ಪುಟ:KELAVU SANNA KATHEGALU.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

92

ಕತೆಗಾರನ ಟಿಪ್ಪಣಿ

ಬಾಪೂಜಿ! ಬಾಪೂ!

ಕತೆಯ ಮೊದಲ ಪ್ರಕಟಣೆ ೧೯೪೧ರಲ್ಲಿ, ಮಂಗಳೂರಿನ 'ರಾಷ್ಟ್ರಬಂಧು'
ಸಾಪ್ತಾಹಿಕದಲ್ಲಿ.
ಗಾಂಧಿಜಿಯ ಕೊಲೆಯಾದದ್ದು ೧೯೪೮ ರಲ್ಲಿ. ಆದರೆ, ಅದಕ್ಕೂ ಏಳು
ವರ್ಷ ಮೊದಲೇ ಬರೆದ ನನ್ನ ಕತೆಯಲ್ಲಿ ಅವರು ದಿವಂಗತರಾಗಿದ್ದರು;
ದೇಶಕ್ಕೆ ಸ್ವಾತಂತ್ರ್ಯವೂ ಬಂದಿತ್ತು! ಶೀರ್ಷಿಕೆಯ ಕೆಳಗೆ ದಪ್ಪಕ್ಷರದಲ್ಲಿ
ಗಾಂಧೀಜಿ ಶತಾಯುವಾಗಲೆಂಬ ಆಶಯದೊಡನೆ ಎಂದೂ
ಬರೆದಿದ್ದೆ.
ಕತೆಯನ್ನು ಮೊಳೆ ಜೋಡಿಸಿ ಪುಟ ಕಟ್ಟಿದರು. ಅದರ ಪ್ರೂಫ್ ಸಹಾ
ಯಕ ಸಂಪಾದಕ ಶ್ರೀ ಕೆ. ಕೃಷ್ಣರಾಯರ ಬಳಿಗೆ ಹೋಯಿತು. ಬದುಕಿ
ರುವಾಗಲೇ ಗಾಂಧಿಜಿಯನ್ನು ಪ್ರೇತಾತ್ಮ ಮಾಡುವುದೆಂದರೆ? ಅವರು
ಆಕ್ಷೇಪಿಸಿದರು. ಪುಟ, ಸಂಜೆ, ಸಂಪಾದಕರ ಮನೆಗೆ ಹೋಯಿತು.ಮರು
ದಿನ ಬೆಳಗ್ಗೆ ಕಾರ್ಯಾಲಯಕ್ಕೆ ಬಂದ ಶ್ರೀ ಕಡೆಂಗೋಡ್ಲು ಶಂಕರ
ಭಟ್ಟರು ಮುಗುಳುನಗುತ್ತ “ಏನುಕೃಷ್ಣರಾಯರೆ?ಗಾಂಧಿಜಿ ಸಾಯೋದೇ
ಇಲ್ವೊ?” ಎಂದರು.
ಉಪ ಸಂಪಾದಕ ಬರೆದ ಈ ಕತೆ ಅಚ್ಚಾಯಿತು.

ಎಣ್ಣೆ! ಚಿಮಿಣಿ ಎಣ್ಣೆ!

ಬ್ರಿಟಿಷ್ ಸರಕಾರದ ಕೆಂಗಣ್ಣಿಗೆ ಗುರಿಯಾದ ಮೊದಲ ಕನ್ನಡಕತೆ ಇದು.
ನನಗೆ ಗೊತ್ತಿರುವಷ್ಟರ ಮಟ್ಟಿಗೆ. ಪ್ರಥಮ ಪ್ರಕಟಣೆ ೧೯೪೨ ಆಗಸ್ಟ್
೨ರ 'ರಾಷ್ಟ್ರಬಂಧು'ವಿನಲ್ಲಿ. ಪ್ರಕಟವಾದ ಎರಡು ಮೂರು ದಿನಗಳಲ್ಲೆ
ದಕ್ಷಿಣ ಕನ್ನಡದ ಐ.ಸಿ.ಎಸ್. ಕಲೆಕ್ಟರು ಸಂಪಾದಕರನ್ನು ಕರೆಸಿದರು.
ಕತೆಯಾಗಲೇ ಇಂಗ್ಲಿಷಿಗೆ ಭಾಷಾಂತರಗೊಂಡು ಕಲೆಕ್ಟರರ ಮುಂದಿತ್ತು.
ಕಲೆಕ್ಟರ್ ಎಚ್ಚರಿಕೆಯ ನುಡಿ ಆಡಿ ಸಂಪಾದಕರನ್ನು ಹೋಗಗೊಟ್ಟರು.