ಪುಟ:Hosa belaku.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೦

ಮತಾ೦ತರ

––ಖಟ್ಟೆ ಯನ್ನೇನೋ ನಾನು ಹುಮ್ಮಸದಿಂದ ಹಿಡಿದಿದ್ದೆ. ಆದರೆ,–– ಅವರು ತಂದ ಸುದ್ದಿಯಿಂದ ನನಗೆ ಸೋಲಿನ ಭಯ ಪ್ರಾರಂಭವಾಯಿತು. ನಿನ್ನಿನ ಪತ್ರಿಕೆಯಲ್ಲಿ ಆ ಸುದ್ದಿಯೂ ಪ್ರಕಟವಾಗಿತ್ತು,

"ಮಾಧ್ವರು ಮಹಮ್ಮದೀಯರಾದರು" ದಪ್ಪಕ್ಷರದ ಆ ಸುದ್ದಿಯಿಂದ ನನಗೆ ಗೆಲುವಿನ ಆಶೆ ಕಡಿಮೆಯಾಗತೊಡಗಿತು. ದೇಶಪಾಂಡೆ ಸರ್ವಸಾಧಾರಣವಾಗಿ 'ದ್ವಿಭಾರ್ಯಾ ಪ್ರತಿಬಂಧಕ' ಕಾಯ್ದೆಯ ಕಟಾಕ್ಷದೊಳಗಿಂದ ಪಾರಾಗಲು........?

ಈ ನನ್ನ ತಲೆ ತುರಿಸಿಕೊಳ್ಳುವ ಆಟ ನನ್ನ ಹೆಂಡತಿಗೆ ಸಹನವಾಗಲಿಲ್ಲವೇನೋ? ಒಮ್ಮೆಲೇ ಕೇಳಿದಳು.

"ನಲಿನಿ ಬರೆದಂತೆ ಜಹಗೀರದಾರರು ಈ ಕೇಸನ್ನು ನಿಮಗೆ ಒಪ್ಪಿಸಿದ್ದಾರೆಯೇ ?
"ಹೌದು."
"ಈಗ ಕೋರ್ಟಿನಲ್ಲಿ ಕೇಸು ನಡೆದಿದೆಯೇ?"
"ಇಲ್ಲ-ನಾಳಿನಿಂದ ಪ್ರಾರಂಭ."
"ನೀವು ಮಾತಿನಲ್ಲಿ ಉದಾಸೀನತೆ ತೋರಿಸ್ತಾ ಇದೀರಿ."
"ಈವರೆಗೆ ನನಗೆ ಸೋಲೆಂಬುದೇ ಗೊತ್ತಾಗಿರಲಿಲ್ಲ. ಆದರೆ ಇದರಲ್ಲಿ?"
"ಸಾಕು, ನೀವೆಲ್ಲಾ ಗಂಡುಸರು ಹೀಗೆನೆ.... ಅವನು ನಿಮ್ಮ ಬಾಲಮಿತ್ರ ಅದಕ್ಕೆ....?"

"ಅವನು ನನ್ನ ಮಿತ್ರ ನಿಜ, ಅವನ ಹೆಂಡತಿ ನಿನ್ನ ಗೆಳತಿ. ಆದರೆ ಕೋರ್ಟಿನಲ್ಲಿ ನಾನು ವಕೀಲ. ಕರ್ತವ್ಯಶೀಲ ಡಾಕ್ಟರ, ಶತ್ರುವಿಗೆ ಜ್ವರ ಬಂದಾಗ ಔಷಧದಲ್ಲಿ ವಿಷ ಬೆರಿಸಿ ಕೊಲ್ಲಬಹುದೇ?"

"ನನಗೆ ನಿಮ್ಮ ವಕೀಲಿ ಮಾತು ಒಂದೂ ಗೊತ್ತಾಗೋದಿಲ್ಲಾ. ಏನೇ ಆಗಲಿ. ಆ ನೀಚನಿಗೆ ಒಂದು ವರ್ಷಾದರೂ ಜೈಲಿಗೆ ಕಳಿಸಿ."

ಅನವಶ್ಯಕ ಮಾತುಗಳನ್ನು ಬೆಳಿಸುವದಕ್ಕಿಂತಲೂ ಪೂರ್ಣವಿರಾವನ್ನಿಡುವುದೇ ಲೇಸೆಂದು "ಹೂಂ” ಎಂದು ಹೇಳಿ ಎದ್ದುಬಿಟ್ಟೆ.