ಈ ಪುಟವನ್ನು ಪರಿಶೀಲಿಸಲಾಗಿದೆ
92
ಕತೆಗಾರನ ಟಿಪ್ಪಣಿ
ಬಾಪೂಜಿ! ಬಾಪೂ!
- ಕತೆಯ ಮೊದಲ ಪ್ರಕಟಣೆ ೧೯೪೧ರಲ್ಲಿ, ಮಂಗಳೂರಿನ 'ರಾಷ್ಟ್ರಬಂಧು'
- ಸಾಪ್ತಾಹಿಕದಲ್ಲಿ.
- ಗಾಂಧಿಜಿಯ ಕೊಲೆಯಾದದ್ದು ೧೯೪೮ ರಲ್ಲಿ. ಆದರೆ, ಅದಕ್ಕೂ ಏಳು
- ವರ್ಷ ಮೊದಲೇ ಬರೆದ ನನ್ನ ಕತೆಯಲ್ಲಿ ಅವರು ದಿವಂಗತರಾಗಿದ್ದರು;
- ದೇಶಕ್ಕೆ ಸ್ವಾತಂತ್ರ್ಯವೂ ಬಂದಿತ್ತು! ಶೀರ್ಷಿಕೆಯ ಕೆಳಗೆ ದಪ್ಪಕ್ಷರದಲ್ಲಿ
- ಗಾಂಧೀಜಿ ಶತಾಯುವಾಗಲೆಂಬ ಆಶಯದೊಡನೆ ಎಂದೂ
- ಬರೆದಿದ್ದೆ.
- ಕತೆಯನ್ನು ಮೊಳೆ ಜೋಡಿಸಿ ಪುಟ ಕಟ್ಟಿದರು. ಅದರ ಪ್ರೂಫ್ ಸಹಾ
- ಯಕ ಸಂಪಾದಕ ಶ್ರೀ ಕೆ. ಕೃಷ್ಣರಾಯರ ಬಳಿಗೆ ಹೋಯಿತು. ಬದುಕಿ
- ರುವಾಗಲೇ ಗಾಂಧಿಜಿಯನ್ನು ಪ್ರೇತಾತ್ಮ ಮಾಡುವುದೆಂದರೆ? ಅವರು
- ಆಕ್ಷೇಪಿಸಿದರು. ಪುಟ, ಸಂಜೆ, ಸಂಪಾದಕರ ಮನೆಗೆ ಹೋಯಿತು.ಮರು
- ದಿನ ಬೆಳಗ್ಗೆ ಕಾರ್ಯಾಲಯಕ್ಕೆ ಬಂದ ಶ್ರೀ ಕಡೆಂಗೋಡ್ಲು ಶಂಕರ
- ಭಟ್ಟರು ಮುಗುಳುನಗುತ್ತ “ಏನುಕೃಷ್ಣರಾಯರೆ?ಗಾಂಧಿಜಿ ಸಾಯೋದೇ
- ಇಲ್ವೊ?” ಎಂದರು.
- ಉಪ ಸಂಪಾದಕ ಬರೆದ ಈ ಕತೆ ಅಚ್ಚಾಯಿತು.
ಎಣ್ಣೆ! ಚಿಮಿಣಿ ಎಣ್ಣೆ!
- ಬ್ರಿಟಿಷ್ ಸರಕಾರದ ಕೆಂಗಣ್ಣಿಗೆ ಗುರಿಯಾದ ಮೊದಲ ಕನ್ನಡಕತೆ ಇದು.
- ನನಗೆ ಗೊತ್ತಿರುವಷ್ಟರ ಮಟ್ಟಿಗೆ. ಪ್ರಥಮ ಪ್ರಕಟಣೆ ೧೯೪೨ ಆಗಸ್ಟ್
- ೨ರ 'ರಾಷ್ಟ್ರಬಂಧು'ವಿನಲ್ಲಿ. ಪ್ರಕಟವಾದ ಎರಡು ಮೂರು ದಿನಗಳಲ್ಲೆ
- ದಕ್ಷಿಣ ಕನ್ನಡದ ಐ.ಸಿ.ಎಸ್. ಕಲೆಕ್ಟರು ಸಂಪಾದಕರನ್ನು ಕರೆಸಿದರು.
- ಕತೆಯಾಗಲೇ ಇಂಗ್ಲಿಷಿಗೆ ಭಾಷಾಂತರಗೊಂಡು ಕಲೆಕ್ಟರರ ಮುಂದಿತ್ತು.
- ಕಲೆಕ್ಟರ್ ಎಚ್ಚರಿಕೆಯ ನುಡಿ ಆಡಿ ಸಂಪಾದಕರನ್ನು ಹೋಗಗೊಟ್ಟರು.