ವಿಷಯಕ್ಕೆ ಹೋಗು

ಪುಟ:KELAVU SANNA KATHEGALU.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹರಕೆಯ ಖಡ್ಗ
83
ಆದರೆ, ವ್ಯೂಹದಿಂದ ಹೊರಬರುವ ದಾರಿ ಯಾವುದು? ಯಾವುದು?
ಎರಡು ಗಂಟೆಗಲ ಕಾಲ ಅವ್ಯಾಹತ ಹೋರಾಟ.

ಧೋಂಡಿಯಾನ ಯೋಧರ ಸ್ಟೈರ್ಯ ಕ್ರಮೇಣ ಕುಸಿಯಿತು. ಕಾಣನಲ್ಲ ನಾಯಕ? (ಎಲ್ಲಿ ಮಹಾರಾಜರು?) ಆತನನ್ನು ಹೊತ್ತು ಮಿಂಚಿನಂತೆ ಸುಳಿಯುವ ಕಂದು ಬಣ್ಣದ ಕುದುರೆ ಎಲ್ಲಿ?

“ಮಹಾಪ್ರಭುಗಳು ಓಡ್‍ಹೋದ್ರು!”
(ಸುಳ್ಳು! ಸುಳ್ಳು!)
("ಓಡಿ! ಓಡಿ!")
(ನಿಲ್ಲಿರೋ ನಿಲ್ಲಿರೋ ನನ್ಮಕ್ಕಳ್ರಾ!!”)

ಗಾಯಗೊಂಡು ಬಿದ್ದಿದ್ದ ಮಹಾರಾಜರ ದೇಹ ನೆಲದ ಮೇಲೆ, ಶವಗಳ ನಡುವೆ, ತೆವಳುತ್ತಿತ್ತು.

ಅರಿರುವ ಗಂಟಲಿಗೆ ಎಲ್ಲಿಂದಾದರೂ ಒಂದಿಷ್ಟು ನೀರು?

****

ನೀರು, ನೀರೂ ನೀರೂ...

ತುಂಗಾ-ಭದ್ರಾ ತುಂಗಭದ್ರಾ...ವರದಾ...ಕೃಷ್ಣಾ...ಮಲಪ್ರಭಾ... ಮಹಾಪೂರಗಳಲ್ಲಿ ಈಸಿದೆ.ಬಾನೊಡೆದು ಸುರಿದ ಕೋಡಿಮಳೆಯಲ್ಲಿ ತೋಯಿಸಿಕೊಂಡೆ. ಈಗ ಕುಡಿಯಲೂ ನೀರಿಲ್ಲ.

ನೀಲು, ನೀರೂ ನೀರೂ...
“ಎರಡು ಲೋಕಗಳ ಅರಸ ಎಂದು ಕರೆದುಕೊಂಡ ನನಗೆ-”
“ಮಂತ್ರಿ ತಿಪ್ಪಯ್ಯಾ!"

“ಮಹಾಪ್ರಭೂ....” “ಗೊಣಗ್ತಿದೀಯಲ್ಲ, ಏನದು?” “ಏನಿಲ್ಲ, ಏನಿಲ್ಲ" “ಬೊಗಳೋ!” “ಇಹ್ಹಿ!” - - - “ನಾಚೈ ನನ್ಮಗ್ನಿಗೆ-ಮಂತ್ರಿ ಪದವಿಯಿಂದ ನಿನ್ನನ್ನ ಬರ್ತಫ್ ಮಾಡೇನು, ಹುಷಾರ್!”

“ಮಹಾಪ್ರಭುಗಳು-”
"ಏನು?"
“ಈರೇಳು ಲೋಕಗಳ ಮಾರಮಣ ಅಂತ ಹೆಸರಿಟ್ಟುಕೊಂಡರೆ...”