯ ಕಳ್ಳರ ಜತೆಯಲ್ಲಿ ಪ್ರಾಮಾಣಿಕರಾಗಿರುತ್ತಾರೆ ಎಂಬ ಮಾತನ್ನು ಸುಬ್ಬ ಕೇಳಿದ್ದ. ಆ ಸಂದೇಹ ಅವನನ್ನು ಆಮಾತಿಗೆ ಹಚ್ಚಿತ್ತು.

ಇದನ್ನೆಲ್ಲ ವಿಚಾರಿಸುವ ಮೊದಲೇ ಸುಬ್ಬನ ಕೈಯಲ್ಲಿ ೧೦ರ ೫ ನೋಟುಗಳು ಬಂದವು. ಕೂಡಲೇ ಅವನ ಕಾಲುಗಳನ್ನು ಹಿಡಿದು ಅವನ ಉಪಕಾರವನ್ನು ಸ್ಮರಿಸಲಾ ಎಂದು ವಿಚಾರಿಸಿದ.

ಬಂದ ಯುವಕ ಸುಬ್ಬನಿಗೆ ತನ್ನನ್ನು ಹಿಂಬಾಲಿಸುವದಕ್ಕೆ ಹೇಳಿ ಟಾರ್ ರೋಡಿಗೆ ಇಳಿದ. ಇಬ್ಬರೂ ಬೆಂಗಳೂರ ಕ್ಯಾಂಟೋನ್‍ಮೆಂಟಿನ ಬಸ್ಸನ್ನು ಹಿಡಿದರು. ಬಸ್ಸು ರಸೆಲ್ ಮಾರ್ಕೆಟಿನ ಸ್ಟಾಂಡಿಗೆ ಬರುವದರಲ್ಲಿ ರಾತ್ರಿ ೮|| ಹೊಡೆದು ಹೋಗಿತ್ತು. ಬಸ್ಸಿನಿಂದ ಕೆಳಗಿಳಿಯುವ ಮೊದಲು ಸುಬ್ಬ ಆ ಯುವಕನಿಗೆ ತನ್ನ ಹೊಟ್ಟೆ ಹಸಿವಾದುದರ ಬಗ್ಗೆ ಹೇಳಿಕೊಂಡಿದ್ದ. "ಮನೆಯನ್ನಾದರೂ ಮುಟ್ಟುವಾ ನಡೆ. ಮಹಾರಾಜನ ಹಾಗೆ ಊಟ ಮಾಡಿ ವಿಶ್ರಾಮ ತೆಗೆದುಕೊಳ್ಳುವಿಯಂತೆ" ಎಂದು ಆ ಯುವಕ ಉತ್ತರಿಸಿವ. ಸುಬ್ಬ ನೇರವಾಗಿ ಯುವಕನನ್ನು ಹಿಂಬಾಲಿಸಿದ.

ಯುವಕ ರಸೆಲ್ ಮಾರ್ಕೇಟಿಗೆ ಬಂದು ಕೆವ್ಹಲರೀ ರೋಡಿಗೆ ಇಳಿದು, ಮುಂದೆ ಕಿರಿದಾದ ಓಣಿಯಲ್ಲಿ ಒಳನಡೆದು, ಮುಂದೆ ಆ ಕಿರಿದಾದ ಓಣಿಯಲ್ಲಿಯೇ ಒಂದು ದೊಡ್ಡ ಮನೆಗೆ ಬಂದು ನಿಂತ. ಮನೆಯ ಮುಂಬಾಗಿಲ ಹಾಕಿದ್ದಿತು. ಯುವಕ ಜವಾನನ ಹೆಸರನ್ನು ಕೂಗಿದ, ಜವಾನ ಬರುವ ಅವಧಿಯೊಳಗೇ ಸುಬ್ಬಣ್ಣ ಪ್ರಶ್ನಿಸಿದ:

"ರಾಯರೇ, ಇದು ತಮ್ಮ ಮನೆಯೇ?"

"ಹಾಗೇ ಅನ್ನಬಹುದು. ಕೆಲವೊಂದು ಕೆಲಸದ ಸಲುವಾಗಿ ಈ ಮನೆಯನ್ನು ಬಾಡಿಗೆಯಿಂದ ಹಿಡಿದಿದ್ದೇನೆ. ಒಂದು ತಿಂಗಳಾಯಿತು. ನನ್ನ ಸ್ವಂತ