ಪುಟ:KELAVU SANNA KATHEGALU.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹರಕೆಯ ಖಡ್ಗ

87

ಗಂಟ ಉಣ್ಣು, ನೀಡತೀನಿ, ಹಸಿವು ಇ೦ಗೋ ಮಟ ಉಣ್ಣು.”

“ನನ್ನ ಹಸಿವು ಹಿಂಗಬೇಕಾದರೆ ಫರಂಗಿಯೋರನ್ನ ಈ ದೇಶದಿಂದ ಓಡಿಸಬೇಕು, ಬಸವಿ.”

“ಸಾವಿರ ಕುದುರೆ ಸರದಾರ, ಓಡಿಸೀಯಂತೆ.”
“ಬಾ. . . .”
“ಬಂದ್ನಿ ರಾಜ...”
ಹಸಿವು, ನೀರಡಿಕೆ...
ಆಹಾರವಲ್ಲ. ಒಂದು ಗುಟುಕು ನೀರು...

****

ನೀರು, ನೀರೂ ನೀರೂ....
ಬಾ ಅಂದರು.

ಸುಲ್ತಾನರು ಸೈನ್ಯದಲ್ಲಿ ಭಡತಿ ಕೊಡುತಾರೆ, ದಳಪತಿ ಮಾಡುತಾರೆ.... ನಿನ್ನ ಮೇಲೆ ಸುತರಾಂ ಸಿಟ್ಟಿಲ್ಲ.

ತಾನು ಬಂದೆ. ಬರಬಾರದಾಗಿತ್ತು, ಬಂದೆ.
ಒಮ್ಮೆ ಪಟ್ಟಣ ಸೇರಿದ ಮೇಲೆ ಕಿವಿಗೆ ಬಿದ್ದ ರಾಗ ಬೇರೆಯೇ.

ಒಂಟಿ ಸಲಗನಾಗಬೇಡ-ಎಂದರು ಗೆಳೆಯರು. ಚನ್ನಗಿರಿಯಿಂದ ಹೆಣ್ಣು ತಂದು ಮದುವೆಯಾಯಿತು.

ದೂರು. ಚಾಡಿ. ಯಾರದೋ ಮಸಲತ್ತು,

ಗಂಡು ಮಗುವಿಗೆ ತಂದೆಯಾದೆ ಎಂದು ಸಡಗರ, ಇಲ್ಲಿ ತನ್ನ ಬದುಕು ವ್ಯರ್ಥವಾಗುತ್ತಿದೆಯಲ್ಲ ಎಂಬ ದುಗುಡ.

ಒಂದು ದಿನ...

ಹಿಡಿದು ಕೈಕಾಲುಗಳನ್ನು ಕಟ್ಟಿ ಕೆಡವಿದರು, ತಲೆ ಬೋಳಿಸಿದರು.

“ಧಾರವಾಡದಲ್ಲಿ ಆಳಬೇಕೂಂತಿದ್ದೆಯಾ? ಇದು ನಿನಗೆ ಶಿಕ್ಷೆ. ಇನ್ನು ನಿನ್ನ ಹೆಸರು ಗುಲಾಮ್.”

“ನನ್ನ ಹೆಸರು ಧೋಂಡಿಯಾ!”

ದೇಹ ಜರ್ಜರಿತವಾಗುವಂತೆ ಹೊಡೆದರು. ಮೂರ್ಛೆ ಹೋದವನನ್ನು ಸೆರೆಮನೆಗೆ ಎಸೆದರು. ఆల్లి ಮುಖಕ್ಕೆ ನೀರೆರಚಿದರು.

ನೀರೆರಚಿದರು.
ನೀರು....

****