ಪುಟ:Hosa belaku.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ಕೆಳಗಿನ ನೆರಳು

"ಬೆಂಗಳೂರಿನ ಉಲ್ಸೂರ ಹತ್ತಿರ ಒಬ್ಬ ಮನುಷ್ಯ ವ್ಯಭಿಚಾರದಿಂದ ಹುಟ್ಟಿದ ಕೂಸನ್ನು ಕೊಂದು ಕೆರೆಯಲ್ಲಿ ಒಗೆಯಲು ಬಂದಾಗ ಪೋಲೀಸರು ಅವನನ್ನ ಹಿಡಿದರು. ಹೆಚ್ಚಿನ ತಪಾಸಣಿಯಲ್ಲಿ ಅವನು ಚನ್ನಪಟ್ಟಣದ ಒಬ್ಬ ಗುಮಾಸ್ತನೆಂದೂ, ಅವನ ನಡತೆ ಸರಿಯಾಗಿರದ್ದಕ್ಕೆ ಅವನನ್ನು ಧರ್ಮಮಾರ್ತಂಡ ಗೋಪಾಲಸ್ವಾಮಿಯವರು ಡಿಸ್‌ ಮಿಸ್ ಮಾಡಿದ್ದರೆಂದೂ ಗೊತ್ತಾಗಿದೆ. ಅವನನ್ನು ಜೈಲಿಗೆ ಕರೆದೊಯ್ಯಲಾಯಿತು."

ಓದು ಮುಗಿಸಿದ ಧರ್ಮಮಾರ್ತಂಡ ಗೋಪಾಲಸ್ವಾಮಿಯವರು ಒಂದು ಸಲ ಗಹಗಹಿಸಿ ನಕ್ಕರು. ಆಗ ಅವರ ನಗು ಅಲೆ ಅಲೆಯಾಗಿ ಆಫೀಸಿನ ತುಂಬೆಲ್ಲ ಪ್ರತಿಧ್ವನಿಸಿತು. ಟಾಯಿಪ ಟೇಬಲ್ಲಿನ ಮೇಲೆ ಕುಳಿತ ವಾಸಂತಿಯ ಮೈಮೇಲೆ ಧರ್ಮಮಾರ್ತಂಡ ಗೋಪಾಲ ಸ್ವಾಮಿಯವರ ಕರೀ ನೆರಳು ಬಿದ್ದಿತ್ತು. ಗೋಪಾಲಸ್ವಾಮಿಯವರ ಕೆಳಗಿನ ನೆರಳು ವಾಸಂತಿಯ ಭವಿಷ್ಯವನ್ನೇ ಹಾಳುಮಾಡಿತ್ತು.