ಪುಟ:KELAVU SANNA KATHEGALU.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಹರಕೆಯ ಖಡ್ಗ

89

ನೀರಿಗಾಗಿ ಬಾವಿ ತೋಡುತ್ತಿದ್ದೇನೆ. ಕನಸು.
ನೆನಸು? ಹಳೆಯ ನೆನಪು?
ಪಟ್ಟಣದಿಂದ ತಪ್ಪಿಸಿಕೊಂಡು ಬಂದವನು ಶಿಕಾರಿಪುರದ ದೇವಾಲಯದಲ್ಲಿ

ಪೂಜೆ ಸಲ್ಲಿಸಿದೆ.

ಸಂಗಡಿಗರು ರಾಜ ಖಡ್ಗವನ್ನು ತಂದರು. ಅದನ್ನು ಎತ್ತಿ ಬಳಸ ಬಲ್ಲ

ವನು ಧೊಂಡಿಯಾ ಒಬ್ಬನೇ.

"“ಮಂಗಳಾರತಿಯಾಗುತ್ತಿದೆ.”
“ಹ್ಞ."
“ಹರಕೆಗಳಿದ್ದರೆ...”
“ಹ್ಞ, ಮೈಸೂರನ್ನು, ಕರ್ನಾಟಕವನ್ನು ಸ್ವತಂತ್ರಗೊಳಿಸುತ್ತೇನೆ.

ಮರಾಠರನ್ನು ಕೃಷ್ಣಯಾಚೆಗೆ, ಆಂಗ್ಲರನ್ನು ಕಡಲಿನಾಚೆಗೆ ಅಟ್ಟುತ್ತೇನೆ. ಎಲ್ಲ ವೈರಿಗಳಿಗೆ ನೀರು ಕುಡಿಸುತ್ತೇನೆ. ದೇವರ ಸಾಕ್ಷಿಯಾಗಿ ಈ ಖಡ್ಗವನ್ನೀಗ ಎತ್ತಿಕೊಳ್ಳುವೆ. ಯತ್ನ ಯಶಸ್ವಿಯಾಯಿತೆಂದರೆ ದೇವಾಲಯಕ್ಕೆ ಬಂಗಾರದ ಕಳಶವಿಡಿಸುತ್ತೇನೆ.”

“ಹಾಗೆಯೇ ಆಗಲಿ.”
ಗುರಿ ಸಾಧಿಸಬೇಕು. ಹರಕೆ ಸಲ್ಲಿಸಬೇಕು.
“ಎಲ್ಲ ವೈರಿಗಳಿಗೆ ನೀರು ಕುಡಿಸು....”

****

ನೀರು, ನೀರೂ ನೀರೂ...
ಸಾವಿನ ಸಮ್ಮುಖದಲ್ಲಿರುವ ಎರಡು ಲೋಕಗಳ ಅರಸನಿಗೆ ನೀರು....
ಸಾವಿನ ಸಮ್ಮುಖ?
ಅದು ಸುಳ್ಳು. ಇದು ಹೊಸ್ತಿಲು. ವಿಜಯದ ಹೊಸ್ತಿಲಲ್ಲಿರುವ ಎರಡು

ಲೋಕಗಳ ಅರಸನಿಗೆ ಒಂದು ಗುಟುಕು ನೀರು ಬೇಕು, ನೀರು.

ಬಗ್ಗಿ, ಬಗ್ಗಿ ಬರುತ್ತಿರುವ ಈತ ಯಾರು? ಇವನು ಹುಡುಕುತ್ತಿರು

ವುದು ಯಾರನ್ನು ? ದೊರೆ ಧೊಂಡಿಯಾನನ್ನು ಹಿಡಿದು ಆಂಗ್ಲರಿಗೆ ಕೊಡುವ ಆಸೆಯೋ?

ತಾನು ಕಣ್ಣು ಮುಚ್ಚಿಕೊಳ್ಳಬೇಕು; ಸತ್ತವನಂತೆ ನಟಿಸಬೇಕು.
(ನಟಿಸುವುದೇನು ಬಂತು? ವಾಸ್ತವವಾಗಿ ತಾನು ಸತ್ತೇ ಇಲ್ಲವೆ? ಹೊಟ್ಟೆ
12